ಜಿಎಸ್ ಟಿ ರೂವಾರಿ ನವೀನ್ ಕುಮಾರ್ ಬಗ್ಗೆ ತಿಳಿಯಿರಿ
ಬೆಂಗಳೂರು, ಜೂನ್ 29: ಎನ್ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸರಕು ಸಾಗಣೆ ಮತ್ತು ಸೇವಾ ತೆರಿಗೆಯ ಬೆನ್ನೆಲುಬಾಗಿರುವ ಜಿಎಸ್ ಟಿ ನೆಟ್ವರ್ಕ್ ಬಗ್ಗೆ ಇಲ್ಲಿದೆ ಮಾಹಿತಿ.
ಜುಲೈ 1ರಿಂದ ಜಾರಿಗೆ ಬರಲಿರುವ ಜಿ ಎಸ್ ಟಿಯ ರೂವಾರಿಯಾದ ಜಿ ಎಸ್ ಟಿಎನ್ ಮೊದಲ ಚೇರ್ಮನ್ ನವೀನ್ ಕುಮಾರ್ ಬಗ್ಗೆ ಇಲ್ಲಿ ಓದಿ. ಸುಮಾರು 66 ಲಕ್ಷಕ್ಕೂ ಅಧಿಕ ತೆರಿಗೆದಾರರು ಈಗಾಗಲೆ ಜಿಎಸ್ ಟಿಎನ್ ಪೋರ್ಟಲ್ ಮೂಲಕ ನೋಂದಾಯಿಸಿಕೊಂಡಿದ್ದಾರೆ. ದೇಶದಾದ್ಯಂತ ಜಿಎಸ್ ಟಿ ಜಾರಿ, ನಿರ್ವಹಣೆಯನ್ನು ಜಿಎಸ್ ಟಿಎನ್ ಪೋರ್ಟಲ್ ನೋಡಿಕೊಳ್ಳಲಿದೆ.
2015ರಲ್ಲಿ ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆ ಹಾಗೂ ಜಿಎಸ್ ಟಿಎನ್ ಜತೆ ಒಪ್ಪಂದ. ಜಿ ಎಸ್ ಟಿ ಜಾರಿಗೊಂಡ ಕ್ಷಣದಿಂದ 5 ವರ್ಷಗಳ ಕಾಲ ನಿರ್ವಹಣೆಯ ಹೊಣೆ. ಜಿಎಸ್ ಟಿ ವ್ಯವಸ್ಥೆಯ ವಿನ್ಯಾಸ, ಅಭಿವೃದ್ಧಿ, ಮೂಲ ಸೌಕರ್ಯ, ಸಾಫ್ಟ್ ವೇರ್ ಲೈಸನ್ಸ್, ಆನ್ ಲೈನ್ ಬ್ಯಾಂಡ್ ವಿಡ್ತ್ ಎಲ್ಲವನ್ನು ಇನ್ಫೋಸಿಸ್ ನೋಡಿಕೊಳ್ಳುತ್ತಿದೆ. ಜುಲೈ 15ರ ನಂತರ ಆಫ್ ಲೈನ್ ನಲ್ಲೂ ಬಳಕೆ ಮಾಡಬಲ್ಲ ಸಾಧನಗಳನ್ನು ಪರಿಚಯಿಸಲಗುತ್ತದೆ ಎಂದು ಜಿಎಸ್ ಟಿ ಚೇರ್ಮನ್ ನವೀನ್ ಕುಮಾರ್ ಹೇಳಿದರು.

ಚೇರ್ಮನ್ ನವೀನ್ ಕುಮಾರ್
ನವೀನ್ ಕುಮಾರ್ ಅವರು Goods and Services Tax Network(ಜಿಎಸ್ ಟಿಎನ್) ನ ಮೊದಲ ಚೇರ್ಮನ್ ಆಗಿದ್ದಾರೆ. 1975ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದು, 2012ರಲ್ಲಿ ಮುಂಬಡ್ತಿ ಪಡೆದರು. ಬಿಹಾರದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಯಾಗಿ 37 ವರ್ಷಗಳ ಕಾಲ ಅನುಭವ ಹೊಂದಿದ್ದಾರೆ.

ಬಿಹಾರ ಮೂಲದ ನವೀನ್
1952ರಲ್ಲಿ ಜನಿಸಿದ ಕುಮಾರ್ ಅವರು ಪ್ರಥಮ ದರ್ಜೆಯಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಸಿವಿಎಲ್ ಸರ್ವೀಸ್ ಪರೀಕ್ಷೆ ಬರೆದರು. 1975ರಲ್ಲಿ ಬಿಹಾರದಲ್ಲಿ ಅಧಿಕಾರಿಯಾಗಿ ನಗರಾಭಿವೃದ್ಧಿ, ಶಿಕ್ಷಣ, ಸಾಮಾಜಿಕ ಭದ್ರತೆ, ಯುವಜನ ಇಲಾಖೆ, ಜಲ ಸಂಪನ್ಮೂಲ, ಇಂಧನ, ಕೈಗಾರಿಕೆ, ಐಟಿ ಹಾಗೂ ವಾಣಿಜ್ಯ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಮೆಟ್ರೋ ರೈಲು ನಿಗಮ ನಿರ್ವಹಣೆ
ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಯಾಗಿದ್ದ ನವೀನ್ ಕುಮಾರ್ ಅವರು ದೆಹಲಿ ಮೆಟ್ರೋ ರೈಲು ನಿಗಮ ಸೇರಿದಂತೆ ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಮೆಟ್ರೋಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬಿಹಾರದ ಮುಖ್ಯ ಕಾರ್ಯದರ್ಶಿಯಾಗಿದ ನವೀನ್ 2012ರಲ್ಲಿ ನಿವೃತ್ತಿ ಹೊಂದಿದರು.

ಐಟಿ ಕಾರ್ಯದರ್ಶಿಯಾಗಿ ನವೀನ್
ಬಿಹಾರದ ಮೊದಲ ಐಟಿ ಕಾರ್ಯದರ್ಶಿಯಾಗಿದ್ದ ನವೀನ್ ಅವರು ಬಿಹಾರದಲ್ಲಿ ಇಂಟರ್ನೆಟ್ ಜಾಲ ಹರಡಲು ಕಾರಣರಾದರು. ವ್ಯಾಟ್ ನಿರ್ವಹಣೆ, ರಾಜ್ಯದ ಬೊಕ್ಕಸಕ್ಕೆ ಇ ರಕ್ಷೆ, ಪಂಚಾಯಿತಿ ಮಟ್ಟದಲ್ಲಿ ಇ ಸೇವೆಗಳನ್ನು ಜಾರಿಗೊಳಿಸಿದರು. ತಮ್ಮ ಬ್ಲಾಗ್ (www.1wordtut.com) ಮೂಲಕ ಎಂಎಸ್ ವರ್ಡ್ ಬಗ್ಗೆ ಅನೇಕ ಕುತೂಹಲದ ಸಂಗತಿಯನ್ನು ಹಂಚಿಕೊಳ್ಳುತ್ತಿದ್ದಾರೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications