ಆರ್ಡರ್ಲಿ ಪದ್ಧತಿಯಿಂದ ಪೇದೆಗಳಿಗೆ ಸಿಗಲಿದೆಯೇ ಮುಕ್ತಿ?
ಬೆಂಗಳೂರು, ನವೆಂಬರ್ 16: ಅಪರಾಧ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ವಿಷಯ ಸಂಬಂಧ ಅಹೋರಾತ್ರಿ ಐಪಿಎಸ್ ಅಧಿಕಾರಿಗಳ ಮನೆ ಕಾಯುವ ಪೊಲೀಸ್ ಪೇದೆಗಳಿಗೆ ಆರ್ಡರ್ಲಿ(ಶಿಷ್ಯ ಪಾಲಕ) ಪದ್ಧತಿಯಿಂದ ಮುಕ್ತಿ ಸಿಗಲಿದೆ. ಈ ಪದ್ಧತಿಯನ್ನು ವಿರೋಧಿಸಿದ್ದ ಕೆಲ ಐಪಿಎಸ್ ಅಧಿಕಾರಿಗಳೂ ಈಗ ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಸರ್ಕಾರದ ಅನುಮತಿ ಬೇಕಿದೆ.
ಬ್ರಿಟಿಷರ ಕಾಲದಲ್ಲಿ ಅಧಿಕಾರಿಗಳ ಮೇಲೆ ಹೋರಾಟಗಾರರಿಂದ ತೊಂದರೆಗಳಾಗಬಹುದು ಎಂಬ ಕಾರಣಕ್ಕೆ ಇದ್ದ ಆರ್ಡರ್ಲಿ ಅನಿಷ್ಟ ಪದ್ಧತಿಯನ್ನು ಬಹಳಷ್ಟು ಚಿಂತಕರು ತೊಲಗಿಸಬೇಕು ಎಂದು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಕೆಲ ಐಪಿಎಸ್ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಡಿ ದರ್ಜೆ ನೌಕರರರನ್ನು ಪ್ರತ್ಯೇಕವಾಗಿ ನೇಮಿಸಲು ಸರ್ಕಾರ ಮುಂದಾಗಿದ್ದು ಆರ್ಡರ್ ಲಿ ಪದ್ಧತಿಯನ್ನು ರದ್ದುಪಡಿಸಬಹುದೆಂದು ಡಿಜಿಪಿ ಓಂಪ್ರಕಾಶ್ ಸರ್ಕಾರಕ್ಕೆ ಪತ್ರ ಮೂಲಕ ತಿಳಿಸಿದ್ದಾರೆ.

ತರಬೇತಿ ಹೊಂದಿದ ಕಾನ್ಸ್ ಸ್ಟೆಬಲ್ ಗಳು ಆರ್ಡರ್ಲಿ ಗಳಾಗಿ ಬಳಕೆಯಾಗುತ್ತಿದ್ದಾರೆ. ಇದರಿಂದ ಆರಕ್ಷಕ ಬೊಕ್ಕಸದಲ್ಲಿ ಹೆಚ್ಚ ಹಣ ವ್ಯಯವಾಗುತ್ತಿದೆ. ರಾಜ್ಯದಲ್ಲಿ 3 ಸಾವಿರ ಹುದ್ದೆಗಳು ಹಿರಿಯಪೊಲೀಸ್ ಅಧಿಕಾರಿಗಳ ಆರ್ಡರ್ಲಿಗಳಿಗೆ ಮೀಸಲಾಗಿವೆ. ನಿಯೋಜನೆಗೊಂಡ ಆರ್ಡರ್ಲಿಗಳನ್ನು ಹಿಂದಕ್ಕೆ ಕರೆಸಿಕೊಂಡರೆ ಪೊಲೀಸ್ ಮಾನವ ಶಕ್ತಿ ಹೆಚ್ಚುತ್ತದೆ ಎಂದು ವಿವರಿಸಿದ್ದಾರೆ.
ಆದರೆ ಏಕಾಏಕಿ ಆರ್ಡರ್ಲಿ ಸೇವೆಯಿಂದ ನೌಕರರನ್ನು ಹಿಂಪಡೆಯಲಾಗದಿದ್ದರೂ ಹಂತ ಹಂತವಾಗಿ ಪಡೆಯಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆರ್ಡರ್ಲಿ ನೌಕರರ ಕೆಲಸವೇನು
ಅಧಿಕಾರಿಗಳಿಗೆ ಬರುವ ದೂರವಾಣಿ ಕರೆಗಳನ್ನು ಸ್ವೀಕರಿಸುವುದು, ತುರ್ತು ಸಂದೇಶಗಳಿದ್ದಲ್ಲಿ ಅಧಿಕಾರಿಗಳಿಗೆ ತಿಳಿಸುವುದು, ವಿದೇಶ ಪ್ರವಾಸ ಕೈಗೊಂಡಾಗ ಸಹಾಯಕ್ಕೆ ಜತೆಗೆ ಹೋಗುವುದು, ಅಧಿಕಾರಿಗಳ ಪತ್ನಿಯರು ಹೇಳುವ ಕೆಲಸ ನಿರ್ವಹಿಸುವುದು, ತರಕಾರಿ, ದಿನಸಿ ಪದಾರ್ಥ ತರುವುದು, ಮಕ್ಕಳನ್ನು ಶಾಲೆಗೆ ಕರೆದೊಯ್ದು, ವಾಪಸ್ ಕರೆ ತರುವುದು. ಕೇರಳ ಮತ್ತು ತಮಿಳುನಾಡಿನಲ್ಲಿ ಈ ಪದ್ಧತಿ ನಿಷೇಧಿಸಲಾಗಿದೆ.
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
ಬೆಂಗಳೂರು-ಮಂಗಳೂರು ಮಧ್ಯ ನಿತ್ಯ ತಡರಾತ್ರಿ ವಿಮಾನ ಸೇವೆ, ಯಾವಾಗ? ಸಮಯ-ವೇಳಾಪಟ್ಟಿ ಇಲ್ಲಿದೆ -
Jr NTR: ನಟ ಜ್ಯೂನಿಯರ್ ಎನ್ಟಿಆರ್ ಬೆಂಗಳೂರು ಭೇಟಿ ವೇಳೆ ಅಭಿಮಾನಿಗಳ ನೂಕುನುಗ್ಗಲು; ಆಸ್ಪತ್ರೆಯ ಎಸ್ಕಲೇಟರ್ ಧ್ವಂಸ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ












Click it and Unblock the Notifications