ಇನ್ಮುಂದೆ ಈ ವಹಿವಾಟು ನಡೆಸಲು ಒಟಿಪಿ ಅಗತ್ಯವಿಲ್ಲ: ಆರ್ಬಿಐ ಹೊಸ ನಿಯಮ
15,000 ರುಪಾಯಿವರೆಗಿನ ಸ್ವಯಂ ಚಾಲಿತ ವಹಿವಾಟುಗಳಿಗೆ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಮೂಲಕ ದೃಢೀಕರಿಸುವ ಅಗತ್ಯವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ತಿಳಿಸಿದೆ.
ವಿಮಾ ಪ್ರೀಮಿಯಂ, ವಿವಿಧ ಚಂದಾದಾರಿಕೆಗಳು, ಶಿಕ್ಷಣ ಶುಲ್ಕ ಮುಂತಾದ ದೊಡ್ಡ ಮೌಲ್ಯದ ಪಾವತಿಗಳನ್ನು ಸುಲಭಗೊಳಿಸಲು ಮಿತಿ ಹೆಚ್ಚಳ ಮಾಡುವಂತೆ ಸೇವಾದಾರರು ಆರ್ಬಿಐಗೆ ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿರುವ ಆರ್ಬಿಐ ಈಗ ಮಿತಿ ಹೆಚ್ಚುಮಾಡಿ ನಿರ್ಧಾರ ತೆಗೆದುಕೊಂಡಿದೆ.
"ಗ್ರಾಹಕರ ಅನುಕೂಲತೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಚೌಕಟ್ಟಿನ ಅಡಿಯಲ್ಲಿ ಲಭ್ಯವಿರುವ ಪ್ರಯೋಜನಗಳನ್ನು ಬಳಸಿಕೊಳ್ಳಲು, ಪ್ರತಿ ಪುನರಾವರ್ತಿತ ಪಾವತಿಗೆ ಮಿತಿಯನ್ನು 5,000 ರುಪಾಯಿಗಳಿಂದ 15,000 ರುಪಾಯಿಗಳಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ" ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಹೊಸ ನಿಯಮದ ಕುರಿತು ನಿಯಂತ್ರಕರು ಶೀಘ್ರದಲ್ಲೇ ವಿವರವಾದ ಸೂಚನೆಗಳನ್ನು ನೀಡುವ ನಿರೀಕ್ಷೆ ಇದೆ.
ಆರ್ಬಿಐ ಆಗಸ್ಟ್ 2019 ರಲ್ಲಿ ಪುನರಾವರ್ತಿತ ಪಾವತಿಗಳನ್ನು ಪ್ರಕ್ರಿಯೆಗೊಳಿಸಲು ಹೊಸ ನಿಯಮ ಹೊರಡಿಸಿತ್ತು. ಆರ್ಬಿಐನ ಹೊಸ ನಿಯಮಗಳ ಪ್ರಕಾರ ಬ್ಯಾಂಕ್ಗಳು ಪಾವತಿಗೆ ಕನಿಷ್ಠ 24 ಗಂಟೆಗಳ ಮೊದಲು ಗ್ರಾಹಕರಿಗೆ ಹಣ ಕಡಿತಗೊಳಿಸುವ ಬಗ್ಗೆ ಅಧಿಸೂಚನೆಯನ್ನು ಕಳುಹಿಸಿದರೆ ಮಾತ್ರ ಸ್ವಯಂ-ಡೆಬಿಟ್ ವಹಿವಾಟುಗಳನ್ನು ಪೂರ್ಣಗೊಳಿಸಬಹುದಾಗಿತ್ತು.
ಇ-ಮ್ಯಾಂಡೇಟ್ ಆಧಾರಿತ ಮರುಕಳಿಸುವ ಪಾವತಿಗಳ ಪ್ರಕ್ರಿಯೆಗೆ, 5000 ರುಪಾಯಿಗಳಿಗಿಂದ ಹೆಚ್ಚಿನ ಪಾವತಿ ಮಾಡಲು ದೃಢೀಕರಣಕ್ಕೆ ಹೆಚ್ಚುವರಿ ಅಂಶದ (ಎಎಫ್ಎ) ಅಗತ್ಯವಿತ್ತು. ಗ್ರಾಹಕರು ಅಂತಹ ಪಾವತಿಗಳನ್ನು ಒಟಿಪಿ ಮೂಲಕ ದೃಢೀಕರಿಸುವ ಅಗತ್ಯವಿದೆ.

ಇಲ್ಲಿಯವರೆಗೆ, ಈ ಚೌಕಟ್ಟಿನ ಅಡಿಯಲ್ಲಿ 3,400 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವ್ಯಾಪಾರಿಗಳನ್ನು ಒಳಗೊಂಡಂತೆ 6.25 ಕೋಟಿ ಆದೇಶಗಳನ್ನು ನೋಂದಾಯಿಸಲಾಗಿದೆ. ಉದ್ಯಮದ ಅಂದಾಜುಗಳು ಪುನರಾವರ್ತಿತ ವಹಿವಾಟುಗಳ ಮೂಲಕ ಅಂತಹ ಪಾವತಿಯ ಪರಿಮಾಣಗಳನ್ನು ವಾರ್ಷಿಕ ಒಟ್ಟು ವಹಿವಾಟು ಮೌಲ್ಯದಲ್ಲಿ (GTV) 2 ಶತಕೋಟಿ ಡಾಲರ್ ಮೊತ್ತವನ್ನು ಸೂಚಿಸುತ್ತವೆ.
ಇಷ್ಟೇ ಅಲ್ಲದೆ ಯುಪಿಐ ಪ್ಲಾಟ್ಫಾರ್ಮ್ಗೆ ಕ್ರೆಡಿಟ್ ಕಾರ್ಡ್ಗಳನ್ನು ಲಿಂಕ್ ಮಾಡಲು ಅವಕಾಶ ನೀಡುವ ಪ್ರಸ್ತಾಪವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೊಂದಿದೆ ಎಂದು ಗವರ್ನರ್ ಶಕ್ತಿಕಾಂತ್ ದಾಸ್ ಬುಧವಾರ ಹೇಳಿದ್ದಾರೆ. ಸಹಕಾರ ಬ್ಯಾಂಕ್ಗಳಲ್ಲಿನ ಗೃಹ ಸಾಲದ ಗರಿಷ್ಠ ಮಿತಿ ಹೆಚ್ಚಳದಂತಹ ಮಹತ್ವದ ಘೋಷಣೆಗಳನ್ನೂ ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications