ಜಿಯೋ- ಒನ್ಪ್ಲಸ್ 6ಟಿ ಅನ್ಲಾಕ್ ಅಫರ್ ತಕ್ಷಣವೇ ಕ್ಯಾಶ್ ಬ್ಯಾಕ್
ಬೆಂಗಳೂರು, ಅಕ್ಟೋಬರ್ 30: 'ಜಿಯೋ- ಒನ್ಪ್ಲಸ್ 6ಟಿ ಅನ್ಲಾಕ್ ದಿ ಸ್ಪೀಡ್ ಆಫರ್' ಒದಗಿಸಲಿದೆ ಕೇಳರಿಯದ 5,400 ರೂ. ಇನ್ಸ್ಟಂಟ್ ಕ್ಯಾಶ್ಬ್ಯಾಕ್.
ಒನ್ಪ್ಲಸ್ 6ಟಿ ಅಕ್ಟೋಬರ್ 30, 2018ರಂದು ರಾತ್ರಿ 8:30ಕ್ಕೆ ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾ ಸಂಕೀರ್ಣದಲ್ಲಿರುವ ಕೆಡಿಜೆಡಬ್ಲ್ಯೂ ಸ್ಟೇಡಿಯಂನಲ್ಲಿ ಬಿಡುಗಡೆಗೊಂಡಿದೆ. ನವೆಂಬರ್ 2, 2018ರಿಂದ ಎಲ್ಲಾ ಆನ್ಲೈನ್ ಮತ್ತು ಆಫ್ಲೈನ್ ವಿಧಾನಗಳಲ್ಲಿ ಒನ್ಪ್ಲಸ್ 6ಟಿ ಮಾರಾಟ ಆರಂಭವಾಗಲಿದೆ.
ಒನ್ಪ್ಲಸ್, ಪ್ರೀಮಿಯಂ ಸ್ಮಾರ್ಟ್ಫೋನ್ ಬ್ರಾಂಡ್ ಆಗಿದ್ದು, ಇದು ವರ್ಧಿತ ಹೈಸ್ಪೀಡ್ ಡಾಟಾ ಅನುಭವವನ್ನು ತರಲು ಹಾಗೂ ಒನ್ಪ್ಲಸ್ ಹಾಗೂ ಜಿಯೋ ಬಳಕೆದಾರರಿಗೆ ಗ್ರಾಹಕ ಸ್ನೇಹಿ ಆಫರ್ ನೀಡುವ ಸಲುವಾಗಿ ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ನೆಟ್ವರ್ಕ್ ಆಗಿರುವ ಜಿಯೋದೊಂದಿಗಿನ ತನ್ನ ಸಹಭಾಗಿತ್ವವವನ್ನು ಪ್ರಕಟಿಸಿದೆ.
ತನ್ನ ಮುಂಬರುವ ಫ್ಲಾಗ್ಶಿಪ್ ಡಿವೈಸ್, ಒನ್ಪ್ಲಸ್ 6ಟಿನೊಂದಿಗೆ, ಈ ಬ್ರಾಂಡ್ ಗ್ರಾಹಕರಿಗೆ ಹಿಂದೆಂದೂ ಕಂಡರಿಯದ ಜಿಯೋ-ಒನ್ಪ್ಲಸ್ 6ಟಿ ಅನ್ಲಾಕ್ ದಿ ಸ್ಪೀಡ್ ಆಫರ್ ಅನ್ನು ನೀಡಲಿದೆ. ಇದು ಎಲ್ಲಾ ಒನ್ಪ್ಲಸ್ 6ಟಿ ಹಾಗೂ ಜಿಯೋ ಬಳಕೆದಾರರಿಗೆ ಅನೂಹ್ಯವಾದ ಕೊಡುಗೆ ನೀಡಲಿದೆ.

ಜಿಯೋ-ಒನ್ಪ್ಲಸ್ 6ಟಿ ಅನ್ಲಾಕ್ ದಿ ಸ್ಪೀಡ್ ಆಫರ್
ಮೊದಲ ಬಾರಿಗೆ ಈ ರೀತಿಯ ಆಫರ್ ನೀಡಲಾಗುತ್ತಿದ್ದು, ಇದು 299 ರೂ.ನ ಮೊದಲ ಪ್ರಿಪೇಯ್ಡ್ ರಿಚಾರ್ಜ್ ಮೇಲೆ 5,400 ರೂ.ನ ಇನ್ಸ್ಟಂಟ್ ಕ್ಯಾಶ್ಬ್ಯಾಕ್ ಒದಗಿಸಲಿದೆ. ಈ ಆಫರ್ ಹೊಂದುವವರು ಮೈಜಿಯೋ ಆಪ್ನಲ್ಲಿ ತಲಾ 150 ರೂ. ಮೌಲ್ಯದ 36 ವೋಚರ್ಗಳ ರೂಪದಲ್ಲಿ ಕ್ಯಾಶ್ಬ್ಯಾಕ್ ಪಡೆಯಲಿದ್ದಾರೆ.
ಗ್ರಾಹಕರು ಈ ವೋಚರ್ಗಳನ್ನು 299 ರೂ.ನ ನಂತರದ ರಿಚಾರ್ಜ್ ವೇಳೆ ರಿಡೀಮ್ ಮಾಡಿಕೊಳ್ಳಬಹುದು. ಆಗ ಗ್ರಾಹಕರು ಕೇವಲ 149 ರೂ. ಬೆಲೆ ನೀಡಿದಂತಾಗುತ್ತದೆ. ಈ ಪ್ಲಾನ್ ಅಡಿಯಲ್ಲಿ 28 ದಿನಗಳ ಕಾಲ ಪ್ರತಿದಿನ 3ಜಿಬಿ 4ಜಿ ಡಾಟಾ ಹೊಂದಬಹುದು, ಅನಿಯಮಿತ ಧ್ವನಿ ಕರೆಗಳು, ಎಸ್ಎಂಎಸ್ ಸಿಗಲಿದೆ.
ಜತೆಗೆ ಜಿಯೋದ ಪ್ರೀಮಿಯಂ ಅಪ್ಲಿಕೇಶನ್ಗಳನ್ನೂ ಹೊಂದಬಹುದಾಗಿದೆ. 36 ರಿಚಾರ್ಜ್ಗಳ ಮೂಲಕ 3ಟಿಬಿಯಷ್ಟು 4ಜಿ ಡಾಟಾವನ್ನು ಗ್ರಾಹಕರು ಹೊಂದಲಿದ್ದಾರೆ.

ಒನ್ಪ್ಲಸ್ 6ಟಿ ಡಿವೈಸ್ಗಳ ಲಭ್ಯತೆ
ಜಿಯೋ ಅನ್ಲಾಕ್ ದಿ ಸ್ಪೀಡ್ ಆಫರ್ ಒನ್ಪ್ಲಸ್ 6ಟಿ ಖರೀದಿಸುವ ಪ್ರಸ್ತುತ ಇರುವ ಹಾಗೂ ಹೊಸ ಜಿಯೋ ಗ್ರಾಹಕರಿಬ್ಬರಿಗೂ ಲಭಿಸಲಿದೆ. ರಿಲಯನ್ಸ್ ಡಿಜಿಟಲ್ ಸ್ಟೋರ್, ಮೈಜಿಯೋ ಸ್ಟೋರ್ಸ್, ಜಿಯೋ ರಿಟೈಲರ್ಸ್ ಮತ್ತು ಮೈಜಿಯೋ ಆಪ್ನಲ್ಲಿ 299 ರೂ. ಮೊದಲ ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿಕೊಂಡಾಗ ಈ ಆಫರ್ ಲಭ್ಯವಾಗಲಿದೆ.
ಮೈಜಿಯೋ ಆಪ್ ಮೂಲಕ ನಂತರದ ರಿಚಾರ್ಜ್ ಮಾಡಿಕೊಂಡಾಗ ಮಾತ್ರ ಈ ಕ್ಯಾಶ್ಬ್ಯಾಕ್ ವೋಚರ್ ಗಳನ್ನು ರಿಡೀಮ್ ಮಾಡಿಕೊಳ್ಳಬಹುದಾಗಿದೆ.

ನೆಟ್ವರ್ಕ್ ಅನುಕೂಲ
ಜಿಯೋ, ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ನೆಟ್ವರ್ಕ್ ಆಗಿದ್ದು, ಇದು ಭಾರತ ಮತ್ತು ಭಾರತೀಯರ ಗೇಮ್ ಚೇಂಜರ್ ಆಗಿದೆ. ಜಿಯೋ ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ನೆಟ್ವರ್ಕ್ ಆಗಿದೆ ಮತ್ತು ದೇಶದ ಅತಿವೇಗದ ನೆಟ್ವರ್ಕ್ ಆಗಿ ಸತತವಾಗಿ rank ಗಳಿಸಿದೆ. ಜಿಯೋದ ಸುಧಾರಿತ ತಂತ್ರಜ್ಞಾನ, ಹೈ ಸ್ಪೀಡ್ ಡಾಟಾ, ಉಚಿತ ಎಚ್ಡಿ ಧ್ವನಿ ಮತ್ತು ಪ್ರೀಮಿಯಂ ಕಂಟೆಂಟ್ನೊಂದಿಗೆ ಒನ್ಪ್ಲಸ್ 6ಟಿ ಬಳಕೆದಾರರು ತಡೆರಹಿತ ಹೈ ಸ್ಪೀಡ್ ಡಾಟಾ ಅನುಭವ ಪಡೆಯಲು ಸಾಧ್ಯವಾಗಲಿದೆ ಮತ್ತು ಡಿವೈಸ್ನ ನೈಜ ಸಾಮಥ್ರ್ಯ ಕಾಣಲಿದ್ದಾರೆ. ಭಾರತದಾದ್ಯಂತ 4ಜಿ ನೆಟ್ವರ್ಕ್ ಹಾಗೂ ಧ್ವನಿ ಸೇವೆಗಳನ್ನು (ವೋಲ್ಟೆ) ಒದಗಿಸುತ್ತಿರುವ ಏಕೈಕ ನೆಟ್ವರ್ಕ್ ಜಿಯೋ ಆಗಿದೆ.

ಹೊಸ ಒನ್ಪ್ಲಸ್ 6ಟಿ
ಹೊಸ ಒನ್ಪ್ಲಸ್ 6ಟಿ ಫ್ಯೂಚರಿಸ್ಟಿಕ್ ಸ್ಕ್ರೀನ್ ಅನ್ಲಾಕ್ ತಂತ್ರಜ್ಞಾನದೊಂದಿಗಿನ ಕಂಪನಿಯ ಮೊದಲ ಡಿವೈಸ್ ಆಗಿದೆ, ಇದರಲ್ಲಿ ದೊಡ್ಡನೆಯ 3700 ಎಂಎಎಚ್ ಬ್ಯಾಟರಿ ಇದೆ, ಜತೆಗೆ ಒನ್ಪ್ಲಸ್ನ ಜನಪ್ರಿಯ ಅತಿವೇಗದಲ್ಲಿ ಚಾರ್ಜ್ ಆಗುವ ತಂತ್ರಜ್ಞಾನವೂ ಇರಲಿದೆ.
ಕ್ವಾಲ್ಕಮ್ನ ಫ್ಲಾಗ್ಶಿಪ್ ಪ್ರೊಸೆಸರ್, ಸ್ನಾಪ್ಡ್ರಾಗನ್ 845 ಎಸ್ಒಸಿಯೂ ಇದರಲ್ಲಿರಲಿದೆ.ಆಕ್ಸಿಜನ್ ಒಎಸ್ ಸಾಫ್ಟ್ ವೇರ್ ಇದರಲ್ಲಿದೆ. ಎಐ ಆಧಾರಿತ ಆಲ್ಗೊರಿತಂ ಸೇರ್ಪಡೆ ಮಾಡಲಾಗಿದ್ದು, ಇದು ರಾತ್ರಿ ವೇಳೆ ಬ್ಯಾಕ್ಗ್ರೌಂಡ್ ಬಳಕೆ ಕಡಿಮೆ ಮಾಡಲಿದೆ. ಇದರಿಂದಾಗಿ ಪವರ್ ಬಳಕೆಯೂ ತಗ್ಗಲಿದೆ.

ಒನ್ಪ್ಲಸ್ ಬಗ್ಗೆ
ಒನ್ಪ್ಲಸ್ ಒಂದು ಜಾಗತಿಕ ಮೊಬೈಲ್ ತಂತ್ರಜ್ಞಾನ ಸಂಸ್ಥೆಯಾಗಿದ್ದು. ಒನ್ಪ್ಲಸ್ ಯಾವತ್ತೂ ನಿಂತ ನೀರಾಗುವುದಿಲ್ಲ ಎಂಬ ಮಂತ್ರದೊಂದಿಗೆ ಕಾರ್ಯಾಚರಿಸುವ ಸಂಸ್ಥೆ. ಉನ್ನತ ಕಾರ್ಯಕ್ಷಮತೆಯ ಹಾರ್ಡ್ವೇರ್ ಹಾಗೂ ಪ್ರೀಮಿಯಂ ಬಿಲ್ಡ್ ಗುಣಮಟ್ಟದೊಂದಿಗಿನ ಆಕರ್ಷಕ ವಿನ್ಯಾಸದ ಡಿವೈಸ್ಗಳನ್ನು ನಿರ್ಮಿಸುತ್ತದೆ. ಬಳಕೆದಾರರು ಹಾಗೂ ಅಭಿಮಾನಿಗಳ ಸಮುದಾಯದೊಂದಿಗೆ ಬಲಿಷ್ಠವಾದ ಬಂಧವವನ್ನು ನಿರ್ಮಿಸಿದೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications