5,00,000 ಕೋಟಿ ರೂಪಾಯಿ ಕಳೆದುಕೊಂಡ ಭಾರತೀಯ ಷೇರು ಮಾರುಕಟ್ಟೆ ಹೂಡಿಕೆದಾರರು... Stock Market
ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭಾರಿ ದೊಡ್ಡ ನಡುಕ ಉಂಟಾಗಿದೆ, ಇದರ ಪರಿಣಾಮ ಭಾರತ ಕೂಡ ಎದುರಿಸುವಂತೆ ಆಗಿದೆ. ಅದರಲ್ಲೂ ಭಾರತೀಯ ಷೇರುಪೇಟೆ ಇಂದು ದೊಡ್ಡ ನಷ್ಟ ಅನುಭವಿಸಿ, ಹೂಡಿಕೆದಾರರಿಗೆ ಆಘಾತ ತಂದಿದೆ. ಅಮೆರಿಕ ಅಧ್ಯಕ್ಷರ ತೆರಿಗೆ ನೀತಿ ಪರಿಣಾಮ ಇದೀಗ ಷೇರುಪೇಟೆ ಸಂಕಷ್ಟಕ್ಕೆ ಸಿಲುಕಿದ್ದು, ಇಂದು ಒಂದೇ ದಿನ 5,00,000 ಕೋಟಿ ರೂಪಾಯಿ ಕಳೆದುಕೊಂಡ ಭಾರತೀಯ ಷೇರು ಮಾರುಕಟ್ಟೆ ಹೂಡಿಕೆದಾರರು ಚಿಂತೆಯಲ್ಲಿ ಮುಳುಗಿದ್ದಾರೆ. ಹಾಗಾದರೆ, ಯಾವೆಲ್ಲಾ ಷೇರುಗಳ ಮೌಲ್ಯ ಕುಸಿತ ಕಂಡಿದೆ? ಈವರೆಗೂ ಎಷ್ಟು ಅಂಕ ಕುಸಿತ ಕಂಡಿದೆ ಷೇರುಪೇಟೆ? ಬನ್ನಿ ತಿಳಿಯೋಣ.
ಭಾರತೀಯ ಷೇರುಪೇಟೆ ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರ ವಿಶ್ವಾಸ ಗಳಿಸಿದ್ದು, ಲಕ್ಷಾಂತರ ಕೋಟಿ ರೂಪಾಯಿ ಬಂಡವಾಳ ಹೂಡಲಾಗಿದೆ. ಆದರೆ ಇದೀಗ ಅಮೆರಿಕ ತೆರಿಗೆ ನೀತಿಯ ಪರಿಣಾಮ ಭಾರತದ ಹಲವು ವಲಯಗಳಲ್ಲಿ ದೊಡ್ಡ ತಲ್ಲಣ ಉಂಟಾಗಿದೆ. ಇದರ ಜೊತೆಗೆ ಎಐ ಕಾರಣಕ್ಕೆ ಐಟಿ ವಲಯ ಅಲ್ಲಾಡಿ ಹೋಗಿದ್ದು, ಐಟಿ ಷೇರುಗಳನ್ನ ಮಾರಾಟ ಮಾಡುವ ಪ್ರಕ್ರಿಯೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಸೆನ್ಸೆಕ್ಸ್ ಗರಿಷ್ಠ 1,300 ಅಂಕ ಕುಸಿತ
ಒಂದು ಕಡೆ ಈಗ ಐಟಿ ವಲಯದಲ್ಲಿ ಕೂಡ ಇಂದು ಕುಸಿತ ಎದುರಾಗಿದ್ದು, ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧದ ಸಾಧ್ಯತೆಗಳೂ ಭಾರತೀಯ ಷೇರುಪೇಟೆ ಪ್ರಮುಖ ಸೂಚ್ಯಂಕದ ಮೇಲೆ ಪರಿಣಾಮ ಬೀರಿದೆ. ಎಲ್ಲಾ ಪರಿಣಾಮಗಳಿಂದ ಈಗ ಸೆನ್ಸೆಕ್ಸ್ ಗರಿಷ್ಠ 1,300 ಅಂಕಗಳ ತನಕ ಭಾರಿ ಕುಸಿತ ಕಂಡಿದೆ, ಹಾಗೇ ನಿಫ್ಟಿ-50 ಸುಮಾರು 350ಕ್ಕೂ ಹೆಚ್ಚು ಅಂಕ ಕಳೆದುಕೊಂಡು ಪರದಾಡಿದೆ. ಈ ಮೂಲಕ ಇಂದು ಬೆಳಗ್ಗೆಯಿಂದಲೇ ಭಾರತೀಯ ಷೇರುಪೇಟೆ ಕರಡಿ ಕುಣಿತಕ್ಕೆ ತತ್ತರಿಸಿದೆ.
ಕೊನೆಯಲ್ಲಿ ಚೇತರಿಕೆ ಕಂಡ ಮಾರುಕಟ್ಟೆ
ಅಂತಿಮವಾಗಿ ಕೊಂಚ ಚೇತರಿಕೆ ಕಂಡ ಷೇರುಪೇಟೆ, ಒಂದು ಹಂತದಲ್ಲಿ ವಹಿವಾಟು ಮುಗಿಸಿದೆ. ಈ ಪೈಕಿ ಸೆನ್ಸೆಕ್ಸ್ ಅಂತಿಮವಾಗಿ 974 ಅಂಕಗಳನ್ನು ಕಳೆದುಕೊಂಡು 82,319 ಅಂಕದಲ್ಲಿ ವಹಿವಾಟನ್ನು ಮುಗಿಸಿದೆ. ಹಾಗೇ ನಿಫ್ಟಿ-50 ಒಟ್ಟು 253 ಅಂಕಗಳನ್ನು ಕಳೆದುಕೊಂಡು 25,459 ಅಂಕಗಳಿಗೆ ತನ್ನ ವಹಿವಾಟು ಮುಗಿಸಿದೆ. ಬ್ಯಾಂಕಿಂಗ್ ವಲಯವೂ ಸೇರಿದಂತೆ, ಆಟೋಮೊಬೈಲ್ ಹಾಗೂ ಮೀಡಿಯಾದ ಷೇರುಗಳು ಕೂಡ ಕುಸಿತ ಕಂಡಿವೆ. ಇದರ ಜೊತೆಗೆ ಐಟಿ ವಲಯದಲ್ಲಿ ಅತಿಹೆಚ್ಚು ನಷ್ಟವಾಗಿದ್ದು, ಈ ಮೂಲಕ ಲಕ್ಷಾಂತರ ಕೋಟಿ ಬಂಡವಾಳವು ಕರಗಿ ಹೋಗಿದೆ. ಇರಾನ್ ಹಾಗೂ ಅಮೆರಿಕ ನಡುವೆ ಪದೇ ಪದೇ ಕಿರಿಕ್ ಆಗುತ್ತಿರುವುದು ಟೆನ್ಷನ್ ಹೆಚ್ಚು ಮಾಡುತ್ತಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications