ಮಲೇರಿಯಾ ಬಗ್ಗೆ ತಿಳಿಯಲೇಬೇಕಾದ 10 ಸಂಗತಿಗಳು
ಬೆಂಗಳೂರು, ಏಪ್ರಿಲ್ 25 : ಫಿಮೇಲ್ ಅನಾಫಿಲಿಸ್! ಚಿಕೂನ್ ಗೂನ್ಯ, ಎಚ್1ಎನ್1, ಡೆಂಗ್ಯೂ ರೋಗಗಳ ದಾಂಗುಡಿಯಲ್ಲಿ 'ಫಿಮೇಲ್ ಅನಾಫಿಲಿಸ್' ಸೊಳ್ಳೆ ಕಡಿತದಿಂದ ಹರಡಿ, ರೋಗಿಗಳ ಮರಣಶಾಸನ ಬರೆಯುವ ರೋಗ ಮಲೇರಿಯಾ ಮರೆತೇಹೋಗಿರಬಹುದು.
ಮಲೇರಿಯಾ ಇನ್ನೂ ಮರೆಯಾಗಿಲ್ಲ. ಜಾಗತಿಕವಾಗಿ ಅತೀಹೆಚ್ಚು ಜನರನ್ನು ಬಲಿತೆಗೆದುಕೊಳ್ಳುತ್ತಿರುವ ರೋಗವೆಂದರೆ ಮಲೇರಿಯಾನೇ ಎಂದು ಅಧ್ಯಯನವೊಂದು ಹೇಳುತ್ತದೆ. ಈ ಮಲೇರಿಯಾ ಬಗ್ಗೆ ಈಗ ಬರೆಯಲು ಕಾರಣವೇನೆಂದರೆ, ಏಪ್ರಿಲ್ 25 'ವಿಶ್ವ ಮಲೇರಿಯಾ ದಿನ'!
ಮಾರಣಾಂತಿಕ ಸೊಳ್ಳೆ ಕಡಿತದಿಂದ ದೂರವಿರುವುದೇ ಸದ್ಯಕ್ಕಿರುವ ಅತ್ಯುತ್ತಮ ಮಾರ್ಗ. ವಿಪರೀತ ಜ್ವರ, ತಲೆನೋವು, ಚಳಿ, ವಾಂತಿಯಾಗುವುದು ಈ ರೋಗದ ಲಕ್ಷಣ. ಸೂಕ್ತ ಪರೀಕ್ಷೆಯ ನಂತರ ಕಂಡುಹಿಡಿಯಬಹುದಾಗಿದೆ. ನಿರ್ಲಕ್ಷಿಸಿದರೆ ಜೀವ ತೆಗೆಯಲೂ ಈ ರೋಗ ಹೇಸುವುದಿಲ್ಲ.
ಎಲ್ಲೆಂದರಲ್ಲಿ ಕಸ ಬಿಸಾಕುವುದು, ಕೊಳಚೆ ನೀರು ನಿಲ್ಲದಂತೆ ಪರಿಸರವನ್ನು ಸ್ವಚ್ಛವಾಗಿಡುವುದು, ಹೂಕುಂಡ ಮುಂತಾದ ವಸ್ತುವಿನಲ್ಲಿ ಕೂಡ ನೀರು ಬಹಳದಿನಗಳ ಕಾಲ ನಿಲ್ಲದಂತೆ ಎಚ್ಚರ ವಹಿಸುವುದು ಸದ್ಯಕ್ಕೆ ನಾವು ಮಾಡಬೇಕಾದ ಕ್ರಮಗಳು. ಎಲ್ಲಕ್ಕಿಂತ ಮಕ್ಕಳಲ್ಲಿ ಈ ಕುರಿತು ಜಾಗ್ರತೆ ಮೂಡಿಸಬೇಕು. [ನಗಬೇಡಿ, ಆಗಸ್ಟ್ 20 ವಿಶ್ವ ಸೊಳ್ಳೆ ದಿನಾಚರಣೆ!]

ಈ ಖತರ್ನಾಕ್ ರೋಗದ ಬಗ್ಗೆ ಕೆಲ ಆಸಕ್ತಿಕರ ಸಂಗತಿಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಒದಗಿಸಿದ್ದು, ಅವುಗಳತ್ತ ಒಂದು ನೋಟ ಬೀರೋಣ.
* ಸೊಳ್ಳೆ ಎಲ್ಲಿರಲ್ಲ? ಹೀಗಾಗಿ, ಜಗತ್ತಿನ ಅರ್ಧಕ್ಕರ್ಧ ಜನರಿಗೆ (3.2 ಬಿಲಿಯನ್) ಈ ರೋಗ ಬರುವ ಸಾಧ್ಯತೆಗಳಿರತ್ತೆ.
* 2015ರಲ್ಲಿ ಜಗತ್ತಿನಾದ್ಯಂತ 214 ಮಿಲಿಯನ್ ಹೊಸ ಮಲೇರಿಯಾ ಪ್ರಕರಣಗಳು ದಾಖಲಾಗಿವೆ.
* ಕಳೆದ ವರ್ಷ 4 ಲಕ್ಷ 38 ಸಾವಿರ ಜನರು ಮಲೇರಿಯಾದಿಂದ ಸಾವಿಗೀಡಾಗಿದ್ದಾರೆ. [ಸೊಳ್ಳೆ ದಿನಾಚರಣೆ ಬಗ್ಗೆ ಸೊಲ್ಲೆತ್ತಿದ ಅಮಿತಾಬ್ ಬಚ್ಚನ್!]
* ಶೇ.90ರಷ್ಟು ಸಾವು ಆಫ್ರಿಕಾ ಖಂಡದಲ್ಲಾಗಿದ್ದರೆ, ಶೇ.7ರಷ್ಟು ಆಗ್ನೇಯ ಏಷ್ಯಾದಲ್ಲಿ ಸಂಭವಿಸಿದೆ.
* ಈ ರೋಗಕ್ಕೆ ಹೆಚ್ಚಾಗಿ ಮಕ್ಕಳೇ ಬಲಿಯಾಗುತ್ತಿರುವದು ನಿಜಕ್ಕೂ ದುರದೃಷ್ಟಕರ ಸಂಗತಿ. ಸಾವಿಗೀಡಾದ 5 ವರ್ಷಕ್ಕಿಂತ ಕೆಳಗಿನ ಮಕ್ಕಳ ಸಂಖ್ಯೆ 306,000. ಇದರಲ್ಲಿ ಆಫ್ರಿಕಾದಲ್ಲಿ ಸತ್ತವರ ಸಂಖ್ಯೆ 292,000
* 2000 ಮತ್ತು 2015ರ ನಡುವೆ ಹೊಸ ಮಲೇರಿಯಾ ಪ್ರಕರಣಗಳ ಸಂಖ್ಯೆ ಜಾಗತಿಕವಾಗಿ ಶೇ.37ರಷ್ಟು ಮತ್ತು ಆಫ್ರಿಕಾದಲ್ಲಿ ಶೇ.42ರಷ್ಟು ತಗ್ಗಿದೆ. ಇದರಿಂದಾಗಿ ಶೇ.60ರಷ್ಟು ಸಾವಿನ ಪ್ರಮಾಣವೂ ಕಡಿಮೆಯಾಗಿದೆ.
* ಮೊತ್ತಮೊದಲ ಬಾರಿಗೆ 2015ರಲ್ಲಿ ಯುರೋಪ್ ಪ್ರಾಂತ್ಯದಲ್ಲಿ ಮಲೇರಿಯಾದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
* 2015ರಲ್ಲಿ 97 ರಾಷ್ಟ್ರಗಳಲ್ಲಿ ಹೆಣ್ಣು ಅನಾಫಿಲಿಸ್ ಸೊಳ್ಳೆ ತನ್ನ ಆಟಾಟೋಪ ನಡೆಸಿದೆ.
* ದುರಾದೃಷ್ಟದ ಸಂಗತಿಯೆಂದರೆ, ಇಲ್ಲಿಯವರೆಗೆ ಖಚಿತವಾದ ಔಷಧಿಯನ್ನು ಕಂಡುಹಿಡಿಯಲಾಗಿಲ್ಲ.
* ಆರ್ಟಿಎಸ್ಎಸ್ ಎಂಬ ಚುಚ್ಚುಮದ್ದನ್ನು ಜಾಗತಿಕವಾಗಿ, ಅದರಲ್ಲೂ ಆಫ್ರಿಕಾ ರಾಷ್ಟ್ರಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಇದು ಪರಿಣಾಮಕಾರಿಯಾಗಿಯೂ ಕೆಲಸ ಮಾಡುತ್ತಿದೆ. ಆದರೆ, ಆಫ್ರಿಕಾದ ಹೊರಗೆ ಹಬ್ಬುತ್ತಿರುವ ಪಿ.ವಿವಾಕ್ಸ್ ಮಲೇರಿಯಾಗೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications