ರತನ್ ಟಾಟಾ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಬಂತು 9,000 ಕೋಟಿ!
ನವದೆಹಲಿ, ಡಿಸೆಂಬರ್ 28: ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ 9,000 ಕೋಟಿ ಹಣ ಸಿಕ್ಕಿದೆ. ಅದು ಹೇಗೆ ಇಲ್ಲಿದೆ ವಿವರ.
ಟಾಟಾ ಸನ್ಸ್ ಅಧ್ಯಕ್ಷ ಎಮೆರಿಟಸ್ ರತನ್ ಟಾಟಾ ಅವರು ತಮ್ಮ 85ನೇ ಹುಟ್ಟುಹಬ್ಬಕ್ಕೂ ಮೊದಲು ಒಂದು ಅಶ್ಚರ್ಯಕರ ಉಡುಗೊರೆಯನ್ನು ಪಡೆದುಕೊಂಡರು. ಅದೇನೆಂದರೆ ದಿನದ ವಹಿವಾಟಿನಲ್ಲಿ ಟಾಟ್ ಸ್ಟೀಲ್ ಮತ್ತು ಟಾಟಾ ಮೋಟಾರ್ಸ್ ಷೇರುಗಳು ಭಾರೀ ಏರಿಕೆ ಕಂಡವು.

ಕಂಪನಿಗಳ ಷೇರುಗಳು ಬುಧವಾರ ಹೊಸ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು. ಟಾಟಾ ಸ್ಟೀಲ್ 52 ವಾರದ ಗರಿಷ್ಠ 137.15 ರೂ.ಗೆ ಹೋಲಿಸಿದರೆ 138.80 ರೂ.ಗೆ ಕೊನೆಗೊಂಡಿತು. ಇದರೊಂದಿಗೆ ಟಾಟಾ ಮೋಟಾರ್ಸ್ ಷೇರು ಪ್ರತಿಯೊಂದಕ್ಕೆ 52 ವಾರಗಳ ಗರಿಷ್ಠ ಬೆಲೆ ರೂ 740.60 ಕ್ಕೆ ಹೋಲಿಸಿದರೆ 2.91 ಪ್ರತಿಶತ ಏರಿಕೆಯಾಗಿ ರೂ 741.80 ಗೆ ಕೊನೆಗೊಂಡವು. ಈ ವಾರ ಷೇರುಗಳು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಟಾಟಾ ಸ್ಟೀಲ್ ಷೇರುಗಳು ಏರಿಕೆ:
ಬುಧವಾರದಂದು ಮಾರುಕಟ್ಟೆ ಪ್ರಾರಂಭವಾದ 70 ನಿಮಿಷಗಳಲ್ಲಿ ಟಾಟಾ ಸ್ಟೀಲ್ ಷೇರುಗಳು ದಾಖಲೆಯ ಏರಿಕೆ ಕಂಡವು. ಬೆಳಗ್ಗೆ 10.25ಕ್ಕೆ 52 ವಾರದ ಗರಿಷ್ಠ 138.80 ರೂ.ಗೆ ಏರಿಕೆಯಾದವು, ಕಂಪನಿಯ ಷೇರುಗಳು 136.15 ರೂ.ಗೆ ಆರಂಭವಾಗಿದ್ದವು, ಮಂಗಳವಾರ 135.20 ರೂ.ಗೆ ಮುಕ್ತಾಯವಾಗಿತ್ತು.
ಷೇರುಗಳು 52 ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಿದಾಗ ಕಂಪನಿಯ ಮಾರುಕಟ್ಟೆ ಮೌಲ್ಯ 1,70,809.67 ಕೋಟಿ ರೂ.ಗೆ ಏರಿಕೆಯಾಯಿತು. ಮಂಗಳವಾರದ ಮುಕ್ತಾಯವಾದಾಗ 1,66,379.45 ಕೋಟಿ ರೂ. ಇತ್ತು. ಬುಧವಾರದ ಮಾರುಕಟ್ಟೆ ಮುಕ್ತಾಯದ ವೇಳೆಗೆ ಅಟಾ ಸ್ಟೀಲ್ನ ಮಾರುಕಟ್ಟೆ ಮೌಲ್ಯ 1,68,656.76 ಕೋಟಿ ರೂ. ಇತ್ತು. ದಿನದಲ್ಲಿ ಅದರ ಮೌಲ್ಯಮಾಪನದಲ್ಲಿ ಸುಮಾರು 2,000 ಕೋಟಿ ರೂ.ಗಳ ಏರಿಕೆಯಾಗಿರುವುದು ಇಲ್ಲಿ ಕಾಣಬಹುದು.

ಟಾಟಾ ಮೋಟಾರ್ಸ್ ಮೈಲುಗೈ:
ಟಾಟಾ ಮೋಟಾರ್ಸ್ ಷೇರುಗಳು 727.35 ಆರಂಭಿಕ ಬೆಲೆಯಿಂದ 52 ವಾರದ ಗರಿಷ್ಠ 741.80 ರೂ.ಗೆ ಏರಿದವು. ಮಂಗಳವಾರದಂದು 719.65 ರೂ.ಗೆ ಮುಕ್ತಾಯವಾದವು. ಕಂಪನಿಯ ಮಾರುಕಟ್ಟೆ ಬಂಡವಾಳೀಕರಣವು ಮಂಗಳವಾರದ ಅಂತ್ಯಕ್ಕೆ 2,39,193.93 ಕೋಟಿ ರೂ.ಗೆ ಹೋಲಿಸಿದರೆ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದಾಗ 2,46,488.80 ಕೋಟಿ ರೂ. ಇತ್ತು.
ಬುಧವಾರದ ಮಾರುಕಟ್ಟೆ ಮುಕ್ತಾಯದ ವೇಳೆಗೆ ಕಂಪನಿಯ ಷೇರುಗಳು 52 ವಾರಗಳ ಗರಿಷ್ಠ ರೂ 738.20 ತಲುಪಿದಾಗ ಕಂಪನಿಯ ಮಾರುಕಟ್ಟೆ ಮೌಲ್ಯ 2,46,090.06 ಕೋಟಿ ರೂ. ಆಯಿತು. ಕಂಪನಿಯ ಮಾರುಕಟ್ಟೆ ಮೌಲ್ಯ ಏರಿಕೆಯಾಗಿ ಬುಧವಾರದ ಮಾರುಕಟ್ಟೆ ಮುಕ್ತಾಯದ ವೇಳೆಗೆ ಕಂಪನಿಯ ಮಾರುಕಟ್ಟೆ ಮೌಲ್ಯ ರೂ.6,896.13 ಕೋಟಿಗಳಷ್ಟು ಏರಿಕೆ ಕಂಡಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications