4,500 ರುಪಾಯಿ ಮೈಸೂರು ಸಿಲ್ಕ್ ಸೀರೆ ಬಗ್ಗೆ ಪೂರ್ತಿ ಡೀಟೇಲ್ಸ್
Recommended Video

ಎದುರು ಮನೆ ಸಂಧ್ಯಾ, ಪಕ್ಕದ ಮನೆ ರೂಪಾ, ಮಹಡಿ ಮನೆಯ ಸ್ವಾತಿ, ಬೀದಿ ಕೊನೆಯ ಅಲುಮೇಲು... ಎಲ್ಲರದೂ ಅದೇ ಚರ್ಚೆ. ಯಾವಾಗ ರೇಷ್ಮೆ ಸೀರೆ ತರುವುದಕ್ಕೆ ಹೋಗೋದು, ಒಬ್ಬೊಬ್ಬರು ತಲಾ ಎಷ್ಟು ಸೀರೆ ಖರೀದಿ ಮಾಡೋದು? ವಾಟ್ಸಾಪ್ ಗ್ರೂಪ್ ಗಳಲ್ಲಂತೂ ಸೀರೆ ಬಣ್ಣದ ಆಯ್ಕೆ ಕೂಡ ಇದು ಎಂಬುದೇ ಹರಿದಾಡುತ್ತಿದೆ.
ಈ ಸಲ ವರಮಹಾಲಕ್ಷ್ಮಿ ಹಬ್ಬಕ್ಕೆ ಏನು ಸ್ಪೆಷಲ್ ಅಂದರೆ, ಖಂಡಿತಾ ಮೈಸೂರು ಸಿಲ್ಕ್ ರೇಷ್ಮೆ ಸೀರೆ ಅಂತಲೇ ಉತ್ತರ ಹೇಳುವ ಸಾಧ್ಯತೆ ಇದೆ. ಈ ಸಲವಾದರೂ ಮೈಸೂರು ಸಿಲ್ಕ್ ಕೊಡಿಸಿ ಎಂದು ಗಂಡನ ಸ್ವಾಟೆ ತಿವಿಯುವ ಹೆಂಡತಿಯರು, ಅವರನ್ನೇನು ಕೇಳೋದು, ಕೊಡಸ್ಬೇಕ್ ಅಷ್ಟೇ ಅಂತ ಥೇಟ್ 'ಹುಚ್ಚ ವೆಂಕಟ್' ಫೀಮೇಲ್ ವರ್ಷನ್ ನಲ್ಲಿ ಡೈಲಾಗ್ ಕೂಡ ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ.
ಸಚಿವ ಸಾ.ರಾ.ಮಹೇಶ್ ಈಗ ರಾಜ್ಯದ ಮಹಿಳೆಯರ ದೃಷ್ಟಿಯಲ್ಲಿ ಹೀರೋ ಆಗಿಬಿಟ್ಟಿದ್ದಾರೆ. ಮೈತ್ರಿ ಸರಕಾರದಲ್ಲಿ ಏನೇ ಕಚ್ಚಾಟ, ಅಸಮಾಧಾನ ಅಂತ ಇದ್ದರೂ ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳನ್ನು ವರ ಮಹಾಲಕ್ಷ್ಮಿ ಹಬ್ಬಕ್ಕೆ 4,500 ರುಪಾಯಿಗೆ ಮಾರಾಟ ಮಾಡುವ ಘೋಷಣೆಯನ್ನು ಸಚಿವರು ಮಾಡಿದ ಮೇಲಂತೂ ವಾಟ್ಸಾಪ್, ಫೇಸ್ ಬುಕ್ ಎಲ್ಲ ಕಡೆ ಅದೇ ಸುದ್ದಿ.
ಈ ಯೋಜನೆ ಹಿಂದಿರುವುದು ಸಾ.ರಾ.ಮಹೇಶ್ ಎಂಬ ಸಂಗತಿ ಎಷ್ಟು ಮಹಿಳೆಯರಿಗೆ ಗೊತ್ತಿದೆಯೋ ತಿಳಿಯದು. ಆದರೆ ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳನ್ನು ಮಾರಾಟ ಮಾಡುವ ಮಳಿಗೆ ಎಲ್ಲಿದೆ ಎಂದು ಮಹಿಳೆಯರು ಹುಡುಕಲು ಶುರು ಮಾಡಿದ್ದಾರೆ.ಆ ಸೀರೆ ಯಾವಾಗ ಬರುತ್ತದೆ ಎಂಬುದನ್ನು ಕೇಳುತ್ತಿದ್ದಾರೆ. ಅಲ್ಲಿಗೆ ಈ ಯೋಜನೆಯ ಉದ್ದೇಶ ಆರಂಭದಲ್ಲೇ ತಕ್ಕ ಮಟ್ಟಿಗೆ ಯಶಸ್ಸು ಕಂಡಂತೆ ಆಗಿದೆ.
ಆದರೆ, ಈಗ 4,500 ರುಪಾಯಿಗೆ ಮಾರಾಟ ಮಾಡಲು ಮುಂದಾಗಿರುವುದು ಪ್ರಿಂಟೆಡ್ ರೇಷ್ಮೆ ಸೀರೆ ಎಂಬುದು ಗಮನದಲ್ಲಿರಲಿ. ಅದಕ್ಕೆ ಜರಿ ಇರುವುದಿಲ್ಲ. ಮೈಸೂರು ಸಿಲ್ಕ್ ಸೀರೆಯಲ್ಲಿ ಜರಿಗೆ ಬೆಳ್ಳಿ ಹಾಗೂ ಚಿನ್ನದ ಎಳೆಗಳನ್ನು ಬಳಸುತ್ತಾರೆ. ಆದ್ದರಿಂದ ಇಷ್ಟು ಕಡಿಮೆ ಬೆಲೆಗೆ ಜರಿ ಸೀರೆ ನೀಡಲು ಸಾಧ್ಯವಿಲ್ಲ.

ವರಮಹಾಲಕ್ಷ್ಮಿ ಹಬ್ಬಕ್ಕೆ ಎರಡು ದಿನ ಇರುವಂತೆ ಮಾರಾಟ
ಅಸಲಿಗೆ ಈಗ ಮಾರಾಟ ಮಾಡಲು ಮುಂದಾಗಿರುವ ಪ್ರಿಂಟೆಡ್ ರೇಷ್ಮೆ ಸೀರೆ ಕೂಡ 4,500 ರುಪಾಯಿಗೆ ಬರುವುದಿಲ್ಲ. ಆದರೆ ಸಚಿವರೇನೋ ಘೋಷಣೆ ಮಾಡಿದ್ದಾರೆ. ಆ ದಿಕ್ಕಿನಲ್ಲಿ ಪ್ರಯತ್ನ ನಡೆಯುತ್ತಿದೆ. ಆದರೆ ಈಗಲೇ ಸೀರೆ ಮಾರಲಾಗುತ್ತಿದೆಯಾ ಅಂದರೆ, ಇಲ್ಲ ಅನ್ನೋ ಉತ್ತರ ಬರುತ್ತದೆ. ಏಕೆಂದರೆ, ವರಮಹಾಲಕ್ಷ್ಮಿ ಹಬ್ಬಕ್ಕೆ ಎರಡು ದಿನ ಇರುವಂತೆ ಮಾರಾಟ ಶುರು ಮಾಡಲಾಗುತ್ತದೆ.

ಸಚಿವರು ಘೋಷಣೆ ಮಾಡಿರುವುದು ಪ್ರಿಂಟೆಡ್ ರೇಷ್ಮೆ ಸೀರೆ
"ಅದ್ಯಾರು ಸುದ್ದಿ ಮಾಡಿದರೋ, ಹಬ್ಬಿಸುತ್ತಿದ್ದಾರೋ ವಾಟ್ಸಾಪ್ ನಲ್ಲಿ ತಪ್ಪು ತಪ್ಪಾದ ಮಾಹಿತಿ ಹರಡುತ್ತಿದ್ದಾರೆ. ಈಗ ಸಚಿವರು ಘೋಷಣೆ ಮಾಡಿರುವುದು ಪ್ರಿಂಟೆಡ್ ರೇಷ್ಮೆ ಸೀರೆ. ಅದು ಕೂಡ ಒಳ್ಳೆ ರೇಷ್ಮೆಯೇ. ಆದರೆ ಜರಿ ಇರುವುದಿಲ್ಲ. ನಮಗೆ ಸೀರೆ ಮಾರಾಟದ ಬಗ್ಗೆ ಮಾಹಿತಿ ಬಂದಿಲ್ಲ. ಅದು ಬಂದ ಮೇಲೆ ಏನಾದರೂ ಹೇಳುವುದಕ್ಕೆ ಸಾಧ್ಯ" ಎಂದು ಬಸವನಗುಡಿಯಲ್ಲಿರುವ ರೇಷ್ಮೆ ಮಾರಾಟ ಮಳಿಗೆಯವರು ಹೇಳಿದರು.

ಜುಲೈ 14ರಿಂದ 25% ವರೆಗೆ ರಿಯಾಯಿತಿ ಮಾರಾಟ
"ಸದ್ಯಕ್ಕೆ ಇರುವ ಮಾಹಿತಿ ಪ್ರಕಾರ ಇದೇ ಜುಲೈ 14ರಿಂದ ಆಷಾಢ ಮಾಸದ ಸಲುವಾಗಿ 25% ವರೆಗೆ ರಿಯಾಯಿತಿ ದರದಲ್ಲಿ ಮಾರಾಟ ಆರಂಭವಾಗುತ್ತದೆ. ನಮ್ಮಲ್ಲೂ ಕಂತಿನ ಲೆಕ್ಕದಲ್ಲಿ ಸೀರೆ ಖರೀದಿ ಮಾಡಬಹುದು. ಅದಕ್ಕೆ ಕೆಲವು ಮುಖ್ಯ ದಾಖಲಾತಿಗಳನ್ನು ನೀಡಬೇಕಾಗುತ್ತದೆ. ಅದರ ಅರ್ಜಿ ಮತ್ತಿತರ ಮಾಹಿತಿ ನಮ್ಮ ಮಳಿಗೆಯಲ್ಲೇ ಸಿಗುತ್ತದೆ" ಎಂದು ಹೇಳಿದರು.

ಸಿಬ್ಬಂದಿಯ ಸೌಜನ್ಯ ಮೆಚ್ಚಲೇಬೇಕು
ಇಷ್ಟೆಲ್ಲ ಮಾಹಿತಿ ತೆಗೆದುಕೊಳ್ಳುವಾಗಲೇ ಮಳಿಗೆಗೆ ದೂರವಾಣಿ ಕರೆ ಬಂತು. ಆ ಕಡೆಯಿಂದ ಧ್ವನಿಯೊಂದು, ವರಮಹಾಲಕ್ಷ್ಮಿ ಹಬ್ಬದ ಆಫರ್ ಬಗ್ಗೆ ವಿಚಾರಿಸಿತು. ಅದಕ್ಕೆ ಮಳಿಗೆಯವರು, ಮೇಡಂ ನಮಗೆ ಇನ್ನೂ ಮಾಹಿತಿ ಬಂದಿಲ್ಲ. ನಿಮ್ಮ ಕಾಂಟ್ಯಾಕ್ಟ್ ನಂಬರ್ ಕೊಡಿ. ಅದು ಬಂದ ಕೂಡಲೇ ತಿಳಿಸುತ್ತೀವಿ ಎಂದು ತುಂಬ ಸೌಜನ್ಯದಿಂದಲೇ ಉತ್ತರಿಸಿದರು. ಗಾಂಧೀಬಜಾರಿನ ಶಿವಸಾಗರ್ ಹೋಟೆಲ್ ಎದುರು, ಕೆನರಾ ಬ್ಯಾಂಕ್ ಪಕ್ಕ ಇರುವ ಮೈಸೂರು ಸಿಲ್ಕ್ ಮಳಿಗೆಯ ಸಿಬ್ಬಂದಿಯ ಸೌಜನ್ಯ ಹಾಗೂ ಸಮಾಧಾನದ ವ್ಯವಹಾರದ ಬಗ್ಗೆಯೂ ಒಂದೊಳ್ಳೆ ಮಾತು ಬರೆದರೆ ತಪ್ಪಿಲ್ಲ ಎನಿಸಿತು.
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications