ಮೇ 18 ರಂದು 'ಸಡನ್ನಾಗ್ ಸತ್ತೋದ್ರೆ?!' ಕಾಮಿಡಿ ಡ್ರಾಮಾ ಪ್ರದರ್ಶನ
ನಾಟಕ : ಸಡನ್ನಾಗ್ ಸತ್ತೋದ್ರೆ?!
ರಚನೆ, ನಿರ್ದೇಶನ, ನಿರ್ಮಾಣ : ಎಂ ಎಂ ಶೈಲೇಶ್ ಕುಮಾರ್
ತಂಡ : ಸೈಡ್ ವಿಂಗ್ ಬೆಂಗ್ಳೂರು
ಸ್ಥಳ : ಕೆ ಹೆಚ್ ಕಲಾ ಸೌಧ, ಹನುಮಂತನಗರ
ಸಮಯ : ಸಂಜೆ 5 ಹಾಗೂ 7.30 (ಎರಡು ಪ್ರದರ್ಶನ)
ಜೀವನವನ್ನು ವಿವರಿಸಿ, ವರ್ಣಿಸಿ ಹಲವಾರು ಕವಿಗಳು, ಪಂಡಿತರು ತಮ್ಮದೇ ವ್ಯಾಖ್ಯಾನ ನೀಡಿ ಬರೆದಿದ್ದಾರೆ. ಎಲ್ಲರೂ ಜೀವನವನ್ನು ಅದ್ಭುತಗಳ ಸಾಲಿಗೆ ಸೇರಿಸಿ ಸಂತಸದಿಂದ ಅನುಭವಿಸಲು ಹೇಳುತ್ತಾರೆ. ಆದರೆ, ಜೀವನದ ಜಂಜಾಟಗಳಲ್ಲಿ ಸಿಲುಕ, ಯಾಂತ್ರಿಕ ಬದುಕನ್ನು ಸಾಗಿಸುತ್ತಿರುವ ಇಂದಿನ ಮನುಷ್ಯ ಜೀವನದ ಖುಷಿಯನ್ನು ಅನುಭವಿಸುವುದ ಮರೆತು, ಪ್ರತಿಷ್ಠೆ, ಸಂಪಾದನೆ ಎಂಬ ದೊಡ್ಡ ವಿಚಾರಗಳ ಹಿಂದೆ ಬಿದ್ದು ಸಣ್ಣ ಸಣ್ಣ ಸಂಗತಿಗಳಲ್ಲಿನ ಸಂತಸಗಳು ಅವನಿಗೆ ಕಾಣದಾಗಿದೆ. ಇದರ ಕುರಿತಾಗಿ ರಚಿಸಿರುವ ನಾಟಕ 'ಸಡನ್ನಾಗ್ ಸತ್ತೋದ್ರೆ?!'.
'ಸಡನ್ನಾಗ್ ಸತ್ತೋದ್ರೆ?!' ನಾಟಕ ಈಗಾಗಲೇ ಪ್ರೇಕ್ಷಕರ ಪ್ರೀತಿ ಪಡೆದಿದೆ. ಬೆಂಗಳೂರಿನಲ್ಲಿ ಏಳೆಂಟು ಪ್ರದರ್ಶನ ಆಗಿರುವ ಈ ನಾಟಕದ ಎಲ್ಲ ಶೋಗಳು ಹೌಸ್ ಫುಲ್ ಆಗಿವೆ. ಇಂತಹ ಸದಭಿರುಚಿಯ ನಾಟಕ ಮೇ 18 ರಂದು ಮತ್ತೆ ಪ್ರದರ್ಶನ ಆಗುತ್ತಿದೆ.

ಸಾವು ಎಂದರೆ ಅಪಶಕುನ ಎಂದು ಭಾವಿಸುವವರ ನಡುವೆ ಶೈಲೇಶ್ ಕುಮಾರ್ ಎಂ.ಎಂ. ಅವರು ಅದೇ ಸಾವನ್ನು ಉಪಯೋಗಿಸಿ, ಬದುಕನ್ನು ಸುಂದರವಾಗಿಸಿಕೊಳ್ಳುವತ್ತ ಮಾಡಬೇಕಾದ ಕೆಲಸಗಳನ್ನು ತಿಳಿಸುತ್ತಾರೆ. ಇಡೀ ನಾಟಕ ಹಾಸ್ಯಮಯವಾಗಿದ್ದು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುವುದಂತೂ ಸುಳ್ಳಲ್ಲ.

ಎಂದಿನಂತೆ, ನಿರ್ದೇಶಕ ಶೈಲೇಶ್ ಕುಮಾರ್ ಅವರು ಗಂಭೀರ ವಿಚಾರಗಳನ್ನು ಹಾಸ್ಯಮಯವಾಗಿ ಹೇಳುವ ತಂತ್ರವನ್ನು ಇಲ್ಲಿಯೂ ಬಳಸಿ ಯಶಸ್ವಿಯಾಗಿದ್ದಾರೆ. ಪ್ರೇಕ್ಷಕರನ್ನುನಕ್ಕು ನಗಿಸಿ, ಜೀವನದ ಮುಖ್ಯ ಸಂದೇಶವೊಂದನ್ನು ತೆಗೆದುಕೊಂಡು ಹೋಗುವ ಹಾಗೆ ಮಾಡುವ ಒಂದು ಸುಂದರ ನಾಟಕ 'ಸಡನ್ನಾಗ್ ಸತ್ತೋದ್ರೆ?!'.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications