ಪ್ರೇಯಸಿಗಾಗಿ ಹೆತ್ತವರನ್ನೇ ಕೊಲ್ಲಲು ಮುಂದಾಗಿದ್ದ ಟೆಕ್ಕಿ ಸಿಕ್ಕಿಬಿದ್ದ
ಬೆಂಗಳೂರು, ಜು.10: ಪ್ರೀತಿಸಿದ ಯುವತಿಯನ್ನು ವಿವಾಹವಾಗಲು ಒಪ್ಪಲಿಲ್ಲ ಎಂದು ನಾಲ್ಕು ಸಲ ಆತ್ಮಹತ್ಯೆಗೆ ಯತ್ನಿಸಿದ್ದ ಅಷ್ಟೇ ಅಲ್ಲದೆ ಯೂಟ್ಯೂಬ್ ನೋಡಿ ತಂದೆ-ತಾಯಿಯನ್ನು ಕೊಲ್ಲಲು ಯತ್ನಿಸಿದ್ದ ಸೈಕೊ ಎಂಜಿನಿಯರ್ ನ್ನು ಬೈಕ್ಗಳ ಕಳ್ಳತನ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಪಾಪರೆಡ್ಡಿ ಪಾಳ್ಯದ ನಿವಾಸಿ ಶರತ್(25) ಬಂಧಿತ ಮೆಕ್ಯಾನಿಲ್ ಎಂಜಿನಿಯರ್ ಓದಿರುವ ಶರತ್ಗೆ ಇತ್ತೀಚೆಗೆ ಯುವತಿಯೊಬ್ಬಳ ಮೇಲೆ ಪ್ರೇಮಾಂಕುರವಾಗಿತ್ತು. ಸ್ವಂತವಾಗಿ ಬ್ಯುಸಿನೆಸ್ ಮಾಡಲು ಬಿಡದ ಹಾಗೂ ಪ್ರೀತಿಸುತ್ತಿದ್ದ ಯುವತಿಯನ್ನು ವಿವಾಹವಾಗಲು ಒಪ್ಪದ ತಂದೆ-ತಾಯಿಯನ್ನು ಸಾಯಿಸಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಮಹಿಳೆ ಅಪಹರಣಕ್ಕೆ ಯತ್ನ: ಓಲಾ ಚಾಲಕನ ಬಂಧನ
ಈ ವಿಷಯ ತಿಳಿದ ಪೊಲೀಸರು ಆತನನ್ನು ಮನೆಯಿಂದ ಹೊರಹಾಕಿದ್ದರು. ನಂತರ ಶರತ್ ಮೋಜಿನ ಜೀವನ ನಡೆಸಬೇಕೆಂದು ವಾಹನ ಕಳವು ದಂಧೆಗೆ ಇಳಿದಿದ್ದ. ದುಬಾರಿ ಬೆಲೆಯ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಮೋಜಿನ ಜೀವನ ಸಾಗಿಸುತ್ತಿದ್ದ. ಈ ಹಿಂದೆ ಎರಡು ಬಾರಿ ಮಾತ್ರ ಸೇವಿದಿ ಆತ್ಮಹತ್ಯೆಗೆ ಯತ್ನಿಸಿದ್ದ, ಸೈಕೊಯಿಂದ 8.37 ಲಕ್ಷ ಮೌಲ್ಯದ 10 ದ್ವಿಚಕ್ರ ವಾಹನಗಳು ಹಾಗೂ ಒಂದು ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.
ಬಿಹಾರಿಯೊಬ್ಬನಿಂದ ಪಿಸ್ತೂಲ್ ಖರೀದಿಸಿದ ನಂತರ ಆತ್ಹಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ, ಒಂದು ದಿನ ಹೆತ್ತವರನ್ನು ಕೊಲ್ಲರು ಪಿಸ್ತೂಲ್ ಹಿಡಿದು ಮನೆ ಮುಂದೆ ಬಂದಿದ್ದ ನಂತರ ಅಲ್ಲಿ ಪೊಲೀಸರು ಗಸ್ತು ತಿರುಗುತ್ತಿರುವುದನ್ನು ಕಂಡು ಓಡಿಹೋಗಿದ್ದ.