ತಂದೆಯ ಕೊನೆಯ ದಿನಗಳನ್ನು ನೆನೆದ ಗಿರೀಶ್ ಕಾರ್ನಾಡ್ ಪುತ್ರ
ಬೆಂಗಳೂರು, ಜೂನ್ 13: ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್(81) ಅವರ ಕೊನೆಯ ದಿನಗಳ ನೆನಪನ್ನು ಅವರ ಪುತ್ರ ರಘು ಕಾರ್ನಾಡ್ ಅವರು ಫೇಸ್ ಬುಕ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ನಾಡ್ ಅವರು ಜೂನ್ 10, ಸೋಮವಾರದಂದು ಇಹಲೋಕ ತ್ಯಜಿಸಿದರು. ನಾಟಕಕಾರರಾಗಿ, ನಟರಾಗಿ, ಸಾಹಿತಿಯಾಗಿ ನಾನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಾರ್ನಾಡ್ ಅವರ ಅಗಲಿಕೆಗೆ ಅವರ ಅಭಿಮಾನಿಗಳು ಮರುಗಿದ್ದಾರೆ.
ತಂದೆಯ ಕೊನೆಯ ದಿನಗಳ ಬಗ್ಗೆ ಮತ್ತು ಅವರೊಂದಿಗಿನ ಒಡನಾಟದ ಬಗ್ಗೆ ಪುತ್ರ ರಘು ಕಾರ್ನಾಡ್ ಅವರು ಮಾಡಿದ ಫೇಸ್ ಬುಕ್ ಪೋಸ್ಟ್ ನ ಸಾರಾಂಶ ಇಲ್ಲಿದೆ.

"ಸೋಫಾ ಮೇಲೆ ಕುಳಿತುಕೊಂಡು ವಿಸ್ಕಿಯ ಗ್ಲಾಸ್ ಹಿಡಿದು, ಇತಿಹಾಸ, ದಂತಕತೆ, ಹಾಡು, ತತ್ವಜ್ಞಾನ, ಜಾನಪದ ಕತೆಗಳನ್ನು ಉಲಿಯುತ್ತಿದ್ದ ನನ್ನ ತಂದೆಯ ಚಿತ್ರ ನನ್ನ ಮನಸ್ಸಿನಲ್ಲಿ ಬೇರೂರಿದೆ. ನಾನು ಪ್ರೀತಿಸುವ ವ್ಯಕ್ತಿ ಅವರು. ಹಿಂದಿನ ವಾರ ನಾನು ಮತ್ತು ನನ್ನ ಸಹೋದರಿ ಇಬ್ಬರೂ ಸ್ನೇಹಿತರೊಬ್ಬರ ಮದುವೆಯ ಸಲುವಾಗಿ ನಮ್ಮ ಮನೆಯಲ್ಲೇ ಇದ್ದೆವು. ರಾತ್ರಿ ಶನಿವಾರ ಅವರು ಆರ್ಶಿಯಾ ಸತ್ತರ್ ಗೆ ಸಂದರ್ಶನ ನೀಡಿ ಮುಗಿಸಿದ್ದರು. ಭಾನುವಾರ ಸಂಜೆ ನಾವೆಲ್ಲರೂ ಟೆರೇಸ್ ಗೆ ಹೋಗಿ ಕೆಲ ಸಮಯ ಕಳೆದೆವು. ನಾನು ಅವರಿಗೆ ಫಿಸಿಯೋ ಥೆರಪಿ ಮಾಡಿಸಿದೆ, ನನ್ನ ಸಹೋದರಿ ಅವರ ಉಗುರುಗಳನ್ನು ಕತ್ತರಿಸಿದಳು. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡುತ್ತ ನಾವು ಕಳವಳ ವ್ಯಕ್ತಪಡಿಸಿದ್ದೆವು. ಆದರೆ ಅತ್ಯಂತ ದುಃಖದ ವಿಚಾರವೆಂದರೆ ಸೋಮವಾರ ಬೆಳಿಗ್ಗೆ ಅವರು ಮೃತರಾದರು"
"ಅಂದಿನಿಂದ ಅಪ್ಪನಿಗೆ ಶ್ರದ್ಧಾಂಜಲಿ ಎಂಬಂತೆ ಮನೆಯಲ್ಲಿ ಮತ್ತು ಮನಸ್ಸಿನಲ್ಲಿ ಕೊಂಕಣಿ, ಕನ್ನಡ, ತಮಿಳು, ಮಲಯಾಳಂ, ಇಂಗ್ಲಿಷ್, ಹಿಂದಿ ಭಾಷೆಗಳು ಸುರಳಿಸುತ್ತುತ್ತಿವೆ. ಅವರ ಅಗಲಿಕೆಯ ನಂತರ ನೀವೆಲ್ಲ ಕಳಿಸಿದ ಸಂದೇಶ, ಸಾಂತ್ವನದ ನುಡಿ, ಪ್ರೀತಿಗೆ ನಾವು ಋಣಿ. ತಂದೆಯವರ ಬದುಕು ಮತ್ತು ಕೃತಿಗಳಿಂದ ನೀವೆಷ್ಟು ಪ್ರಭಾವಿತರಾಗಿದ್ದೀರಿ ಎಂಬುದು ನಮಗೆ ಇದರಿಂದ ಅರಿವಾಗಿದೆ.
"ಅವರ ಬದುಕು ಅವರ ಗುರುಗಳು, ಶಿಕ್ಷಕರು, ಬಮಧುಗಳು, ಒಡಹುಟ್ತಿದವರು, ಸ್ನೇಹಿತರು, ನಿರ್ದೇಶಕರು, ವಿದ್ಯಾರ್ಥಿಗಳು, ನಟರು, ಓದುಗರು, ವಿರೋಧಿಗಳು... ಎಲ್ಲರಿಂದಲೂ ಶ್ರೀಮಂತವಾಗಿದೆ. ಅವರ ಕೊನೆಯ ದಿನಗಳಲ್ಲಿ ಅಂಥ ಹಲವು ಹೆಸರುಗಳನ್ನು ನಾನು ಕೇಳಿದ್ದೇನೆ. ಒಬ್ಬ ಅಸಾಧಾರಣಿ ವ್ಯಕ್ತಿಯ ಬದುಕಿನ ಪಯಣದಲ್ಲಿ ಜೊತೆಯಾದ ಆ ಎಲ್ಲರಿಗೂ ನನ್ನ ಧನ್ಯವಾದಗಳು"
-ರಘು ಕಾರ್ನಾಡ್
-
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ












Click it and Unblock the Notifications