ಹೇಮಮಾಲಿನಿ ಕೆನ್ನೆ ತರ ಆಗ್ಲೇ ಇಲ್ಲ ನೋಡಿ ನನ್ ಮನೇ ರೋಡು!
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಬಿಬಿಎಂಪಿಯಲ್ಲಿ ಮೇಯರ್ ಮತ್ತು ಉಪಮೇಯರ್ ಹುದ್ದೆ ಹುಡುಕಿಕೊಂಡು ಬಂದ ನಂತರ, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ನಾಲ್ಕು ಒಳ್ಳೆ ಕೆಲ್ಸ ಮಾಡ್ಬಹುದು ಅನ್ನೋ ಆಸೆ ಸದ್ಯದ ಮಟ್ಟಿಗೆ ಕಮರಿ ಹೋಗಿದೆ.
ಅಧಿಕಾರ ಸ್ವೀಕರಿಸಿದ ಹೊಸದರಲ್ಲಿ ಹುಮ್ಮಸ್ಸಿನಿಂದಲೇ ಕೆಲಸ ಆರಂಭಿಸಿದ್ದ ಮೇಯರ್ ಸಾಹೇಬ್ರು, ಬೆಂಗಳೂರಿನ ಕಸದ ಸಮಸ್ಯೆಗೆ ಮತ್ತು ಕುಲಗೆಟ್ಟು ಹೋಗಿರುವ ರಸ್ತೆಗಳಿಗೆ ಆದ್ಯತೆಯ ಮೇರೆಗೆ 'ಟಾರ್ ಭಾಗ್ಯ' ಕರುಣಿಸ ಬಹುದು ಅನ್ನೋ ಜನರ ಲೆಕ್ಕಾಚಾರ ಎಂಬತ್ತು ದಿನವಾಗುತ್ತಾ ಬಂದರೂ ನಿಜವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.
ರಸ್ತೆ ಮಧ್ಯೆ ಗುಂಡಿ ಇದೆಯೋ ಅಥವಾ ಗುಂಡಿಯ ಮಧ್ಯೆ ರಸ್ತೆ ಇದೆಯೋ ಅನ್ನೋ ರೀತಿಯಲ್ಲಿದೆ ಬೆಂಗಳೂರಿನ ರಸ್ತೆಗಳು (ಸಿಎಂ, ಸಚಿವರುಗಳು ಹೆಚ್ಚಾಗಿ ಓಡಾಡುವ ರಸ್ತೆಗಳನ್ನು ಹೊರತು ಪಡಿಸಿ). ಯಾವ ಹಳ್ಳದಿಂದ ಅದೇನೂ ಕಾದಿದೆಯೋ ಅನ್ನುವಂತಾಗಿದೆ ದ್ವಿಚಕ್ರ ವಾಹನ ಚಾಲಕರ ಪರದಾಟ. (ಸಚಿವ ಜಾರ್ಜ್ ಬೆಂಗಳೂರು ರೌಂಡ್ಸ್)

ಕಸದ ಮತ್ತು ರಸ್ತೆ ಸಮಸ್ಯೆಗೆ ಪರ್ಮನೆಂಟ್ ಪರಿಹಾರ ಬಿಡಿ, ಟೆಂಪರರಿ ಪರಿಹಾರದ ಸುದ್ದಿಯೂ ಇಲ್ಲ. ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಗರದ ಕಸದ ಸಮಸ್ಯೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮೇಲ್ದರ್ಜೆಗೇರಿಸಿದ್ದ ರಾಷ್ಟ್ರೀಯ ವಾಹಿನಿಗಳಿಗೆ ಈಗ ಗಬ್ಬು ನಾರುತ್ತಿರುವ ಕಸಗಳು ಸುಗಂಧದ್ರವ್ಯದಂತಿದೆಯೋ ಗೊತ್ತಿಲ್ಲ.
ಬೆಂಗಳೂರಿನ ಆಳವನ್ನು ಅರಿತಿರುವ ರಾಮಲಿಂಗ ರೆಡ್ಡಿಯವರನ್ನು ಉಸ್ತುವಾರಿಯಿಂದ ಎತ್ತಂಗಡಿ ಮಾಡಿದ್ದು, ಸಮಸ್ಯೆ ಪರಿಹಾರದ ವಿಳಂಬಕ್ಕೆ ಇನ್ನೊಂದು ಕಾರಣ ಇದ್ದರೂ ಇರಬಹುದು. ನಗರದ ಕಸ, ರಸ್ತೆ ಗುಂಡಿಗೆ ಬಿಬಿಎಂಪಿ, ಸರಕಾರ ಕಾರಣ ಅಲ್ಲ ಅನ್ನೋ ಈಗಿನ ನಗರದ ಉಸ್ತುವಾರಿ ಕೆ ಜೆ ಜಾರ್ಜ್ ನೀಡಿರುವ ಹೇಳಿಕೆ ಎಂಥಹಾ ಬಾಲ್ಯಾವಸ್ಥೆಯದ್ದದ್ದು ನೋಡಿ.
ನಾನು ವಾಸವಾಗಿರುವ ಪ್ರದೇಶ ಬೆಂಗಳೂರಿನ ಗ್ರಾಮಾಂತರ ಪ್ರದೇಶವೇನೂ ಅಲ್ಲ, ಕುಗ್ರಾಮವಂತೂ ಅಲ್ಲವೇ ಅಲ್ಲ. ನಗರದ ಹೃದಯ ವ್ಯಾಪ್ತಿಯಲ್ಲಿ ಬರುವ ವಿದ್ಯಾಪೀಠ ವಾರ್ಡಿನಲ್ಲಿರೋದು. ಇದು easy accessible ಎಂದೇ ಹೆಸರಾಗಿರುವ ಬಸವನಗುಡಿಯ ಶಾಸಕ ರವಿ ಸುಬ್ರಮಣ್ಯ ಅವರ ಅಸೆಂಬ್ಲಿ ಕ್ಷೇತ್ರ ವ್ಯಾಪ್ತಿಯದ್ದು.
5-6 ತಿಂಗಳ ಹಿಂದೆ ಹೆಚ್ಚುಕಮ್ಮಿ ಹೇಮಾಮಾಲಿನಿ ಕೆನ್ನೆಯಂತೇ ಇತ್ತು ನಮ್ ಮನೇ ರಸ್ತೆ. ಹಾಗಂತ ಹೇಮಾಮಾಲಿನಿ ಕೆನ್ನೆಯ ಬಗ್ಗೆ ನಿಮಗೆ ಹೇಗೆ ಗೊತ್ತು ಅಂಥಾ ಅಪಾರ್ಥ ಮಾಡಿಕೊಳ್ಳಬೇಡಿ, ಅದೊಂದು ಆಡುಭಾಷೆ ಅಷ್ಟೇ. ಚೆನ್ನಾಗಿದ್ದ ರೋಡಿಗೆ ಒಳಚರಂಡಿ ಇಲಾಖೆಯ ವಕ್ರದೃಷ್ಟಿ ಬಿದ್ದಿದ್ದೇ ರಸ್ತೆ ಕುಲಗೆಟ್ಟಲು ಹೋಗಲು ಕಾರಣವಾಯಿತು.
ಟಾರ್ ಹಾಕಿದ ಮೇಲೆ ರಸ್ತೆ ಅಗಿಯೋದು ನಮ್ಮ ರಾಜಕೀಯ ವ್ಯವಸ್ಥೆಯ ಒಂದು ಭಾಗವಾಗಿರುವುದರಿಂದ, ಬೆಂಗಳೂರಿನ ರಸ್ತೆಗಳಿಗೆ ಆಯುಸ್ಸು ಕಮ್ಮಿ. ಮೂರು ಬಾರಿ ಮುಂದೂಡಲ್ಪಟ್ಟ ಬಿಬಿಎಂಪಿ ಚುನಾವಣೆ, ಚುನಾವಣಾ ನೀತಿಸಂಹಿತೆಯಿಂದ ಐದಾರು ತಿಂಗಳಿನಿಂದ ಅಧ್ವಾನವಾಗಿರುವ ವಿದ್ಯಾಪೀಠ ವಾರ್ಡಿನ ಈ ರಸ್ತೆ, ಮಳೆಯಿಂದಾಗಿ ಗುಂಡಿಯ ನಡುವಿರುವ ರಸ್ತೆಯಂತಾಗಿದೆ. (ಬೆಂಗಳೂರು ರಸ್ತೆಗಳ ಗುಂಡಿ ಮುಚ್ಚಲು 11 ಕೋಟಿ)

ಮೊದಲ ಬಾರಿಗೆ ಚುನಾವಣೆ ಗೆದ್ದಿರುವ ಈ ವಾರ್ಡಿನ ಬಿಜೆಪಿ ಕಾರ್ಪೋರೇಟರ್ (ವಾರ್ಡ್ ನಂ. 164) ಶ್ರೀಮತಿ ಶ್ಯಾಮಲಾ ಸಾಯಿಕುಮಾರ್ ಅವರನ್ನು ಸಂಪರ್ಕಿಸಿದಾಗ, ಆದಷ್ಟು ಬೇಗ ಎಲ್ಲಾ ಸರಿಹೋಗುತ್ತೆ ಎನ್ನುವ ಭರವಸೆ ಮಾತು ಹೊರಬರುತ್ತೆ. ನೋಡೋಣ?
ನಗರದ ಪ್ರಮುಖ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ಸದ್ಯದ ಮಟ್ಟಿಗೆ ಆರಂಭವಾಗಿದ್ದರೂ, ಹಣ ಬಿಡುಗಡೆಯ ವಿಚಾರದಲ್ಲಿ ಬಿಬಿಎಂಪಿ/ಸರಕಾರದ ತಾರತಮ್ಯ ಬಿಜೆಪಿ ವಾರ್ಡಿನ ಬೆಂಗಳೂರಿಗರಿಗೆ ಖುಷಿ ಕೊಡುವ ವಿಚಾರವಂತೂ ಅಲ್ಲವೇ ಅಲ್ಲ ಎನ್ನುವುದು ಆಫ್ ದಿ ರೆಕಾರ್ಡ್ ಮಾಹಿತಿ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Highways: ದೇಶದ 40,000 ಕಿಮೀ ಹೆದ್ದಾರಿಗೆ AI ಟಚ್, ನಿರ್ವಹಣೆ ಮತ್ತಷ್ಟು ಸುಲಭ, ಇಲ್ಲಿದೆ ಮಾಹಿತಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications