ವೀರ್ ಸಾವರ್ಕರ್ ಅಪರೂಪದ ದೇಶಭಕ್ತ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು ಡಿಸೆಂಬರ್ 19: ವೀರ್ ಸಾವರ್ಕರ್ ಅವರು ಒಬ್ಬ ಅಪರೂಪದ ದೇಶಭಕ್ತ. ಅವರ ವಿಚಾರಗಳು ಅಮರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ವೀರ್ ಸಾವರ್ಕರ್ ದಿ ಮ್ಯಾನ್ ಹು ಕುಡ್ ಹ್ಯಾವ್ ಪ್ರಿವೆಂಟೆಡ್ ಪಾರ್ಟಿಷನ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾವರ್ಕರ್ ಅವರ ದೇಶ ಪ್ರೇಮವನ್ನು ಹೊಗಳಿದ್ದಾರೆ. ನಿಲುಮೆ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ 'A man who could have prevented partition' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಸಾವರ್ಕರ್ ಅವರು ಒಬ್ಬ ಅಪರೂಪದ ದೇಶಭಕ್ತ. ಅವರ ವಿಚಾರಗಳು ಅಮರ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ರಾಜಕೀಯ ಸನ್ನಿವೇಶದಲ್ಲಿ ಈ ಪುಸ್ತಕ ಅತ್ಯಂತ ಪ್ರಸ್ತುತವಾಗಿದೆ. ವೈಚಾರಿಕವಾಗಿ ಸಂಸ್ಕೃತಿಯನ್ನೇ ಮುನ್ನಡೆಸುವ ಸಾಮರ್ಥ್ಯವಿರುವ ವೀರ್ ಸಾವರ್ಕರ್ ಅವರ ಬಗ್ಗೆ ಬರೆದಿರುವ ಪುಸ್ತಕ ಶೀರ್ಷಿಕೆಯೊಂದಿಗೆ ಆಸಕ್ತಿ ಹುಟ್ಟಿಸುತ್ತದೆ. ದೇಶ ವಿಭಜನೆ ನಮಗೆ ಬಹಳ ದೊಡ್ಡ ಘಾಸಿಯನ್ನುಂಟು ಮಾಡಿದೆ. ಅದರ ಪರಿಣಾಮಗಳ ಬಗ್ಗೆ ಯಾರೂ ಚಿಂತನೆ ಮಾಡಿಲ್ಲ. ನಮ್ಮ ಸಂಸ್ಕೃತಿಯನ್ನು ಅಡ್ಡಗಟ್ಟಿ ಅದನ್ನು ವಿಭಜಿಸುವ ಕೆಲಸವಾಗಿದೆ. ನಮ್ಮ ಸಂಸ್ಕೃತಿಯನ್ನು ಪರಿಪೂರ್ಣತೆಗೆ ತೆಗೆದುಕೊಂಡು ಹೋಗಲು ವೀರ ಸಾವರ್ಕರ್ ಅವರ ಅವಿಭಜಿತ ಹಿಂದೂ ಸಂಸ್ಕೃತಿಯನ್ನು ಸಾಕಾರಗೊಳಿಸುವುದು ಎಲ್ಲರ ಕರ್ತವ್ಯ ಎಂದರು.
ಆ ಕಾಲದಲ್ಲಿ ವೀರ್ ಸಾವರ್ಕರ್ ಅವರ ವೈಚಾರಿಕತೆಯಿಂದ ನಿರಂತರವಾಗಿ ಪ್ರಶ್ನೆಯನ್ನು ಎತ್ತಿ ಭಾರತ ದೇಶ ಮತ್ತು ಸಿಂಧು ಸಂಸ್ಕೃತಿಯನ್ನು ಎಚ್ಚರಿಸಿದ್ದರು. ನಾಗರೀಕತೆ ಮತ್ತು ಸಂಸ್ಕೃತಿಯ ಬಗ್ಗೆ ವೀರ ಸಾವರ್ಕರ್ ಅವರಿಗೆ ಬಹಳ ಸ್ಪಷ್ಟತೆ ಇತ್ತು. ವೀರ ಸಾವರ್ಕರ್ ಅವರು ಈ ಎರಡರ ಅರ್ಥವನ್ನು ಪರಿಪೂರ್ಣತೆ ಎಡೆಗೆ ಕೊಂಡೊಯ್ದಿದ್ದರು ಎಂದರು.

ಈ ಕಾಲದಲ್ಲಿ ಜಾಗತೀಕರಣ, ಖಾಸಗೀಕರಣಗಳ ಮಧ್ಯೆ ಅಂತಃಕರಣವನ್ನು ಮರೆಯಲಾಗಿದೆ. ಹೀಗಿರುವಾಗ ಕೇವಲ ನಮ್ಮ ಮೌಲ್ಯಗಳು ಹಾಗೂ ಸಂಸ್ಕೃತಿ ಮಾತ್ರ ಅಂತಕರಣವನ್ನು ಜಾಗೃತ ಗೊಳಿಸಲು ಸಾಧ್ಯ ಎಂದು ವೀರ ಸಾವರ್ಕರ್ ತೋರಿಸಿಕೊಟ್ಟರು. ಬೇರೆ ಬೇರೆ ಪ್ರದೇಶದಲ್ಲಿರುವ ವಿಚಾರಗಳಿಗೂ ನಮ್ಮ ವಿಚಾರಗಳಿಗೂ ಬಹಳ ವ್ಯತ್ಯಾಸವಿದೆ. ನಮ್ಮ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಹಿಂದೂ ಸಂಸ್ಕೃತಿ ಸ್ಥಾಪನೆಯಾಗಿದೆ. ಸಂಸ್ಕೃತಿ ಎಂದರೆ ಮಾನವೀಯತೆ, ಎಲ್ಲರನ್ನು ಗೌರವಿಸುವುದು. ವೀರ್ ಸಾವರ್ಕರ್ ಅವರು ಬ್ರಿಟಿಷರಿಗೆ ಮುಳ್ಳಾಗಿದ್ದರು. ಅವರ ಮೌಲ್ಯಗಳು, ವಿಚಾರಗಳಿಂದ ಅವರು ಎಲ್ಲರಿಗಿಂತ ವಿಭಿನ್ನ ಎನಿಸಿದರು. ಸ್ವಾತಂತ್ರ್ಯ ಹೋರಾಟಗಾರರ ನಡುವೆಯೂ ಅವರು ಬಂಡಾಯಗಾರರಾಗಿದ್ದರು. ವೀರ ಸಾವರ್ಕರ್ ಅವರನ್ನು ಭಾರತದಲ್ಲಿ ಬಿಟ್ಟರೆ ದೇಶವನ್ನು ಬಿಟ್ಟು ಹೊರಡಬೇಕು ಎಂದು ತಿಳಿದಿತ್ತು. ಬ್ರಿಟಿಷರಿಗೆ ನಿಜವಾದ ಪರಮಾಣು ಬಾಂಬ್ ಆಗಿದ್ದರು. ಅಗಾಧ ಶಕ್ತಿಯನ್ನು ಹೊಂದಿದ್ದರು. ಹಾಗಾಗಿಯೇ ಅವರನ್ನು ದೇಶದಿಂದ ಹಾಗೂ ದೇಶದ ಜನರಿಂದ ಅವರನ್ನು ಬೇರ್ಪಡಿಸಲಾಯಿತು ಎಂದರು.

ಅವರೊಬ್ಬ ಹಿಂದೂ ರಾಷ್ಟ್ರದ ಬಗ್ಗೆ ಸ್ಪಷ್ಟತೆ ಇದ್ದ ಕ್ರಾಂತಿಕಾರಿಯಾಗಿದ್ದರು ಎಂದೇ ಬ್ರಿಟಿಷರು ಅವರನ್ನು ಕಾಲಾಪಾನಿಗೆ ಕಳುಹಿಸಿದರು. ಹಿಂದೂ ರಾಜ್ಯಗಳ ಮಧ್ಯೆ ಭಿನ್ನಾಭಿಪ್ರಾಯಗಳು ಇರುವವರೆಗೂ ಬ್ರಿಟಿಷರು ತಾವು ಸುರಕ್ಷಿತವಾಗಿ ಇದ್ದೇವೆ ಎಂದು ಭಾವಿಸಿದ್ದರು. ವೀರ ಸಾವರ್ಕರ್ ಹಿಂದುತ್ವದ ಬಗ್ಗೆ ಮಾತನಾಡಲು ತೊಡಗಿದ ಕೂಡಲೇ ಹಿಂದೂ ರಾಜ್ಯಗಳು ಒಂದಾಗತೊಡಗಿದವು. ಹೀಗೆ ಆದ ಕೂಡಲೇ ಬ್ರಿಟಿಷರಿಗೆ ತಮ್ಮ ದಿನಗಳು ಭಾರತದಲ್ಲಿ ಕೊನೆಯಾಗಲಿದೆ ಎಂದು ಮನವರಿಕೆಯಾಯಿತು. ಇದು ಹಿಂದುತ್ವದ ಶಕ್ತಿ. ಇತಿಹಾಸವನ್ನು ಸರಿಯಾಗಿ ಓದಿದರೆ ಮಾತ್ರ ಭವಿಷ್ಯವನ್ನು ಕಟ್ಟಲು ಸಾಧ್ಯ ಎಂದರು. ಹಿಂದುತ್ವ, ಹಿಂದೂ ವಿಚಾರಗಳನ್ನು ಗಟ್ಟಿಯಾಗಿ ಬ್ರಿಟಿಷರ ಹೊಡೆತಕ್ಕೆ ತಾಳಿದವರು ಸಾವರ್ಕರ್. ಯಾವುದೇ ವಿಚಾರವನ್ನು ಮುಲಾಜಿಲ್ಲದೆ ಹೇಳುವಂತವರಾಗಿದ್ದರು, ಯಾವುದಕ್ಕೂ ಜೋತುಬಿದ್ದಿರಲ್ಲಿಲ್ಲ. ಆದರೆ ಮತ್ತೊಬ್ಬರ ವಿಚಾರವನ್ನು ಗೌರವಿಸುವ ದೊಡ್ಡ ಗುಣವಿತ್ತು.
ವೀರ್ ಸಾವರ್ಕರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು ಒಂದಾಗಬೇಕೆಂದರೆ ಅಸ್ಪೃಶ್ಯತೆ ಹೋಗಬೇಕು. ಇದು ನಮ್ಮ ದೇಶದ ಒಗ್ಗಟ್ಟಿಗೆ ಮಾರಕ ಎನ್ನುವುದು ಇಬ್ಬರಿಗೂ ತಿಳಿದಿತ್ತು. ಬ್ರಿಟಿಷರು ಅಸ್ಪೃಶ್ಯತೆಯನ್ನು ದೇಶ ಒಡೆಯಲು ಬೆಳೆಸಿದರು. ನಮ್ಮ ನಮ್ಮಲ್ಲಿ ಜಾತಿ ಉಪ ಜಾತಿಗಳನ್ನು ಬೆಳೆಸಿದರು. ಮುಂದೆ ಬಂದ ಸರ್ಕಾರಗಳು ಅಸ್ಪೃಶ್ಯತೆಯ ನಿವಾರಣೆಯ ಹೆಸರಿನಲ್ಲಿ ಅದು ಇರುವಂತೆ ನೋಡಿಕೊಂಡರು.ಅಸ್ಪೃಶ್ಯತೆಯ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಕಿತ್ತೊಗೆಯಬೇಕು. ಇದು ನಮ್ಮ ಧ್ಯೇಯ. ಇದು ಸಾವರ್ಕರ್ ಅವರ ಧ್ಯೇಯ ಎಂದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು, ಶಾಸಕ ಎನ್.ಮಹೇಶ್ ಹಾಗೂ ನಿಲುಮೆ ಪ್ರತಿಷ್ಠಾನದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications