ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್ ಓಡಾಟ ಖಚಿತ
ಬೆಂಗಳೂರು, ಡಿಸೆಂಬರ್ 30 : ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆ ಗೊಳಿಸಲು ಬಿಎಂಟಿಸಿ ಸಜ್ಜಾಗಿದೆ. 150 ಎಲೆಕ್ಟ್ರಿಕ್ ಎ.ಸಿ. ಬಸ್ ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ನಿಗಮ ನಿರ್ಧರಿಸಿದ್ದು ಟೆಂಡರ್ ಕರೆದಿದೆ. ಫೆಬ್ರವರಿ ಅಂತ್ಯಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಏಪ್ರಿಲ್ ಅಥವಾ ಮೇ ವೇಳೆಗೆ ಬಸ್ ಗಳು ರಸ್ತೆಗಿಳಿಯುವ ನಿರೀಕ್ಷೆಯಿದೆ. ಕೇಂದ್ರದ ಫಾಸ್ಟರ್ ಅಡಾಪ್ಷನ್ ಆಂಡ್ ಮ್ಯಾನ್ಯುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಇಕಲ್ಸ್ ಅನುದಾನ ಬಳಸಿಕೊಂಡು ಬಿಎಂಟಿಸಿ ಈ ಯೋಜನೆ ಕೈಗೆತ್ತಿಕೊಂಡಿದೆ. ಗುತ್ತಿಗೆ ಪಡೆದುಕೊಳ್ಳುವ ಕಂಪನಿಗೆ ದೇಶ ವಿದೇಶದಲ್ಲಿ ಕನಿಷ್ಠ ೩೦೦ ಎಲೆಕ್ಟ್ರಿಕ್ ಬಸ್ ಗಳನ್ನು 2ವರ್ಷ ನಿರ್ವಹಣೆ ಮಾಡಿದ ಅನುಭವವಿರಬೇಕು. ಮತ್ತು ಸೂಕ್ತವಾದ ರೀಚಾರ್ಜಿಂಗ್ ಘಟಕವನ್ನೂ ಹೊಂದಿರಬೇಕು ಎಂದು ಟೆಂಡರ್ ನಲ್ಲಿ ಷರತ್ತು ವಿಧಿಸಲಾಗಿದೆ.

ಎಲೆಕ್ಟ್ರಿಕ್ ಬಸ್ ಕೇವಲ 4 ಗಂಟೆಯಲ್ಲಿ ರೀಚಾರ್ಜ್ ಆಗುವಂತಿರಬೇಕು:
ವಿದ್ಯುತ್ ಮರುಪೂರಣ(ಚಾರ್ಜಿಂಗ್) ಘಟಕ ಎಲೆಕ್ಟ್ರಿಕ್ ಬಸ್ ಯೋಜನೆಯ ಪ್ರಮುಖ ಭಾಗವಾಗಿದೆ. ಟೆಂಡರ್ ನಲ್ಲಿ ಷರತ್ತಿನಂತೆ ಚಾರ್ಜಿಂಗ್ ಘಟಕಕ್ಕೆ ಬೇಕಾಗಿರುವ ಭೂಮಿ ಮತ್ತು ಘಟಕದ ಸ್ಥಾಪನೆ ಜವಾಬ್ದಾರಿಯೂ ಕಂಪನಿ ಮೇಲಿರಲಿದ್ದು, ಪ್ರತಿ ಬಸ್ ನ ವಿದ್ಯುತ್ ಬಳಕೆ ವೆಚ್ಚವನ್ನು ಬಿಎಂಟಿಸಿ ಭರಿಸಲಿದೆ.
ಪ್ರತಿ ಬಸ್ 4 ಗಂಟೆಯೊಳಗೆ ಪೂರ್ಣ ಚಾರ್ಜ್ ಆಗುವಂತಿರಬೇಕು. 150 ಬಸ್ ಗಳಿಗೆ ನಿಗಮ ಡಿಪೋ ನೀಡಲಿದ್ದು, 2 ನಿರ್ವಹಣಾ ವ್ಯವಸ್ಥಾಪಕರನ್ನು ಕಂಪನಿಯೇ ನೇಮಿಸಿಕೊಳ್ಳಬೇಕು ಎಂದು ಟೆಂಡರ್ ನಲ್ಲಿ ತಿಳಿಸಿದೆ.

9 ರಿಂದ 12 ಮೀಟರ್ ಬಸ್
32 ಆಸನ ಸಾಮರ್ಥ್ಯದ 9 ಮೀ. ಉದ್ದದ ಅಥವಾ 41 ಆಸನ ಸಾಮರ್ಥ್ಯದ 11 ರಿಂದ 12 ಮೀಟರ್ ಉದ್ದದ ಎಲೆ್ಕಟ್ರಿಕ್ ಬಸ್ ಗಳನ್ನು 10 ವರ್ಷ ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲು ನಿಗಮ ನಿರ್ಧರಿಸಿದೆ.

ಬಸ್ ನಿತ್ಯ 200 ಕಿ.ಮೀ ಸಂಚರಿಸಲಿದೆ
10 ವರ್ಷದ ಒಪ್ಪಂದದಿಂದ ಗುತ್ತಿಗೆ ಪಡೆದ ಕಂಪನಿಗೆ ನಿಗಮ ಕಿ.ಮೀ ಗೆ ನಿಗದಿಪಡಿಸಿದ ಹಣ ನೀಡಲಿದೆ. ಬಸ್ ಕನಿಷ್ಠ 200 ಕಿ.ಮೀ ಸಂಚರಿಸಲಿದ್ದು, ಹೆಚ್ಚಿನ ಕಿ.ಮೀ ಗೆ ಪ್ರತ್ಯೇಕ ಹಂತದಲ್ಲಿ ದರ ನಿಗದಿ ಮಾಡಲಾಗುತ್ತದೆ. 2014ರಲ್ಲಿ ಮೊಟ್ಟ ಮೊದಲ ಬಾರಿಗೆ ಎಲೆಕ್ಟ್ರಿಕ್ ಬಸ್ ನ ಪ್ರಾಯೋಗಿಕ ಓಡಾಟವನ್ನು ನಿಗಮ ನಡೆಸಿತ್ತು.

ಕಂಪನಿ ಬಸ್ ಗಳ ನಿರ್ವಹಣೆ ಮಾಡಬೇಕು
ಗುತ್ತಿಗೆ ಪಡೆಯುವ ಕಂಪನಿಯೇ ಎಲೆಕ್ಟ್ರಿಕ್ ಬಸ್ ಗಳ ನೋಂದಣಿ , ವಿಮೆ, ಮೋಟಾರು ವಾಹನ ತೆರಿಗೆ, ಸೇವಾ ತೆರಿಗೆ ಪಾವತಿಸಬೇಕು. ಪ್ರಯಾಣಿಕ ತೆರಿಗೆ ಮತ್ತು ಸ್ಟೇಜ್ ಕ್ಯಾರಿಯೇಜ್ ಪರ್ಮಿಟ್ ಜವಾಬ್ದಾರಿಯನ್ನು ಬಿಎಂಟಿಸಿ ಹೊತ್ತುಕೊಳ್ಳಲಿದೆ.ಉಳಿದಂತೆ ಕಂಪನಿಯೇ ಚಾಲಕರನ್ನು ನೀಡಬೇಕು ಮತ್ತು ಬಸ್ ನಿರ್ವಹಣೆ ಮಾಡಬೇಕಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ












Click it and Unblock the Notifications