ಭಕ್ತನಿಗೆ ಲಡ್ಡು ಜೊತೆ ಲಕ್ಷಗಟ್ಟಲೆ ಹಣ, ಇದು ಮಾದೇಶ್ವರನ ಪ್ರಸಾದವಾ, ಸಿಕ್ಕಿದ್ದು ಸೀರುಂಡೆಯಾ?
ಚಾಮರಾಜನಗರ, ಜುಲೈ, 29: ಭೀಮನ ಅಮಾವಾಸ್ಯೆ ಹಿನ್ನೆಲೆ ಗುರುವಾರ ಮಲೆಮಹಾದೇಶ್ವರ ಬೆಟ್ಟದಲ್ಲಿ ಭಕ್ತಸಾಗರವೇ ನೆರೆದಿತ್ತು. ಈ ಸಂದರ್ಭದಲ್ಲಿ ಪ್ರಸಾದದ ಜೊತೆಗೆ 2.91 ಲಕ್ಷ ಹಣವನ್ನು ಕೂಡ ಭಕ್ತನೋರ್ವನಿಗೆ ನೀಡಿರುವುದು ಬೆಳಕಿಗೆ ಬಂದಿದೆ. ಕೆಲಸದ ಒತ್ತಡದಲ್ಲಿ ಈ ಎಡವಟ್ಟು ಆಗಿದೆ ಎಂದು ಅಲ್ಲಿನ ಕೆಲವರ ವಾದವಾಗಿದೆ.
ಕೆಲಸದಲ್ಲಿನ ಒತ್ತಡ ಯಾವ ರೀತಿ ಪರಿಸ್ಥಿತಿ ತರುತ್ತದೇ ಎಂಬುದಕ್ಕೆ ಇದೊಂದು ಉದಾಹರಣೆ. ಪ್ರಸಾದದ ಜೊತೆ ಹಣವನ್ನೂ ಭಕ್ತನಿಗೆ ಕೊಟ್ಟಿರುವ ಘಟನೆ ಪ್ರಸಿದ್ಧ ತೀರ್ಥಕ್ಷೇತ್ರ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.
ತೀರ್ಥ ಕುಡಿಯುವಾಗ ಕೃಷ್ಣನ ಮೂರ್ತಿಯನ್ನೇ ನುಂಗಿದ ಭಕ್ತ!
ಗುರುವಾರ ಭೀಮನ ಅಮಾವಾಸ್ಯೆ ಇದ್ದುದ್ದರಿಂದ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತಸಾಗರವೇ ಹರಿದುಬಂದಿತ್ತು. ಈ ವೇಳೆ ಭಕ್ತನೋರ್ವ ಸ್ವೀಕರಿಸಲು ಬಂದಾಗ ಅಲ್ಲಿನ ಸಿಬ್ಬಂದಿ ಪ್ರಸಾದದ ಜೊತೆ 2.91 ಲಕ್ಷ ರೂಪಾಯಿಯನ್ನು ಕೊಟ್ಟು ಎಡವಟ್ಟು ಮಾಡಿಕೊಂಡಿದ್ದಾರೆ. ರಾಜಗೋಪುರ ಬಳಿ ವಿಶೇಷ ದರ್ಶನ ಪಡೆಯುವ ಕೌಂಟರ್ನಲ್ಲಿ ಹಣ ಹೋಗಿರುವ ಘಟನೆ ನಡೆದಿದೆ.
ಕರ್ತವ್ಯ
ನಿರ್ವಹಿಸುತ್ತಿದ್ದ
ಅಲ್ಲಿನ
ಸಿಬ್ಬಂದಿಯೊಬ್ಬರು
ಭಕ್ತರಿಗೆ
ವಿಶೇಷ
ದರ
ಟಿಕೇಟ್
ನೀಡಿ
ಲಾಡು
ಪ್ರಸಾದ
ನೀಡಿದ್ದಾರೆ.
ಲಾಡು
ಪ್ರಸಾದ
ಇಟ್ಟಿದ್ದ
ಬ್ಯಾಗ್
ಸಮೀಪ
ಹಣವನ್ನು
ಸಹ
ಇಟ್ಟಿದ್ದ
ಹಿನ್ನಲೆ
ಹಣ
ಸಹಿತ
ಬ್ಯಾಗ್
ಅನ್ನು
ಭಕ್ತನೊರ್ವನಿಗೆ
ನೀಡಿ
ಎಡವಟ್ಟು
ಮಾಡಿಕೊಂಡಿದ್ದಾರೆ.
ಇದಾದ
ಬಹಳ
ಹೊತ್ತಿನ
ನಂತರ
ಹಣ
ಕಾಣಿಸದಿರುವುದು
ಗೊತ್ತಾದ
ಮೇಲೆ
ಹುಡುಕಾಟ
ಶುರು
ಮಾಡಿದ್ದಾರೆ.
ಸಿಸಿಟಿವಿ
ಪರಿಶೀಲಿಸಿದ
ವೇಳೆ
ಸಿಬ್ಬಂದಿಯ
ಕಣ್ಣಪ್ಪಿನಿಂದ
ಲಾಡು
ಜೊತೆ
ದುಡ್ಡು
ಹೋಗಿರುವುದು
ಬೆಳಕಿಗೆ
ಬಂದಿದೆ.
ಪ್ರಾಧಿಕಾರದ ಬೊಕ್ಕಸಕ್ಕೆ 2.91 ಲಕ್ಷ ನಷ್ಟವಾದ ಹಣವನ್ನು ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂಧಿಯಿಂದಲೇ ಜಮಾ ಮಾಡಿಸಲು ತಾಕೀತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ದೇವಾಸ್ಥಾನದಲ್ಲಿ ಹಣದ ಹುಂಡಿಯಲ್ಲಿ ಕಳ್ಳತನ ಆಗುವುದನ್ನು ಕೇಳಿದ್ದೇವೆ. ಆದರೆ ಚಾಮರಾಜನರದ ಮಲೆಮಹಾದೇಶ್ವರ ಬೆಟ್ಟದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹಣದ ಬ್ಯಾಗ್ ಅನ್ನು ಪ್ರಸಾದದ ಪಕ್ಕದಲ್ಲಿ ಇಟ್ಟಿದ್ದೆವು ಅದನ್ನು ಯಾರೋ ಭಕ್ತರು ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕಳೆದು ಹೋದ ಹಣವನ್ನೆಲ್ಲ ಕಟ್ಟುವಂತೆ ಕರ್ತವ್ಯ ನಿರ್ಹಿಸುತ್ತಿದ್ದ ಸಿಬ್ಬಂದಿಯ ಮೇಲೆ ಹೊರಿಸಿದ್ದಾರೆ ಅನ್ನುವ ಮಾತುಗಳು ಕೇಳಿಬರುತ್ತಿವೆ.
Recommended Video