ಕೆಪಿಎಸ್ಸಿ ಹಗರಣದ ಹೋರಾಟಕ್ಕೆ ಎಸ್ಆರ್ ಹಿರೇಮಠ ಬೆಂಬಲ
ಬೆಂಗಳೂರು, ಡಿ. 31 : ಕೆಪಿಎಸ್ಸಿ ಹಗರಣದ ಬಗ್ಗೆ ಕ್ರಮ ಕೈಗೊಳ್ಳುವಂತೆ ಮೂರು ದಿನಗಳ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಲೋಕಸತ್ತಾ ಪಕ್ಷ ಮತ್ತು ಅನ್ಯಾಯಕ್ಕೆ ಒಳಗಾಗಿರುವ ಅಭ್ಯರ್ಥಿಗಳಿರುವ ಸ್ಥಳಕ್ಕೆ ಭೇಟಿ ನೀಡಿದ ಸಾಮಾಜಿಕ ಹೋರಾಟಗಾರ ಎಸ್ಆರ್ ಹಿರೇಮಠ ಅವರು ಈ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು.
ಅನ್ಯಾಯಕ್ಕೆ ಒಳಗಾಗಿರುವ ಅಭ್ಯರ್ಥಿಗಳು ಯಾರಿಗೂ ಹೆದರದೇ ಮುಂದೆ ಬಂದು ಹೋರಾಟದ ಮುಂಚೂಣಿಗೆ ಬರಬೇಕು, ಆಗಲೇ ಭ್ರಷ್ಟರನ್ನು ಹೊರಹಾಕಲು ಸಾಧ್ಯವಾಗುವುದು. ಈ ನಿಮ್ಮ ಹೋರಾಟಕ್ಕೆ ನನ್ನ ಬೆಂಬಲ ಯಾವಗಲೂ ಇದ್ದೇ ಇದೆ ಹಾಗೂ ಮುಂದೆಯೂ ಇರುತ್ತದೆ ಎಂದು ಸೋಮವಾರ ಅವರನ್ನು ಭೇಟಿ ಮಾಡಿ ಹೇಳಿದರು. ನಂತರ ಉಪವಾಸ ಮಾಡುತ್ತಿದ್ದವರಿಗೆ ಜ್ಯೂಸ್ ನೀಡುವ ಮೂಲಕ ಮೂರು ದಿನಗಳ ಉಪವಾಸ ಸತ್ಯಾಗ್ರಹಕ್ಕೆ ಸಾಂಕೇತಿಕವಾಗಿ ಕೊನೆ ಮಾಡಿದರು. [ಕರ್ನಾಟಕ ವರ್ಷ ವ್ಯಕ್ತಿಗೆ ಅಭಿನಂದನೆಗಳು]

ಲೋಕಸತ್ತಾ ಪಕ್ಷದ ಬೇಡಿಕೆಗಳು
*
ಕೆಪಿಎಸ್ಸಿಯಲ್ಲಿ
ಭ್ರಷ್ಟಾಚಾರ
ನಡೆಸಿತುತ್ತಿರುವವರ
ವಿರುದ್ಧ
ಕ್ರಮ
ಮತ್ತು
ಆಯ್ಕೆ
ಪ್ರಕ್ರಿಯೆಯಲ್ಲಿ
ಸುಧಾರಣೆ.
*
ಸಿಐಡಿ
ವರದಿಯಲ್ಲಿ
ಹೆಸರಿಸಲಾದವರ
ವಿರುದ್ಧ
ಕ್ರಿಮಿನಲ್
ಮೊಕದ್ದಮೆ
ಹೂಡಬೇಕು.
*
2011ರ
ಆಯ್ಕೆಯ
ಸುತ್ತೋಲೆಯನ್ನು
ಹಿಂದಕ್ಕೆ
ಪಡೆಯಬೇಕು.
[ಎಸ್ಆರ್
ಹಿರೇಮಠ
ಯಾರು?
ಸಂಕ್ಷಿಪ್ತ
ಪರಿಚಯ]
ಹೋರಾಟದ ಭಾಗವಾಗಿ ಭಾನುವಾರ ರಾತ್ರಿ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಲೋಕಸತ್ತಾ ಪಕ್ಷದ ಕಾರ್ಯಕರ್ತರು ರವಿ ಕೃಷ್ಣಾರೆಡ್ಡಿಯವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪೋಲಿಸರು ಭೇಟಿಗೆ ಸರಿಯಾಗಿ ಅವಕಾಶ ನೀಡದೆ ದೌರ್ಜನ್ಯ ಎಸಗಿದರು. ಪ್ರಜಾಪ್ರಭುತ್ವದಲ್ಲಿ ತಮ್ಮ ಜನಪ್ರತಿನಿಧಿಯನ್ನು ಭೇಟಿ ಮಾಡಿ ತಮ್ಮ ಅಳಲು ಬೇಡಿಕೆ ಸಲ್ಲಿಸಲು ಅವಕಾಶ ನೀಡದೆ ಅನ್ಯಾಯ ಮಾಡಿದ್ದಾರೆ.
ಆನಂದ ರಾವ್ ವೃತ್ತದಲ್ಲಿರುವ ಮೌರ್ಯ ಹೋಟೆಲ್ ಮುಂದಿರುವ ಗಾಂಧಿ ಪ್ರತಿಮೆ ಎದಿರು ಲೋಕಸತ್ತಾ ಪಕ್ಷದ ಕಾರ್ಯಕರ್ತರು ಡಿ.28, 29 ಮತ್ತು 30ರಂದು ಉಪವಾಸ ಸತ್ಯಾಗ್ರಹ ನಡೆಸಿದರು. ಲೋಕಸತ್ತಾ ಪಕ್ಷ ಮತ್ತು ಈ ಹಗರಣದಿಂದ ಭಾದಿತರಾದ ಅನೇಕ ಅಭ್ಯರ್ಥಿಗಳು ಈ ಬಗ್ಗೆ ಕಳೆದ ಹಲವಾರು ತಿಂಗಳುಗಳಿಂದ ಹೋರಾಟ ನಡೆಸುತ್ತಿದೆ ಎಂದು ಇಲ್ಲಿ ಸ್ಮರಿಸಬಹುದು.
-
ಯಶವಂತಪುರ - ಶಿವಮೊಗ್ಗ- ತಾಳಗುಪ್ಪ ಮಾರ್ಗದಲ್ಲಿ ವಿಶೇಷ ಎಕ್ಸಪ್ರೆಸ್ ರೈಲು ಸೇವೆ: ಸಮಯ, ದಿನಾಂಕಗಳ ವಿವರ ತಿಳಿಯಿರಿ -
Income Tax: ಐಟಿ ರಿಟರ್ನ್ ಮಾಡಲು ಮಾರ್ಚ್ 31ರ ವರೆಗೆ ಅವಕಾಶ -
Gold Price: ಚಿನ್ನದ ಬೆಲೆ 2ನೇ ದಿನವೂ ದಾಖಲೆಯ ಕುಸಿತ: ಹೂಡಿಕೆದಾರರಿಗೆ ಆಘಾತ, ಗ್ರಾಹಕರಿಗೆ ಹರ್ಷ, ಇಂದಿನ ದರಪಟ್ಟಿ -
Silver Price: ಬೆಳ್ಳಿ ದರದಲ್ಲಿ ಮಹಾಕುಸಿತ! ಬರೋಬ್ಬರಿ 60,000 ಇಳಿಕೆ, ಇಂದಿನ ಬೆಳ್ಳಿ ದರ ಅಪ್ಡೇಟ್ -
Gold Price: ಚಿನ್ನದ ಬೆಲೆ 1,50,000 ರೂಪಾಯಿಗೆ ಕುಸಿದು ಬೀಳುವ ಸಾಧ್ಯತೆ, ಕಾರಣ ಇಲ್ಲಿದೆ... -
Ramcharan Upasana: ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟ ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ -
ಎಲ್ಪಿಜಿ, ಫಾಸ್ಟ್ಟ್ಯಾಗ್ ಸೇರಿದಂತೆ ಫೆಬ್ರವರಿ 1 ಭಾನುವಾರದಿಂದ ಹಲವು ಬದಲಾವಣೆ ಜಾರಿ... Regulatory Updates -
Gold: ದಾಖಲೆ ಮಟ್ಟಕ್ಕೆ ಏರಿದ ಬೆಲೆ; ಈ ವರ್ಷ ಚಿನ್ನದ ಬೇಡಿಕೆ ಕುಸಿಯುವ ಸಾಧ್ಯತೆ -
Karnataka Weather: ಮುಂದಿನ 7 ದಿನ ವ್ಯಾಪಕ ಬಿಸಿಲು ಮುನ್ಸೂಚನೆ, ಕನಿಷ್ಠ ತಾಪಮಾನಲ್ಲಿ 3-5 ಡಿಸೆ ಇಳಿಕೆ -
KSRTC Employees: ಅಂತರ ನಿಗಮ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಕೆ ಎಸ್ ಆರ್ ಟಿ ಸಿ ನೌಕರರಿಗೆ ಗುಡ್ ನ್ಯೂಸ್ -
ಕೇಂದ್ರ ಬಜೆಟ್: ಮದ್ಯಪ್ರಿಯರಿಗೆ ಶಾಕ್, ಮದ್ಯ ದುಬಾರಿ, ಈ ವಸ್ತುಗಳ ದರ ಇಳಿಕೆ - ಏರಿಕೆ, ಪಟ್ಟಿ ಇಲ್ಲಿದೆ -
ಕೇಂದ್ರ ಬಜೆಟ್ 2026ರಲ್ಲಿ ಹೊಸದೇನಿದೆ, ಯಾರಿಗೆಲ್ಲ ಲಾಭ: ಇಲ್ಲಿದೆ ಸಂಪೂರ್ಣ ಮಾಹಿತಿ












Click it and Unblock the Notifications