ಟ್ರೂ ಕಾಲರ್ ನ ಮೆಸೆಂಜರ್ ಎಂಬ 'ಸ್ಮಾರ್ಟ್' ಅಪ್ಲಿಕೇಷನ್
ಬೆಂಗಳೂರು, ಜುಲೈ 22: ಸ್ಮಾರ್ಟ್ ಫೋನ್ ಬಳಕೆದಾರರಲ್ಲಿ ಜನಪ್ರಿಯತೆ ಗಳಿಸಿರುವ ಆಪ್ಲಿಕೇಷನ್ ಪೈಕಿ ಟ್ರೂ ಕಾಲರ್ ಕೂಡಾ ಒಂದು. ಸ್ಪಾಮ್ ಕರೆಗಳು, ಕಿರಿಕಿರಿ ಕಾಲರ್ ಗಳ ಬಗ್ಗೆ ಸೂಚನೆ ನೀಡುವ ಈ ಅಪ್ಲಿಕೇಷನ್ ಎಲ್ಲರಿಗೂ ಗೊತ್ತಿದೆ. ಈಗ ಟ್ರೂ ಕಾಲರ್ ನಿಂದ ಮೆಸೆಂಜರ್ ಕೂಡಾ ಬಂದಿದ್ದು, ಹೊಸ ಸಾಧ್ಯತೆಗಳನ್ನು ತೋರಿಸುತ್ತಿದೆ.
ಅನಾಮಿಕ ಕರೆ, ಸ್ಪಾಮ್ ಕರೆಗಳನ್ನು ನಿಯಂತ್ರಿಸಲು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್ ) ಕೂಡಾ ಕೆಲ ಸೌಲಭ್ಯಗಳನ್ನು ನೀಡಿದೆ. ಮಾರ್ಕೆಟಿಂಗ್ ಕರೆ ಕಿರಿಕಿರಿಯನ್ನು ತಪ್ಪಿಸಿಕೊಳ್ಳಲು ಇದು ಸೂಕ್ತ ಎನ್ನಬಹುದು.
ಅದರೆ, ಟ್ರಾಯ್ ವೆಬ್ ತಾಣ, ಅದರಲ್ಲಿನ ಅರ್ಜಿ, ಮಾರ್ಕೆಟಿಂಗ್ ಕರೆ ವಿರುದ್ಧ ದೂರು ನೀಡಬೇಕಾದಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಯಾರಿಗೆ ಪುರುಸೊತ್ತಿದೆ ಹೇಳಿ, ಇಂಥ ಸಂದರ್ಭದಲ್ಲಿ ಸ್ವೀಡನ್ ಮೂಲದ ಟ್ರೂ ಕಾಲರ್ ಎಲ್ಲರ ನೆರವಿಗೆ ಬಂದಿತು.
ಅದರಲ್ಲೂ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಉಳ್ಳ ಸಾಧನಗಳಲ್ಲಿ ಇರಲೇಬೇಕಾದ ಅಪ್ಲಿಕೇಷನ್ ಗಳ ಪೈಕಿ ಅಗ್ರಸ್ಥಾನ ಗಳಿಸಿತು. ಇದಾದ ಬಳಿಕ ಟ್ರೂ ಡಯಲರ್ ಕೂಡಾ ಬಂದರೂ ಅಷ್ಟಾಗಿ ಜನಪ್ರಿಯತೆ ಗಳಿಸಲಿಲ್ಲ. ಜೊತೆಗೆ ಟ್ರೂ ಕಾಲರ್ ಅಷ್ಟು ಸುರಕ್ಷಿತವಲ್ಲ. ನಿಮ್ಮ ಖಾಸಗಿ ಮಾಹಿತಿ ಸೋರಿಕೆಯಾಗುತ್ತದೆ ಎಂಬ ಕೂಗು ಕೇಳಿ ಬಂದಿತ್ತು.

ಖಾಸಗಿ ಮಾಹಿತಿ ನೀಡಿದ್ದರೆ ಹಿಂಪಡೆಯಿರಿ
ಇದಕ್ಕೂ ಪರಿಹಾರ ಸೂಚಿಸಲಾಯಿತು. ಟ್ರೂ ಕಾಲರ್ ವೆಬ್ ಸೈಟ್ ಗೆ ಹೋಗಿ ನಿಮ್ಮ ಖಾಸಗಿ ಮಾಹಿತಿ ಇನ್ನಿತರ ಬೇಡದ ವಿವರಗಳನ್ನು ತೆಗೆದು ಹಾಕಿದರೆ ಸಾಕು ಎಂಬ ಉತ್ತರವೂ ಸಿಕ್ಕಿತು. ಈಗ ಟ್ರೂ ಮೆಸೆಂಜರ್ ಬಂದಿದ್ದು ಚಾಲ್ತಿಯಲ್ಲಿರುವ ಎಸ್ಎಂಎಸ್ ವ್ಯವಸ್ಥೆಯನ್ನೇ ಬದಲಾಯಿಸುವ ಕುರುಹು ತೋರಿದೆ.

ಸ್ಪಾಮ್ ಮುಕ್ತ ಸಂದೇಶ
ಟ್ರೂ ಕಾಲರ್ ನಂತೆ ಟ್ರೂ ಮೆಸೆಂಜರ್ ಕೂಡಾ ಕಾರ್ಯ ನಿರ್ವಹಿಸಲಿದ್ದು, ಅನಾಮಿಕ ಸಂಖ್ಯೆಯಿಂದ ಬೇಡದ ಸಂದೇಶಗಳು ಬರುವುದನ್ನು ನಿಲ್ಲಿಸಬಹುದು. ಸ್ಪಾಮ್ ಡೇಟಾಬೇಸ್ ಕೂಡಾ ಚಾಲ್ತಿಯಲ್ಲಿರುವುದರಿಂದ ಸುಲಭವಾಗಿ ಕಿರಿಕಿರಿ ಸಂದೇಶಗಳನ್ನು ಬ್ಲಾಕ್ ಮಾಡಬಹುದು.

ಟ್ರೂ ಮೆಸೆಂಜರ್ ಭಾರತದಲ್ಲಿ ಮಾತ್ರ ಲಭ್ಯ
ಟ್ರೂ ಮೆಸೆಂಜರ್ ಸದ್ಯಕ್ಕೆ ಭಾರತದಲ್ಲಿ ಮಾತ್ರ ಲಭ್ಯವಿದ್ದು, ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಟ್ರೂ ಕಾಲರ್ ಸದ್ಯಕ್ಕೆ 150 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ.
ಪ್ರಾತ್ಯಕ್ಷಿಕೆ ವಿಡಿಯೋ ಇಲ್ಲಿದೆ
ಬಳಕೆದಾರರ 80 ಮಿಲಿಯನ್ ಜನ ಭಾರತದಿಂದ ಹೊರಗಿದ್ದಾರೆ. ಈ ಸಂಖ್ಯೆಯನ್ನು 120 ಮಿಲಿಯನ್ ಗೇರಿಸುವ ಗುರಿಯನ್ನು ಟ್ರೂ ಕಾಲರ್ ಹೊಂದಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications