ಗ್ರಾಹಕರಿಗೆ ಸೂಚನೆ: ಆಗಸ್ಟ್ 1 ರಿಂದ ಏನೆಲ್ಲ ಬದಲಾವಣೆಯಾಗಲಿದೆ?
ಕೊರೊನಾ ಸಾಂಕ್ರಾಮಿಕ ಸಂಕಷ್ಟದ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಕೊರತೆ, ಲಾಕ್ಡೌನ್ ದೆಸೆಯಿಂದ ಮಾರಾಟ, ಕೊಳ್ಳುವಿಕೆಗೆ ಇದ್ದ ತಡೆ ಈಗ ತೆರವಾಗಿದೆ. ಆನ್ಲೈನ್ ಮಾರುಕಟ್ಟೆ ಚಾಲನೆಯಲ್ಲಿದ್ದರೂ ದಿನದಿಂದ ದಿನಕ್ಕೆ ಅನೇಕ ವಸ್ತುಗಳ ದರ ಏರಿಕೆಯಾಗುತ್ತಿವೆ. ಆಗಸ್ಟ್ 1ರಿಂದ ಪ್ರಮುಖ 5 ಬದಲಾವಣೆಗಳಾಗಲಿದ್ದು, ಹೆಚ್ಚಿನ ಬದಲಾವಣೆಗಳು ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದೆ. ಕೋವಿಡ್ 19 ಹೊಡೆತದಿಂದ ತತ್ತರಿಸಿರುವ ವಿವಿಧ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಆರ್ಥಿಕ ಪ್ಯಾಕೇಜ್ ಘೋಷಿಸಿದೆ.
ಪ್ರಮುಖವಾಗಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ದರ ತಿಂಗಳ ಮೊದಲ ದಿನ ಪರಿಷ್ಕರಣೆಯಾಗಲಿದೆ. ಆದಾಯ ತೆರಿಗೆ ಪಾವತಿ ಕುರಿತಂತೆ ಬದಲಾವಣೆ ಘೋಷಣೆಯಾಗಿದೆ. ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ದರವಂತೂ ಏರುತ್ತಿದೆ. ಇದರಿಂದ ಸರಕು ಸಾಗಣೆ ಅವಲಂಬಿತ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಒಟ್ಟಾರೆ, ತಿಂಗಳ ಆರಂಭದಲ್ಲಿ ಜೇಬಿಗೆ ಕತ್ತರಿ ಬೀಳಲಿದ್ದು, ಜನ ಸಾಮಾನ್ಯರು ಚಿಂತೆ ಸಹಜವಾಗಿದೆ. ಒಟ್ಟಾರೆ, ಆಗಸ್ಟ್ 1 ರಿಂದ ಏನೇನು ಬದಲಾವಣೆ ಮುಂದೆ ಓದಿ...

ಪ್ರತಿ ತಿಂಗಳ ಮೊದಲ ದಿನ ನಿರೀಕ್ಷಿತ ಬೆಲೆ ಏರಿಕೆ
ಎಲ್ ಪಿ ಜಿ ಸಿಲಿಂಡರ್ ಬೆಲೆ ಪ್ರತಿ ತಿಂಗಳ ಮೊದಲ ದಿನದಂದು ಗೃಹ ಬಳಕೆ ಹಾಗೂ ವಾಣಿಜ್ಯ ಉದ್ದೇಶಿತ ಎಲ್ ಪಿ ಜಿ ಸಿಲಿಂಡರ್ ಬೆಲೆ ಪರಿಷ್ಕರಣೆಯಾಗಲಿದೆ. ಸದ್ಯ ಬೆಂಗಳೂರಿನಲ್ಲಿ ಜೂನ್ ತಿಂಗಳಲ್ಲಿ 14.2 ಕೆ.ಜಿ ಸಿಲಿಂಡರ್ ಬೆಲೆ 812 ರು ನಷ್ಟಿದೆ. ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸ ಕಾಣಬಹುದಾಗಿದೆ.

ಎಟಿಎಂ ಸೇವಾ ಶುಲ್ಕ ಹೆಚ್ಚಳ
ಸರಿ ಸುಮಾರು 9 ವರ್ಷಗಳ ಬಳಿಕ ಎಟಿಎಂ ಸೇವಾ ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ. ಈ ಬಗ್ಗೆ ಆರ್ ಬಿ ಐ ಪ್ರಕಟಣೆ ಹೊರಡಿಸಿದೆ. ಎಟಿಎಂ ಸೇವಾ ಶುಲ್ಕ 15 ರುಪಾಯಿಯಿಂದ 17ರು ಗೇರಲಿದೆ. ಇದರ ಜೊತೆಗೆ ಹಣಕಾಸೇತರ ಶುಲ್ಕ 5 ರುಪಾಯಿಯಿಂದ 6 ರುಗೇರಿದೆ. ಬೇರೆ ಬ್ಯಾಂಕಿನ ಕಾರ್ಡ್ ಎಟಿಎಂನಲ್ಲಿ ಬಳಸಿದರೆ ಇಂಟರ್ ಜೇಂಜ್ ಶುಲ್ಕ ವಿಧಿಸಲಾಗುತ್ತದೆ. ಪ್ರತಿ ವಹಿವಾಟಿಗೆ 20 ರುಪಾಯಿ ಇದ್ದ ಈ ಶುಲ್ಕ 1 ರುಪಾಯಿ ಹೆಚ್ಚಳವಾಗಲಿದೆ. ಆದರೆ, ಇದು ಜನವರಿ 1, 2022ರಿಂದ ಸಂಪೂರ್ಣವಾಗಿ ಚಾಲನೆಗೆ ಬರಲಿದೆ.

ಇ ಫೈಲಿಂಗ್ ಗಡುವು ವಿಸ್ತರಣೆ
15 ಸಿಎ, 15 ಸಿಬಿ ಫಾರ್ಮ್ ಸಲ್ಲಿಕೆ ಅವಧಿಯನ್ನು ಜುಲೈ 15ರ ಗಡುವಿನಿಂದ ಆಗಸ್ಟ್ 15ಕ್ಕೆ ವಿಸ್ತರಿಸಿ ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಸೂಚನೆ ನೀಡಿದೆ.
ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ, ನಮೂನೆ 15 ಸಿಎ/ 15 ಸಿಬಿಯನ್ನು ವಿದ್ಯುನ್ಮಾನವಾಗಿ ಫೈಲ್ ಮಾಡುವ ಅವಶ್ಯಕತೆಯಿದೆ. ಪ್ರಸ್ತುತ, ತೆರಿಗೆದಾರರು ಯಾವುದೇ ವಿದೇಶಿ ಹಣ ರವಾನೆಗಾಗಿ ಅಧಿಕೃತ ಮಾರಾಟಗಾರರಿಗೆ ನಕಲನ್ನು ಸಲ್ಲಿಸುವ ಮೊದಲು, ಇ-ಫೈಲಿಂಗ್ ಪೋರ್ಟಲ್ನಲ್ಲಿ, ಅನ್ವಯವಾಗುವಂತೆ ಫಾರ್ಮ್ 15 ಸಿಬಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಪ್ರಮಾಣಪತ್ರದೊಂದಿಗೆ ಫಾರ್ಮ್ 15 ಸಿಎ ಅನ್ನು ಅಪ್ಲೋಡ್ ಮಾಡಬೇಕಾಗುತ್ತದೆ.

ಇಂಡಿಯಾ ಪೋಸ್ಟ್ ಪೇಮೆಂಟ್ ಹಾಗೂ NACH
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಶುಲ್ಕ ದರ ಬದಲಾಗಿದೆ. ಈ ಸೌಲಭ್ಯ ಬಳಸಿ ಮನೆ ಬಾಗಿಲಿಗೆ ಸೇವೆ ಪಡೆಯಲು 20 ರು ಪ್ಲಸ್ ಜಿ ಎಸ್ ಟಿ ಪಾವತಿಸಬೇಕಾಗುತ್ತದೆ. ಪ್ರತಿ ವಹಿವಾಟಿನ ಮೇಲೆ ಶೇ 20ರಷ್ಟು ಹೆಚ್ಚುವರಿ ಶುಲ್ಕ ಹಾಗೂ ಜಿಎಸ್ ಟಿ ವಿಧಿಸಲಾಗುತ್ತದೆ.
ಇದಲ್ಲದೆ, ನ್ಯಾಷನಲ್ ಆಟೋಮ್ಯಾಟೆಡ್ ಕ್ಲಿಯೆರಿಂಗ್ ಹೌಸ್(NACH) ಸೌಲಭ್ಯಗಳು ಆಗಸ್ಟ್ 1ರಿಂದ ವಾರದ ಎಲ್ಲಾ ದಿನಗಳು, ಎಲ್ಲಾ ಸಮಯದಲ್ಲಿ ಲಭ್ಯವಾಗಲಿವೆ. ವೇತನ, ಪಿಂಚಣಿ, ಸಗಟು ಪಾವತಿ, ವಿಮೆ ಪಾವತಿ, ಬಿಲ್ ಪಾವತಿ ಇತ್ಯಾದಿ ಪ್ರಕ್ರಿಯೆ ಸುಲಭವಾಗಲಿದೆ,

ಐಸಿಐಸಿಐ ಬ್ಯಾಂಕ್ ನಗದು ವಹಿವಾಟು
ಐಸಿಐಸಿಐ ಬ್ಯಾಂಕ್ ಉಳಿತಾಯ ಖಾತೆ/ವೇತನ ಖಾತೆ ಹಾಗೂ ಇನ್ನಿತರ ಖಾತೆಗಳ ನಗದು ವಹಿವಾಟು ಶುಲ್ಕಗಳನ್ನು ಪರಿಷ್ಕರಿಸಲಾಗಿದೆ. ಇದರ ಅನ್ವಯ ಒಂದು ತಿಂಗಳಿಗೆ ನಾಲ್ಕು ಬಾರಿ ಮಾತ್ರ ಉಚಿತವಾಗಿ ವಹಿವಾಟು ನಡೆಸಬಹುದು. ನಂತರ ಪ್ರತಿ ಐದನೇ ವಹಿವಾಟಿನ ಮೇಲೆ 150 ರು ಶುಲ್ಕ ವಿಧಿಸಲಾಗುತ್ತದೆ. ಹೀಗಾಗಿ, ಇನ್ಮುಂದೆ ಠೇವಣಿ, ನಗದೀಕರಣ ಮೊತ್ತಕ್ಕೂ ಮಿತಿ ನಿಗದಿಯಾಗಲಿದೆ. ದಿನಕ್ಕೆ 25,000 ರು ನಗದು ವಹಿವಾಟು ಮಿತಿ ಮೀರಿದರೆ ಪ್ರತಿ 1,000 ರುಗೆ 5 ರು ನಂತೆ ಅಥವಾ ಕನಿಷ್ಠ 150 ರು ಶುಲ್ಕ ತೆರಬೇಕಾಗುತ್ತದೆ. ಒಂದು ವೇಳೆ ನಿಮ್ಮ ಖಾತೆ ಹೋಂ ಬ್ರ್ಯಾಂಚ್ ನಲ್ಲಿಲ್ಲದಿದ್ದರೆ ಈ ಶುಲ್ಕದ ಮೊತ್ತದ ಹೆಚ್ಚಾಗಲಿದೆ. ಆದರೆ, ಕೆಲ ಖಾತೆಗಳಿಗೆ ವಿನಾಯಿತಿ ಕೂಡಾ ನೀಡಲಾಗಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications