ಬೆಂಗಳೂರಿನಲ್ಲಿ ಪಿಕ್‌ಪಾಕೇಟ್‌ ಗ್ಯಾಂಗ್‌ ಕೈವಾಡ: ಬಿಎಂಟಿಸಿ ಸವಾರರೇ ಟಾರ್ಗೆಟ್‌!

ಬೆಂಗಳೂರು, ಜೂನ್‌ 23: ಬೆಂಗಳೂರಿನ ಬಿಎಂಟಿಸಿ ಬಸ್‌ನಲ್ಲಿ ವಾಂತಿ ಬಂದವರಂತೆ ನಟಿಸಿ ಪ್ರಯಾಣಿಕರಿಂದ ಹಣ ಪಿಕ್‌ ಪಾಕೇಟ್‌ ಮಾಡುವ ಎಂಟು ಜೇಬುಗಳ್ಳರ ತಂಡವೊಂದು ಸಕ್ರಿಯವಾಗಿದೆ ಎಂದು ಡಿಎಚ್‌ ವರದಿ ಮಾಡಿದೆ.

ಇತ್ತೀಚೆಗೆ ಗ್ಯಾಂಗ್‌ಗೆ ಇಬ್ಬರು ಬಲಿಪಶುವಾಗಿದ್ದಾರೆ. ಈ ಕಳ್ಳರು ಬಸ್ಸಿನಲ್ಲಿ ವಾಂತಿ ಬರುವಂತೆ ನಟಿಸಿ ಗಮನ ಬೇರೆಡೆ ಸೆಳೆದು ಪ್ರಯಾಣಿಕರನ್ನು ಜೇಬುಗಳ್ಳತನ ಮಾಡುತ್ತಿರುವುದು ತಿಳಿದು ಬಂದಿದೆ. ಈ ಗ್ಯಾಂಗ್‌ನಿಂದ ಹಣ ಕಳೆದುಕೊಂಡವರಲ್ಲಿ ವಿಜಯನಗರ ಜಿಲ್ಲೆಯ ಪ್ರಾವಿಷನ್ ಸ್ಟೋರ್ ಮಾಲೀಕ 45 ವರ್ಷದ ಕೆಎಚ್ ಎಂ ಸಿದ್ದರಾಮೇಶ ಎಂಬುವವರು ಜೂನ್ 16 ರಂದು 25,000 ರೂಪಾಯಿಯನ್ನು ಕಳೆದುಕೊಂಡಿದ್ದಾರೆ.

Pickpocket gang in Bangalore: BMTC riders are the target!

ಮಗಳನ್ನು ಕೋಚಿಂಗ್ ತರಗತಿಗೆ ಸೇರಿಸಲು ಕುಟುಂಬ ಸಮೇತ ಬೆಂಗಳೂರಿಗೆ ಬಂದಿದ್ದ ಎಂದು ವಿಜಯನಗರದ ಸಿದ್ದರಾಮೇಶ ಎಂಬುವರು ಮೆಜೆಸ್ಟಿಕ್‌ನಲ್ಲಿ ಬಿಎಂಟಿಸಿ ಬಸ್‌ ಹತ್ತಿ ಆಡುಗೋಡಿ ಪೊಲೀಸ್‌ ಕ್ವಾರ್ಟರ್ಸ್‌ಗೆ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಆಗ ಶಾಂತಿನಗರ ಡಿಪೋ ಬಳಿ ಎಂಟು ಮಂದಿಯ ತಂಡವೊಂದು ಬಸ್‌ಗೆ ಹತ್ತಿತ್ತು.

ಬಿಎಂಟಿಸಿ ಬಸ್‌ನಲ್ಲಿ ಈ ಗ್ಯಾಂಗ್ ಸಿದ್ದರಾಮೇಶ ಅವರ ಸುತ್ತಲೂ ಇರುವ ಸೀಟುಗಳಲ್ಲಿ ಕುಳಿತಿತ್ತು. ಒಂದೆರೆಡು ನಿಮಿಷದಲ್ಲೇ ಗ್ಯಾಂಗಿನಲ್ಲಿ ಸಿದ್ದರಾಮೇಶನ ಹಿಂದೆ ಕುಳಿತವರೊಬ್ಬರು ವಾಂತಿ ಬರುವ ಹಾಗೆ ನಟಿಸತೊಡಗಿದರು. ಉಳಿದವರು ಸಿದ್ದರಾಮೇಶರಿಗೆ ವಾಂತಿ ಬರಬಹುದು ಎಂದು ಎದ್ದೇಳಲು ಹೇಳಿದರು. ಸಿದ್ದರಾಮೇಶ ತಕ್ಷಣ ಎದ್ದರು. ವ್ಯಕ್ತಿ ಅಸ್ವಸ್ಥನಾಗಿ ವರ್ತಿಸುತ್ತಿದ್ದಾಗ ಗ್ಯಾಂಗ್ ಸಿದ್ದರಾಮೇಶನನ್ನು ಸುತ್ತುವರೆಯಿತು. ಬಳಿಕ ಗ್ಯಾಂಗ್ ನಿಮ್ಹಾನ್ಸ್ ಬಸ್ ನಿಲ್ದಾಣದಲ್ಲಿ ಇಳಿದುಕೊಂಡಿತು. ಅಲ್ಲಿಗೆ ಕಥೆ ಮುಗಿದಿತ್ತು.

Pickpocket gang in Bangalore: BMTC riders are the target!

ಬಸ್ 300 ಮೀಟರ್ ಮುಂದೆ ಸಾಗಿದ ಬಳಿಕ ಸಿದ್ದರಾಮೇಶ ಅವರು ಜೇಬನ್ನು ಪರಿಶೀಲಿಸಿದಾಗ 25 ಸಾವಿರ ರೂಪಾಯಿ ಕಳ್ಳತನವಾಗಿರುವುದು ಗೊತ್ತಾಯಿತು. ಕೂಡಲೇ ಬಸ್ ಕಂಡಕ್ಟರ್ ಹಾಗೂ ಡ್ರೈವರ್ ಗೆ ವಿಷಯ ತಿಳಿಸಿ ಬಸ್ ನಿಂದ ಕೆಳಗಿಳಿದಿದ್ದಾರೆ. ಮತ್ತೆ ನಿಮ್ಹಾನ್ಸ್ ಬಸ್ ನಿಲ್ದಾಣಕ್ಕೆ ಹೋದರು. ಅಷ್ಟರಲ್ಲಾಗಲೇ ಆರೋಪಿಗಳು ಪರಾರಿಯಾಗಿದ್ದರು.

ಆಗ ಸಿದ್ದಾಪುರ ಠಾಣೆಗೆ ದೂರು ನೀಡಲು ಸಿದ್ದರಾಮೇಶ ತೆರಳಿದರು. ಆದರೆ ಅವರು ಆಡುಗೋಡಿ ಪೊಲೀಸರಿಗೆ ಸೂಚಿಸಿದ್ದಾರೆ. ಸಿದ್ದರಾಮೇಶ ಆಡುಗೋಡಿ ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ಇದೇ ರೀತಿಯ ಹಣ ಕಳೆದುಕೊಂದ ಅನುಭವದ ಮತ್ತಿಬ್ಬರು ವ್ಯಕ್ತಿಗಳು ಕಂಡು ಬಂದರು.

ಸಿದ್ದರಾಮೇಶ ಅವರು ಈ ಬಗ್ಗೆ ಬಿಎಂಟಿಸಿ ಬಸ್‌ನಲ್ಲಿ ಗ್ಯಾಂಗ್‌ನ ಸದಸ್ಯರು ತಮ್ಮ ಜೇಬುಗಳಲ್ಲಿ ಹಣ ಎತ್ತಿಕೊಳ್ಳುವ ಬಗ್ಗೆ ಇತರ ಇಬ್ಬರು ವ್ಯಕ್ತಿಗಳು ಇದೇ ರೀತಿಯ ಕಥೆಗಳನ್ನು ವಿವರಿಸಿದ್ದಾರೆ. ಅವರ ಹಣವನ್ನು ಕದಿಯುವ ಮೊದಲು ಅವರು ವಾಂತಿ ಬರುವ ನಾಟಕವನ್ನು ಆಡಿದ್ದಾರೆ ಎಂದು ತಿಳಿಸಿದರು.

ಆಡುಗೋಡಿ ಪೊಲೀಸರು ಸಿದ್ದರಾಮೇಶ ಅವರನ್ನು ಸಿದ್ದಾಪುರ ಪೊಲೀಸರಿಗೆ ವಾಪಸ್ ಕಳುಹಿಸಿದ್ದು, ಘಟನೆ ತಮ್ಮ ವ್ಯಾಪ್ತಿಯಲ್ಲಿ ನಡೆದಿದೆ. ಅಂತಿಮವಾಗಿ ಅವರ ದೂರನ್ನು ಸ್ವೀಕರಿಸಲಾಯಿತು. ಆಡುಗೋಡಿ ಪೊಲೀಸರು ಇತರ ಸಂತ್ರಸ್ತರಿಂದಲೂ ದೂರುಗಳನ್ನು ಸ್ವೀಕರಿಸಿದ್ದಾರೆ. ಅದರಲ್ಲಿ ಒಬ್ಬರು 12 ಸಾವಿರ ರೂಪಾಯಿ ಕಳೆದುಕೊಂಡಿದ್ದರು.

ಪೊಲೀಸರು ಕಳ್ಳತನ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಕಳ್ಳರನ್ನು ಹಿಡಿಯಲು ಯತ್ನಿಸುತ್ತಿದ್ದಾರೆ. ಸಿದ್ದರಾಮೇಶ ಮಾತನಾಡಿ, ಗ್ಯಾಂಗ್ ನವರು ಕಪ್ಪು ಮೈಬಣ್ಣದವರಾಗಿದ್ದು, ಮೈಕಟ್ಟು ಹೊಂದಿದ್ದರು. ಮಗಳ ಕೋಚಿಂಗ್ ತರಗತಿಗಳಿಗೆ ಶುಲ್ಕ ಪಾವತಿಸಲು ಹಣವನ್ನು ತಾವು ತಂದಿದ್ದಾಗಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+