ಜಯಾಗೆ ಕಾಡಿದ ರಾಹು ಕಾಲ ಯಮಗಂಡ ಕಾಲ!
ಬೆಂಗಳೂರು, ಅ. 18 : ಸುಪ್ರೀಂ ಕೋರ್ಟಿನಿಂದ ಜಾಮೀನು ಪಡೆದು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಶನಿವಾರ ಮಧ್ಯಾಹ್ನ ಹೊರಬರುತ್ತಿರುವ ಜಯಲಲಿತಾ ಪ್ರತಿಯೊಂದು ನಡೆಗೂ ಮುಹೂರ್ತ ಫಿಕ್ಸ್ ಮಾಡುತ್ತಿದ್ದಾರೆ. ಇದೇಕ್ಷಣ ಅವರಿಗೆ ಜೈಲಿನಿಂದ ಹೊರಬರಲು ಕೋರ್ಟ್ ಅನುಮತಿ ಪತ್ರ ನೀಡಿದರೂ ಅವರು ಹೊರಬರುವುದು ಮಧ್ಯಾಹ್ನ 3.30ರ ನಂತರವೇ.
ಅದೇಕೆಂದರೆ, ಕಾವೇರಿ ತೀರ್ಥೋದ್ಭವವಾದ ಮರುದಿನ ತುಲಾ ಸಂಕ್ರಮಣದಂದು ಮಧ್ಯಾಹ್ನ 1ರಿಂದ 3.30ರವರೆಗೆ ಯಮಗಂಡಕಾಲವಿರುವುದರಿಂದ, ಅವರ ರಾಜಕೀಯ ಭವಿಷ್ಯತ್ತಿನ ದೃಷ್ಟಿಯಿಂದ ಅವರು ಮಧ್ಯಾಹ್ನ 3.30ರ ನಂತರವೇ ಜೈಲಿನಿಂದ ಹೊರಗೆ ಕಾಲಿಡುವುದು ಶ್ರೇಯಸ್ಕರ ಎಂದು ಅವರ ಆಪ್ತ ಜ್ಯೋತಿಷಿ ಸಲಹೆ ನೀಡಿದ್ದಾರೆ.
ಹೀಗಾಗಿ, ಖುಷಿ ತಾಳಲಾರದೆ 'ಅಮ್ಮಾ ಎಂಗೆ, ಅಮ್ಮಾ ಎಂಗೆ ವರುವಾರ್' ಎಂದು ಹೊರಬಟ್ಟೆ ತೊಟ್ಟು ಆನಂದಭಾಷ್ಪ ಸುರಿಸುತ್ತ ಪರಪ್ಪನ ಅಗ್ರಹಾರದ ಸುತ್ತ ನೆರೆದಿರುವ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಇನ್ನೂ ಕೆಲಹೊತ್ತು ಅಲ್ಲಿ ಠಿಕಾಣಿ ಹೂಡಬೇಕಾಗಿದೆ. [ಜಯಲಲಿತಾ ಬಿಡುಗಡೆ ಲೈವ್]

ಅಷ್ಟು ಮಾತ್ರವಲ್ಲದೆ, ಅವರು ಚೆನ್ನೈನ ಪೋಯೆಸ್ ಗಾರ್ಡನ್ ಪ್ರವೇಶಿಸಲು ಕೂಡ ಮುಹೂರ್ತ ನಿಗದಿಯಾಗಿದೆ. ಸೂರ್ಯಾಸ್ತವಾದ ನಂತರವೇ ಅವರು ಗೃಹ ಪ್ರವೇಶ ಮಾಡಬೇಕೆಂದು ಅದೇ ಜ್ಯೋತಿಷಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜಯರಾಂ ಅವರಿಗೆ ಸೂಚನೆ ನೀಡಿದ್ದಾರೆ.
ಯಮಗಂಡಕಾಲದಲ್ಲಿ ಜೈಲಿಂದ ಹೊರಬಂದರೆ ಮತ್ತೇನಾದರೂ ಯಡವಟ್ಟಾದೀತೆಂದು ಜ್ಯೋತಿಷಿಗಳ ಲೆಕ್ಕಾಚಾರ. ಮತ್ತೊಂದು ವಿಚಾರವೆಂದರೆ, ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದ ದಿನ ಕೂಡ ಜಯಲಲಿತಾ ಅವರು ನಿಗದಿಯಾಗಿದ್ದ 10.45ಕ್ಕೆ ನ್ಯಾಯಾಲಯ ಪ್ರವೇಶಿಸದೆ ರಾಹುಕಾಲದ ನಂತರ 10.50ಕ್ಕೆ ಪ್ರವೇಶಿಸಿ, ಐದು ನಿಮಿಷಗಳ ಕಾಲ ನ್ಯಾಯಾಧೀಶ ಕುನ್ಹಾ ಅವರು ಕಾಯುವಂತೆ ಮಾಡಿದ್ದರು. [ಕುಡ್ಲದ ನ್ಯಾಯಮೂರ್ತಿ ಕುನ್ಹಾ]
ಕಾವೇರಿಯಲ್ಲಿ ಜಯಾ ಮುಳುಗೇಳಲಿ : ಅ.18ರಿಂದ ತುಲಾ ಮಾಸ ಆರಂಭವಾಗಿದೆ. ತಮಿಳುನಾಡಿನ ಶ್ರೀರಂಗಂನಲ್ಲಿರುವ ಕಾವೇರಿ ನದಿಯಲ್ಲಿ ಈ ಮಾಸದಲ್ಲಿ ಮುಳುಗೆದ್ದು, ಸಪ್ತ ಪ್ರಾಕಾರ ಪ್ರದಕ್ಷಿಣೆ ಮಾಡಿ, ಶೇಷಶಯನ ರಂಗನಾಥನ ದರುಶನ ಮಾಡಿದರೆ ಏಳೇಳು ಜನ್ಮಗಳ ಪಾಪಗಳೆಲ್ಲ ಪರಿಹಾರವಾಗುತ್ತವೆ ಎಂಬ ನಂಬಿಕೆಯಿದೆ. ಈ ನಿಟ್ಟಿನಲ್ಲಿ, ಜಯಲಲಿತಾ ಕೂಡ ತಮಿಳುನಾಡಿಗೆ ಹೋಗುತ್ತಿದ್ದಂತೆ, ತಮ್ಮದೇ ಕ್ಷೇತ್ರವಾಗಿರುವ ಶ್ರೀರಂಗಂನಲ್ಲಿ ಕನ್ನಡಿಗರ ಜೀವನಾಡಿ ಕಾವೇರಿಯಲ್ಲಿ ಮೂರು ಸಲ ಮುಳುಗುಹಾಕಲಿ.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications