'ಭೀಮ್ ಆ್ಯಪ್ ಡೌನ್ ಲೋಡ್ ಮಾಡುವುದು ಹೇಗೆ?
ಬೆಂಗಳೂರು, ಡಿಸೆಂಬರ್ 31: ನವದೆಹಲಿಯಲ್ಲಿ ನರೇಂದ್ರ ಮೋದಿಯವರು ಶುಕ್ರವಾರ ಭೀಮ್( ಭಾರತ್ ಇಂಟರ್ ಫೇಸ್ ಮನಿ) ಎಂಬ ಆಧಾರ್ ಸಹಿತ, ನಗದು ರಹಿತ ತಂತ್ರಾಂಶವನ್ನು ಜಾರಿಗೊಳಿಸಿದ್ದು ಅದನ್ನು ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಅಭಿವೃದ್ದಿ ಪಡಿಸಿದೆ, ತಮ್ಮ ಆಂಡ್ರಾಯ್ದ್ ಫೋನಿನಲ್ಲಿ ಬಳಸಬಹುದಾಗಿದೆ.
ಪ್ರಸ್ತುತ ಭೀಮ್ ಅಪ್ಲಿಕೇಶನ್ ಆಂಡ್ರಾಯ್ಡ್ ಫೋನಿನಲ್ಲಿ ಬಳಕೆಯಾಗುತ್ತಿದ್ದು, ಆಂಡ್ರಾಯ್ಡಿನ ಗೂಗಲ್ ಪ್ಲೇ ಸ್ಠೋರಿನಲ್ಲಿ ಭೀಮ್ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಎರಡು ಎಂಬಿ ಗಾತ್ರದ ಫೈಲ್ ಬಹುಬೇಗ ಡೌನ್ ಲೋಡ್ ಆಗುತ್ತದೆ. ಅಪ್ಲಿಕೇಶನ ಓಪನ್ ಮಾಡಿಕೊಂಡರೆ ಮೊದಲು ಹಿಂದಿ ಅಥವಾ ಇಂಗ್ಲಿಷ್ ಭಾಷೆಯನ್ನು ಕೇಳುತ್ತದೆ.[ನಗದು ರಹಿತ ವ್ಯವಸ್ಥೆಗೆ 'ಭೀಮ್' ಆ್ಯಪ್ ಬಿಡುಗಡೆಗೊಳಿಸಿದ ಮೋದಿ]

ನಂತರ ಭೀಮ್ ಬಳಕೆದಾರರಿಗೆ ಸ್ವಾಗತಿಸಿ ಸೆಕ್ಯೂರ್, ಸಿಂಪಲ್, ಸೂಪರ್ ಫಾಸ್ಟ್ ಎಂಬ ನಾಮಾಂಕಿತದೊಂದಿಗೆ ವಿವರವನ್ನು ತಿಳಿಸಲಾಗಿದೆ.
* ಎಲ್ಲ ರೀತಿಯ ವಹಿವಾಟನ್ನು ಸುರಕ್ಷಿತವಾಗಿ (ಸೆಕ್ಯೂರ್) ಯೂನಿಪೈಡ್ ಪೇಮೆಂಟ್ ಇಂಟರ್ ಫೇಸ್(ಯುಪಿಐ) ಮಾಡಲಾಗಿದೆ

* ಎಲ್ಲ ಹಣವು ನಿಮ್ಮ ಬ್ಯಾಂಕಿನ ಮೂಲಕ ವಹಿವಾಟು ನಡೆಸುವಂತೆ ಸುಲಭ(ಸಿಂಪಲ್) ಮಾಡಲಾಗಿದೆ.
* ಇನ್ನು ಕ್ಯೂ ಆರ್ ಕೋಡ್ ಮೂಲಕ ಸ್ಕಾನ್ ಮಾಡಿ ವೇಗವಾಗಿ(ಸೂಪರ್ ಫಾಸ್ಟ್) ಹಣವನ್ನು ಪಾವತಿಸುವ ಮತ್ತು ಪಡೆಯುವ ಅವಕಾಶವನ್ನು ಮಾಡಿಕೊಡಲಾಗಿದೆ.
ಇನ್ನು ಮುಂದುವರೆದಂತೆ ಎಸ್ ಎಂ ಎಸ್ ಮತ್ತು ಫೋನ್ ಮೂಲಕ ನೋಟಿಫಿಕೇಶನ್ ಇತ್ಯಾದಿಯನ್ನು ಬಳಸಲು ಅವಕಾಶ ನೀಡಲಾಗಿದೆ. ನಂತರ ಪರದೆಯಲ್ಲಿ ಮೂಡುವ ಅವಕಾಶಗಳನ್ನು ಬಳಸಿ ತಮ್ಮ ಬ್ಯಾಂಕಿನ ಖಾತೆ ಸಂಖ್ಯೆಯನ್ನು ನೋಂದಣಿ ಮಾಡಿಕೊಂಡು ಯುಪಿಐ ಪಿನ್ ಪಡೆದು ಬಳಿಕ ನಗದು ವಹಿವಾಟನ್ನು ಮಾಡಬಹುದಾಗಿದೆ. ಪ್ರಸ್ತುತ 32 ಬ್ಯಾಂಕಿನಲ್ಲಿ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಇನ್ನು ಈ ಅಪ್ಲಿಕೇಶನ್ ಬಗ್ಗೆ ಸಾರ್ವಜನಿಕರು ಪ್ರತಿಕ್ರಿಯಿಸಿದ್ದು, ಸಿಂಪಲ್ಲಾಗಿದೆ. ಸೂಪರಾಗಿದೆ. ಬಳಸಲು ಸುಲಭ ಇತ್ಯಾದಿ ಮಾತುಗಳನ್ನಾಡಿದ್ದಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications