Get Updates
Get notified of breaking news, exclusive insights, and must-see stories!

ನೆಲಮಂಗಲದ ಗ್ರಾಮದಲ್ಲಿ ಎರಡು ಮನೆ ದೋಚಿದ ಕಳ್ಳರು.

ನೆಲಮಂಗಲ ತಾಲೂಕಿನ ಶ್ರೀಗಿರಿ ಪುರ ಗ್ರಾಮದಲ್ಲಿ ನಡೆದಿರುವ ಕಳ್ಳತನ; ಒಂದೇ ಗ್ರಾಮದ ಎರಡು ಮನೆಗಳಿಗೆ ಕನ್ನ ಹಾಕಿದ ದರೋಡೆಕೋರರು.

ಬೆಂಗಳೂರು, ಏಪ್ರಿಲ್ 15: ಬೀಗ ಹಾಕಿದ ಮನೆಯ ಮುಂಬಾಗಿಲು ಮುರಿದ ಕಳ್ಳರು ನಗದು, ಚಿನ್ನ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಶ್ರೀಗಿರಿ ಪುರ ಗ್ರಾಮದಲ್ಲಿ ನಡೆದಿದೆ.

ಸರಸ್ವತಮ್ಮ ಎಂಬುವವರ ಮನೆಯಲ್ಲಿ ಕಳ್ಳರು ಈ ಕೈಚಳಕ ತೋರಿದ್ದು, ಒಟ್ಟು ಮೂರು ಲಕ್ಷ ನಗದು, ಚಿನ್ನ ,ಬೆಳ್ಳಿ ಕದ್ದು ಪರಾರಿಯಾಗಿದ್ದಾರೆ.

Two houses burgled in Nelamangala

ಮನೆಯಲ್ಲಿ ಮದುವೆ ಇರುವ ಕಾರಣ ಮದುವೆಗೆಂದು ಹಣ ತಂದಿಡಲಾಗಿತ್ತು. ಮದುವೆ ಕಾರ್ಡ್ ಹಂಚಲು ಸರಸ್ವತಮ್ಮ ಹೊರಗೆ ಹೋಗಿದ್ದರು. ಈ ಸಂದರ್ಭದವನ್ನು ಉಪಯೋಗಿಸಿಕೊಂಡಿರುವ ಕಳ್ಳರು ಕಳ್ಳತನ ಮಾಡಿದ್ದಾರೆ.

ಇದೇ ಗ್ರಾಮದ ಮುರಳಿ ಎನ್ನುವವರ ಮನೆಯಲ್ಲಿಯೂ ಕಳ್ಳತನವಾಗಿದ್ದು, ಅಲ್ಲಿ 20 ಸಾವಿರ ನಗದು, ಚಿನ್ನಾಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕುದುರು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+