ಬೆಂಗಳೂರಿನ ಮಸಾಜ್ ಪಾರ್ಲರಲ್ಲಿ ಹೈಟೆಕ್ ವೇಶ್ಯಾವಾಟಿಕೆ : ಐವರ ಬಂಧನ, ಐವರ ರಕ್ಷಣೆ
ಬೆಂಗಳೂರು, ಫೆಬ್ರವರಿ 20 : 'ಬಾಡಿ ಟೂ ಬಾಡಿ ಮಸಾಜ್', 'ಹ್ಯಾಪಿ ಎಂಡಿಂಗ್', 'ಸ್ಯಾಂಡ್ವಿಚ್' ಮುಂತಾದ ಹೆಸರುಗಳನ್ನು ಕೇಳಿದರೆ ಇದಾವುದೋ ಆಂಗ್ಲ ಭಾಷೆಯ ಚಿತ್ರಗಳ ಹೆಸರುಗಳೆಂದು ತಪ್ಪು ತಿಳಿಯಬೇಡಿ. ಇವು ವೇಶ್ಯಾವಾಟಿಕೆಗೆ ಬಳಸಲಾಗುತ್ತಿದ್ದ ಕೋಡ್ ವರ್ಡ್ಗಳು.
ಹೆಚ್ಚಾಗಿ ಶ್ರೀಮಂತರೇ ವಾಸವಾಗಿರುವ, ಸದಾಶಿವನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬರುವ, ಆರ್.ಎಂ.ವಿ. ಎಕ್ಸ್ಟೆನ್ಷನ್ನಲ್ಲಿ ಈ ಹೆಸರುಗಳನ್ನು ಬಳಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಐವರನ್ನು ಸಿಸಿಬಿ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದು, ಈ ಜಾಲದಲ್ಲಿ ಸಿಲುಕಿದ್ದ ಥೈಲ್ಯಾಂಡ್ ದೇಶದ ಐವರು ಮಹಿಳೆಯರನ್ನು ರಕ್ಷಿಸಲಾಗಿದೆ.
ಚಂದ್ರಕಾಂತ್ (32), ಸಂಜೀವ್ (39), ಲೂಯಿಸ್ ರಂಜೀತ್ ಕುಮಾರ್ (39), ಅನೀಶ್ ಆರ್ (23) ಮತ್ತು ಅಭಿಷೇಕ್ ಆರ್ (23) ಬಂಧಿತರು. ಇವರೆಲ್ಲ ಬೆಂಗಳೂರಿನ ವಿವಿಧ ಬಡಾವಣೆಗಳ ನಿವಾಸಿಗಳಾಗಿದ್ದು, KIYORA WELLNESS & THAI SPA ಎಂಬ ಮಸಾಜ್ ಪಾರ್ಲರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. [ವೇಶ್ಯಾವಾಟಿಕೆಯಲ್ಲಿ ಕರ್ನಾಟಕ ಬೇರೆ ರಾಜ್ಯಕ್ಕಿಂತ ಕಮ್ಮಿಯಿಲ್ಲ]

ಆರೋಪಿಗಳಿಂದ 4,100 ರು. ನಗದು, ಗಿರಾಕಿಗಳನ್ನು ಸಂಪರ್ಕಿಸಲು ಬಳಸುತ್ತಿದ್ದ 7 ಮೊಬೈಲ್ ಫೋನ್ ಹಾಗೂ 16 ನಿರೋಧ್ ಪಾಕೆಟ್ಗಳನ್ನು, ಒಂದು ಆಪಲ್ ಕಂಪನಿಯ ಬಿಳಿ ಬಣ್ಣದ ಐ-ಪ್ಯಾಡ್, 2 ಕ್ರೆಡಿಟ್ ಕಾರ್ಡ್ ಪೇಮೆಂಟ್ ಮೆಷಿನ್ನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯಾದ ಲೂಯಿಸ್ ರಂಜೀತ್ ಕುಮಾರ್ ಮತ್ತು ಆತನ ಹೆಂಡತಿ ವೀಣಾ, ಆರ್ಎಂವಿ ಎಕ್ಸ್ಟೆನ್ಷನ್ನ 10ನೇ ಕ್ರಾಸ್, 15ನೇ ಮುಖ್ಯರಸ್ತೆಯಲ್ಲಿ ಮಸಾಜ್ ಪಾರ್ಲರ್ ನಡೆಸುತ್ತಿದ್ದು, ಥೈಲ್ಯಾಂಡ್ನಿಂದ ಹೆಣ್ಣು ಮಕ್ಕಳನ್ನು ಬ್ಯೂಟಿ ಪಾರ್ಲರ್ನಲ್ಲಿ ಕೆಲಸಕ್ಕೆಂದು ಕರೆತಂದು, ಹೆಚ್ಚಿನ ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆಯ ದಂಧೆಯಲ್ಲಿ ತಳ್ಳುತ್ತಿದ್ದರು. [ಅರಬ್ಬರ ನಾಡಿನಲ್ಲಿ ಯಶಸ್ವೀ "ಆಪರೇಷನ್ ನೈಜೀರಿಯಾ"]
ಅಕ್ರಮ ಎಸಗಿ ಝಣಝಣ ಕಾಂಚಾಣ ಎಣಿಸುತ್ತಿದ್ದ ಬಂಧಿತರ ವಿರುದ್ಧ ಅನೈತಿಕ ಮಾನವ ಸಾಗಣೆ (ತಡೆ) ಕಾಯ್ದೆದ ಸೆಕ್ಷನ್ 3, 4 ಮತ್ತು 5, ಹಾಗು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 370, 370(ಎ)(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹ್ಯಾಪಿ ಎಂಡಿಂಗ್ ವೇಶ್ಯಾವಾಟಿಕೆ ಇವರಿಗೆ ಬ್ಯಾಡ್ ಎಂಡಿಂಗ್ ಆಗಿದೆ. ಮಾಡಿದ್ದುಣ್ಣೋ ಮಾರಾಯ!
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications