ಏಪ್ರಿಲ್ ವೇಳೆಗೆ ಉತ್ತರ, ದಕ್ಷಿಣ ಬೆಂಗಳೂರು ನಡುವೆ ಮೆಟ್ರೋ ಸಂಪರ್ಕ ?
ಬೆಂಗಳೂರು, ಜ. 10: ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್ ಸಿಎಲ್) ಅಂದುಕೊಂಡಂತೆ ಎಲ್ಲವೂ ಸಲೀಸಾಗಿ ನಡೆದರೆ, ಬರುವ ಏಪ್ರಿಲ್ ವೇಳೆಗೆ ಉದ್ಯಾನ ನಗರಿಯ ಉತ್ತರ ಹಾಗೂ ದಕ್ಷಿಣ ಭಾಗಗಳ ನಡುವಿನ ಒಟ್ಟಾರೆ 42 ಕಿ.ಮೀ. ದೂರದ ಮೆಟ್ರೋ ಸಂಪರ್ಕ ಸಾಧ್ಯವಾಗಲಿದೆ.
ಮೂಲಗಳ ಪ್ರಕಾರ, ಸದ್ಯಕ್ಕೀಗ, ನ್ಯಾಷನಲ್ ಕಾಲೇಜು ಹಾಗೂ ಯಲಚೇನ ಹಳ್ಳಿಯ ನಡುವಿನ ಮೆಟ್ರೋ ಮಾರ್ಗ ಸಿದ್ಧಗೊಂಡಿದ್ದು ಈ ಎಂಟು ಕಿ.ಮೀ. ದೂರದ ಹಾದಿಯಲ್ಲಿ ಬಿಎಂಆರ್ ಸಿಎಲ್ ಈಗಾಗಲೇ ಪ್ರಯೋಗಾರ್ಥ ಸಂಚಾರ ಆರಂಭಿಸಿದೆ.

ಆದರೆ, ಉತ್ತರ ಹಾಗೂ ದಕ್ಷಿಣ ಭಾಗಗಳನ್ನು ಬೆಸೆಯುವ ಯೋಜನೆ ನನಸಾಗಬೇಕಾದಲ್ಲಿ ಮಲ್ಲೇಶ್ವರಂನ ಸಂಪಿಗೆ ರಸ್ತೆಯಿಂದ (ಮಂತ್ರಿ ಮಾಲ್ ಬಳಿ) ನ್ಯಾಷನಲ್ ಕಾಲೇಜು ನಡುವಿನ ಮೆಟ್ರೋ ಹಾದಿ ಸಂಪೂರ್ಣವಾಗಿ ಸಿದ್ಧವಾಗಬೇಕಿದೆ. ಈ ಕಾಮಗಾರಿಯೂ ಆಗಲೇ ಅಂತಿಮ ತಲುಪಿದೆ ಎನ್ನಲಾಗುತ್ತಿದೆ.
ಬಿಎಂಆರ್ ಸಿಎಲ್ ತಾನೇ ಹಾಕಿಕೊಂಡಿದ್ದ ಡೆಡ್ ಲೈನ್ ಪ್ರಕಾರ, ಇದೇ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಈ ಹಾದಿ ಸಿದ್ಧಗೊಳ್ಳಬೇಕು. ಆದರೆ, ದೀರ್ಘಾವಧಿಯಿಂದಲೂ ಆಮೆಗತಿಯಲ್ಲಿ ಸಾಗುತ್ತಿರುವ ಅಲ್ಲಿನ ಕಾಮಗಾರಿ ನೋಡಿದರೆ ಅದು ಮಾರ್ಚ್ ಒಳಗೇ ಸಿದ್ಧಗೊಳ್ಳುವುದು ಅಸಾಧ್ಯ ಎನ್ನಲಾಗುತ್ತಿದೆ.
ಆದರೆ, ಇದನ್ನು ಬಿಎಂಆರ್ ಸಿಎಲ್ ಒಪ್ಪುತ್ತಿಲ್ಲ. ಸಂಸ್ಥೆ ಹೇಳುವ ಪ್ರಕಾರ, ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್ ಮೂಲಕ ನ್ಯಾಷನಲ್ ಕಾಲೇಜು ನಿಲ್ದಾಣದ ನಡುವಿನ ರಸ್ತೆ ಬಹುತೇಕ ಪೂರ್ಣಗೊಂಡಿದೆ. ಮುಂದಿನ ವಾರದಲ್ಲಿ ಈ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ.
ಒಟ್ಟಾರೆಯಾಗಿ , ಮುಂದಿನ ಏಪ್ರಿಲ್ ವೇಳೆಗೆ ಈ ಹಾದಿ ಸಿದ್ಧಗೊಳಿಸುವುದೇ ನಮ್ಮ ಗುರಿ ಎಂದಿದೆ ಸಂಸ್ಥೆ. ಬಿಎಂಆರ್ ಸಿಎಲ್ ನ ಈ ಆಶ್ವಾಸನೆ ನಿಗದಿತ ಸಮಯದಲ್ಲಿ ಸಾಕಾರವಾದರೆ, ಇದು ಬೆಂಗಳೂರಿಗರಿಗೆ ಯುಗಾದಿ ಹಬ್ಬದ ವೇಳೆಗೆ ಸಿಹಿ ಸುದ್ದಿ ಸಿಗಲಿದೆ ಎಂದು ನಿರೀಕ್ಷಿಸಬಹುದಾಗಿದೆ.
-
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
ಯುಗಾದಿ, ರಂಜಾನ್ ಹಬ್ಬಕ್ಕೆ 2000 ವಿಶೇಷ ಬಸ್: ಮುಂಗಡ ಟಿಕೆಟ್ ಗೆ ರಿಯಾಯ್ತಿ ಘೋಷಿಸಿದ KSRTC -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ












Click it and Unblock the Notifications