ಏಪ್ರಿಲ್ 1 ರಿಂದ ರಾಜ್ಯಾದ್ಯಂತ ಓಮ್ನಿ ಆಂಬುಲೆನ್ಸ್ ನಿಷೇಧ
ಬೆಂಗಳೂರು, ಜನವರಿ 17: ರಾಜ್ಯದಲ್ಲಿ ಏ.1 ರ ಬಳಿಕ ಓಮ್ನಿ ಆಂಬುಲೆನ್ಸ್ ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ.
ಈ ವಾಹನಗಳಲ್ಲಿ ಆಂಬುಲೆನ್ಸ್ ನಲ್ಲಿ ಇರಬೇಕಾದ ಸೌಲಭ್ಯಗಳು ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅಪಘಾತ ಸಂಭವಿಸಿದರೆ ರೋಗಿ ಸೇರಿದಂತೆ ಜೊತೆಗಿರುವವರ ಪ್ರಾಣಕ್ಕೂ ಅಪಾಯವಾಗುವ ಸಾಧ್ಯತೆಗಳಿವೆ. ಹಾಗಾಗಿ ಈ ಮಾದರಿಯ ಆಂಬುಲೆನ್ಸ್ ಗಳನ್ನು ತಕ್ಷಣದಿಂದ ನಿರ್ಬಂಧಿಸುವಂತೆ ಆರೋಗ್ಯ ಇಲಾಖೆಯೂ ಕಳೆದ ವರ್ಷ ಸಾರಿಗೆ ಇಲಾಖೆಗೆ ಮನವಿ ಮಾಡಿತ್ತು.
'ಡೆಡ್' ಆಗಲಿದ್ದ ಓಮ್ನಿ ಆ್ಯಂಬುಲೆನ್ಸ್ ಗಳಿಗೆ ಆಕ್ಸಿಜನ್!
ಅದರಂತೆ ಸಾರಿಗೆ ಓಮ್ನಿ ಆಂಬುಲೆನ್ಸ್ ಗಳನ್ನು ನಿರ್ಬಂಧಿಸಿತ್ತು. ಏಕಾಏಕಿ ನಿಷೇಧಿಸಿದ್ದಕ್ಕೆ ತಡೆ ನೀಡಿದ್ದ ಹೈಕೋರ್ಟ್, 2018 ರ ಏ.1 ಬಳಿಕ ನಿಷೇಧಿಸುವಂತೆ ಸೂಚಿಸಿತ್ತು.ಈ ಹಿನ್ನೆಲೆಯಲ್ಲಿ ಏ.1ರ ಬಳಿಕ ಓಮ್ನಿ ಆಂಬುಲೆನ್ಸ್ ನಿಷೇಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ಈ
ಪ್ರಕಾರ
ಏ.1
ರ
ಬಳಿಕ
ಓಮ್ನಿ
ವಾಹನಗಳನ್ನು
ಆಂಬುಲೆನ್ಸ್
ಗಳಾಗಿ
ನೋಂದಣಿ
ಮಾಡುವ
ಹಾಗಿಲ್ಲ.
ಜತೆಗೆ
ಈಗಾಗಲೇ
ನೋಂದಣಿಯಾಗಿರುವ
ಓಮ್ನಿ
ವಾಹನಗಳ
ಅನುಮತಿಯನ್ನೂ
ಕೂಡ
ಹಿಂಪಡೆಯಲಾಗುತ್ತದೆ.
ಸಾರಿಗೆ
ಇಲಾಖೆ
ಮೂಲಗಳ
ಪ್ರಕಾರ
ರಾಜ್ಯದಲ್ಲಿ70
ಓಮ್ನಿ
ಆಂಬುಲೆನ್ಸ್
ಗಳಿದ್ದು,
ಈ
ಪೈಕಿ
ಬೆಂಗಳೂರು
ನಗರದಲ್ಲಿ
11
ಓಮ್ನಿ
ಆಂಬುಲೆನ್ಸ್
ಗಳಿವೆ
ಎಂದು
ಸಾರಿಗೆ
ಆಯುಕ್ತ
ಬಿ.ದಯಾನಂದ್
ತಿಳಿಸಿದ್ದಾರೆ.