ಬೆಂಗಳೂರಿನಲ್ಲಿ ಫೆ.16 ರಿಂದ ಉಡುಪ ಸಂಗೀತ ಸಂಭ್ರಮ
ಬೆಂಗಳೂರು, ಫೆಬ್ರವರಿ 06 : ಉಡುಪ ಪ್ರತಿಷ್ಠಾನವು ಸಂಗೀತ ಪ್ರಿಯರಿಯರಿಗೆ ಮನರಂಜನೆ ಒದಗಿಸುವ ದೃಷ್ಟಿಯಿಂದ ಉಡುಪ ಮ್ಯೂಸಿಕಲ್ ಫೆಸ್ಟಿವಲ್ ನ್ನು ಫೆಬ್ರವರಿ 16ರಿಂದ ಮೂರು ದಿನಗಳ ಕಾಲ ಮಲ್ಲೇಶ್ವರದಲ್ಲಿರುವ ಚೌಡಯ್ಯ ಮೆಮೊರಿಯಲ್ ಹಾಲ್ ನಲ್ಲಿ ಆಯೋಜಿಸಿದೆ.
ಮೂರು ದಿನಗಳ ಕಾಲ ಸಂಜೆ 7 ಗಂಟೆಯಿಂದ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ. ಸಂಗೀತ ಕಾರ್ಯಕ್ರಮವು ಫೆ.18 ರವರೆಗೆ ನಡೆಯಲಿದೆ. ಮೊದಲ ದಿನ ವಿ.ಶಂಕರ್ ಮಹಾದೇವನ್ ಅವರಿಂದ ಗಾಯನ ನಡೆಯಲಿದ್ದು, ವಿ. ಸೆಲ್ವ ಗಣೇಶ್ ಖಂಜಿರ, ವಿ. ಯು.ರಾಜೇಶ್ ಮ್ಯಾಂಡೊಲಿನ್ ನೊಂದಿಗೆ ಸಾಥ್ ನೀಡಲಿದ್ದಾರೆ.
ಫೆಬ್ರವರಿ 17 ರಂದು ಕಾರ್ಯಕ್ರಮದಲ್ಲಿ ವಿ.ಅಭಿಷೇಕ್ ರಘುರಾಮ್ ಹಾಡುಗಾರಿಕೆ ಇದ್ದು ವಿ. ಮೈಸೂರು ನಾಗರಾಜ್ ವಯೋಲಿನ್, ಯೋಗೇಶ್ ಸಂಸಿ ತಬಲ, ವಿ. ಗುರುಪ್ರಸನ್ನ ಖಂಜಿರದೊಂದಿಗೆ ಜೊತೆಯಾಗಲಿದ್ದಾರೆ. ಫೆ.18ರಂದು ಶಿವಕುಮಾರ್ ಶರ್ಮಾ, ರಾಹುಲ್ ಶರ್ಮಾ ಅವರಿಂದ ಸಂತೂರ್, ಪಂ.ವಿಜಯ್ ಘಾಟೆ ಅವರಿಂದ ತಬಲ ಕಾರ್ಯಕ್ರಮ ನಡೆಯಲಿದೆ. ಬುಕ್ ಮೈ ಶೋ ನಲ್ಲಿ ಟಿಕೇಟ್ ಲಭ್ಯವಿದೆ.
Comments
English summary
Udupa Foundation is organizing three days Udupa Musical festival from February 16 at Chowdaih memorial hall in Bengaluru. Renowned artist like Shankar Mahadevan, GK mani and pandit Shivakumar sharma will perform in the Festival.