'ಬೇಕೆಂತಲೇ ಹೊಸಬರಿಗೆ ಕಡಿಮೆ ಸಂಬಳ ಕೊಡುತ್ತಿವೆ ಐಟಿ ಕಂಪೆನಿಗಳು'
ಐಟಿ ಕಂಪೆನಿಗಳೆಲ್ಲ ಒಟ್ಟಾಗಿ ಮಾತನಾಡಿಕೊಂಡು ಹೊಸದಾಗಿ ಸಾಫ್ಟ್ ವೇರ್ ಉದ್ಯೋಗಕ್ಕೆ ಬರುವವರ ಸಂಬಳವನ್ನು ಕಡಿಮೆ ಇಟ್ಟಿವೆ. ಹೆಚ್ಚಿನ ಸಂಖ್ಯೆ ಎಂಜಿನಿಯರ್ ಬರುತ್ತಿದ್ದಾರೆ ಎಂದು ಹೀಗೆ ಮಾಡಲಾಗುತ್ತಿದೆ ಎಂಬುದು ಟಿವಿ ಮೋಹನ್ ದಾಸ್ ಪೈ ಆರೋಪ
ಹೈದರಾಬಾದ್, ಫೆಬ್ರವರಿ 21: ಭಾರತದ ದೊಡ್ಡ ಮಾಹಿತಿ ತಂತ್ರಜ್ಞಾನ (ಐಟಿ) ಸೇವೆ ಒದಗಿಸುವ ಕಂಪೆನಿಗಳೆಲ್ಲ ಒಟ್ಟಾಗಿ ಸೇರಿ, ಹೆಚ್ಚಿನ ಸಂಖ್ಯೆಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಗಳು ಬರುತ್ತಿರುವುದನ್ನು ತಿಳಿದು, ಹೊಸಬರ ಸಂಬಳವನ್ನು ಕಡಿಮೆ ಮಾಡಿವೆ ಎಂದು ಟಿವಿ ಮೋಹನ್ ದಾಸ್ ಪೈ ಆರೋಪಿಸಿದ್ದಾರೆ.
"ಭಾರತದ ಐಟಿ ಉದ್ಯಮದ ಸಮಸ್ಯೆಯೇ ಇದು. ಇಲ್ಲಿನ ಐಟಿ ಕಂಪೆನಿಗಳು ಹೊಸಬರಿಗೆ ಒಳ್ಳೆ ಸಂಬಳ ಕೊಡುತ್ತಿಲ್ಲ. ದೊಡ್ಡ ಕಂಪೆನಿಗಳು ಒಬ್ಬರಿಗೊಬ್ಬರು ಮಾತನಾಡಿಕೊಂಡು ಸಂಬಳ ಹೆಚ್ಚಿಸುತ್ತಿಲ್ಲ" ಎಂದು ಅವರು ಪಿಟಿಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿದ್ದಾರೆ.[ಒಳ್ಳೆ ಜನರು ಕೂಡ ಕೆಲವು ತಪ್ಪು ಮಾಡ್ತಾರೆ: ಇನ್ಫಿ ಮೂರ್ತಿ]

ವರದಿಗಳ ಪ್ರಕಾರ ಎರಡು ದಶಕದ ಹಿಂದೆ ಹೊಸಬರಿಗೆ ವರ್ಷಕ್ಕೆ 2.25 ಲಕ್ಷ ರುಪಾಯಿ ಸಂಬಳ ಕೊಡಲಾಗುತ್ತಿತ್ತು. ಅದನ್ನು ಈಗ 3.5 ಲಕ್ಷ ರುಪಾಯಿಗೆ ಏರಿಸಲಾಗಿದೆ. ಹಣದುಬ್ಬರ ದರ ಏರಿಕೆಗೆ ಹೋಲಿಸಿದರೆ ಈ ಸಂಬಳ ಹೆಚ್ಚಳದ ಪ್ರಮಾಣ ತೀರಾ ಕಡಿಮೆ.
ಪೈ ಅವರು 1994ರಿಂದ 2006ರವರೆಗೆ ಇನ್ಫೋಸಿಸ್ ನ ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. "ದೊಡ್ಡ ಕಂಪೆನಿಗಳು ಹೊಸಬರ ವೇತನ ಹೆಚ್ಚಿಸಬಾರದು ಎಂದು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುವುದು ಒಳ್ಳೆ ಲಕ್ಷಣ ಅಲ್ಲ" ಎಂದು ಅವರು ಹೇಳಿದ್ದಾರೆ.[ಬೆಂಗಳೂರಿನಲ್ಲಿ ನಾಡೆಲ್ಲ, ಫ್ಲಿಪ್ ಕಾರ್ಟ್ ಜತೆಗೆ ಮೈಕ್ರೋಸಾಫ್ಟ್ ಒಪ್ಪಂದ]
ಸದ್ಯಕ್ಕೆ ಪೈ ಅವರು ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸರ್ವೀಸ್ ಹಾಗು ಆರಿನ್ ಕ್ಯಾಪಿಟಲ್ ನ ಅಧ್ಯಕ್ಷರಾಗಿದ್ದಾರೆ. "ಐಟಿ ಕಂಪೆನಿಗಳು ಹೊಸಬರ ವೇತನ ಹೆಚ್ಚಿಸಿ, ಈಗಾಗಲೇ ಉನ್ನತ ಸ್ಥಾನದಲ್ಲಿರುವವರ ವೇತನದಲ್ಲಿ ಕಡಿತ ಮಾಡಬೇಕು. ಆದರೆ ಕಳೆದ ಏಳೆಂಟು ವರ್ಷಗಳಿಂದ ದೊಡ್ಡ ಕಂಪೆನಿಗಳು ಒಂದಕ್ಕೊಂದು ಮಾತನಾಡಿಕೊಂಡು ಸಂಬಳ ಹೆಚ್ಚಿಸುತ್ತಿಲ್ಲ ಎಂದು ಪೈ ಹೇಳಿದ್ದಾರೆ.
ಸಾಫ್ಟ್ ವೇರ್ ಎಂಜಿನಿಯರ್ ಗಳ ಸಂಖ್ಯೆ ಹೆಚ್ಚಾಗಿದೆ. ಕೆಲಸ ಹಿಡಿಯುವುದಕ್ಕೆ ಯುವಕರು ಪರದಾಡುತ್ತಿದ್ದಾರೆ. ಆದ್ದರಿಂದಲೇ ಮೊದಲ ಮೂರು ವರ್ಷದಲ್ಲೇ ಕೆಲಸ ಬಿಡುವವರ ಸಂಖ್ಯೆ ಹೆಚ್ಚಾಗಿದೆ. ಅದೂ ಹೆಚ್ಚಿನ ಪಕ್ಷ ವೇತನದ ವಿಚಾರದಲ್ಲಿ ಅಸಮಾಧಾನವಾಗಿ ಕೆಲಸ ಬಿಡುವವರು ಹೆಚ್ಚು ಎಂದು ಪೈ ಅಭಿಪ್ರಾಯಪಟ್ಟಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications