ವಿಶ್ವ ಪರಿಸರ ದಿನದಂದು ಕನ್ನಡ ಕವಿಗಳ ’ಹಸಿರು ಸಿರಿಯ’ ಹಾಡುಗಳು
ಜೂನ್ 5, ವಿಶ್ವ ಪರಿಸರ ದಿನ ಪ್ರಯುಕ್ತ, ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಒಂದು ವಿಧಾನ. ಪ್ರತಿ ವರ್ಷ ಯೂನೈಟೆಡ್ ನೇಶನ್ಸ್ ಅವರು ಒಂದು ವಿಷಯದ ಮೇಲೆ ವಿಶ್ವ ಪರಿಸರ ದಿನವನ್ನು ಆಚರಿಸುತ್ತಾರೆ.
2019ನೇ ಸಾಲಿನ ವಿಷಯ 'ವಾಯು ಮಾಲಿನ್ಯ'. ವಾಯು ಮಾಲಿನ್ಯ ವಿಚಾರವಾಗಿ ಕುರಿತು ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಮೂಡಿಸಲು ಗ್ರೀನ್ ಪಾಥ್ ಹಾಗು ಐರಿಸ್ ಮೀಡಿಯಾ #EatToBeat ಎನ್ನುವ ಒಂದು ಸಂಗೀತ (ಈ ಹಸಿರು ಸಿರಿಯಲಿ) ಹಾಗು ಆಹಾರ ಉತ್ಸವವನ್ನು ಜೂನ್ 5 ರಂದು ಗ್ರೀನ್ ಪಾಥ್ ಹೋಟೆಲ್, ಮಲ್ಲೇಶ್ವರಂ ಆವರಣದಲ್ಲಿ ಹಮ್ಮಿಕೊಂಡಿದೆ. 'ಈ ಹಸಿರು ಸಿರಿಯಲಿ' ಎಂಬ ಸಂಗೀತೋತ್ಸವದಲ್ಲಿ ಅಂಜಲಿ ಹಳಿಯಾಳ್, ರಾಜಶೇಖರ್ ನುಲಿ ಹಾಗು ತಂಡದವರು ಹಾಡಲಿದ್ದಾರೆ.

ಸಂಜೆ 6.30 ರಿಂದ 9 ಘಂಟೆಯ ವರೆಗೆ ನಡೆಯುಲಿರುವ ಈ ಕಾರ್ಯಕ್ರಮದಲ್ಲಿ ಪ್ರಕೃತಿಗೆ ಸಂಬಂಧ ಪಟ್ಟ ಹಾಗು ಕನ್ನಡದ ಕವಿಗಳ ರಚನೆಯ ಜನಪ್ರಿಯ ಭಾವಗೀತೆಗಳನ್ನು ಪ್ರಸ್ತುತ ಪಡಿಸುತ್ತಾರೆ.
ಮಧು ಬನದ ಜಾಡಿನಲ್ಲಿ (ದೊಡ್ಡರಂಗೇಗೌಡರು), ಈ ಬಾನು ಈ ಚುಕ್ಕಿ (ಎನ್ ಎಸ್ ಲಕ್ಷ್ಮೀ ನಾರಾಯಣ ಭಟ್ಟರು), ಮುಗಿಅಲ್ ಮಾರಿಗೆ (ಬೇಂದ್ರೆ), ಈ ಘಳಿಗೆಯೇ ಮೈತಾಳೀತೋ (ನಿಸಾರ್ ಅಹಮದ್), ಗಿಡ ಮರವೆಲ್ಲಾ ಹೀಗೆ ಇರಲಿ (ಶಿವಾನಂದ್ ಬೇಕಲ್), ದೋಣಿ ಸಾಗಲಿ ಮುಂದೆ ಹೋಗಲಿ (ಕುವೆಂಪು) ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸುವ ಹಾಡುಗಳಲ್ಲಿ ಕೆಲವು.

ಸಂಗೀತ ಉತ್ಸವಕ್ಕೆ ಉಚಿತ ಪ್ರವೇಶವಾಗಿದ್ದು, ಅಲ್ಲೇ ನಡೆಯುವ ಆಹಾರ ಉತ್ಸವಕ್ಕೆ ನಿಗಧಿತವಾದ ಬೆಲೆಯೊಂದಿಗೆ ಮಿಲ್ಲೆಟ್ಸ್ (ಧಾನ್ಯಗಳು) ಇಂದ ಮಾಡಿರುವ ಆಹಾರವನ್ನು ಹಾಗು ಗ್ರೀನ್ ಪಾಥ್ ಅವರೇ ಸಾವಯವವಾಗಿ ಬೆಳೆಸಿರುವ ತರಕಾರಗಳು ಹಣ್ಣುಗಳ ತಿನುಸುಗಳನ್ನು ಸವಿಯುವ ಅವಕಾಶ.

ಎಚ್ ಆರ್ ಜಯರಾಮ್ ಅವರು ನಡೆಸುತ್ತಿರುವ ಗ್ರೀನ್ ಪಾಥ್ ರೆಸ್ಟೊರೆಂಟ್ ನಲ್ಲಿ ಸಾವಯವವಾಗಿ ತಮ್ಮ ಭೂಮಿಯಲ್ಲೇ ಬೆಳೆದ ಮಿಲ್ಲೆಟ್ಸ್, ಹಣ್ಣು ತರಕಾರಿಗಳಿಂದ ಇಂದ ತಿನುಸುಗಳನ್ನು ತಯಾರಿಸುತ್ತಾರೆ. ಇದರ ಮೂಲಕ ಹೆಚ್ಚಾಗಿ ಮಿಲ್ಲೆಟ್ಸ್ ಅನ್ನು ಬಳಸಲು ಉತ್ತೇಜಿಸುತ್ತಿದ್ದಾರೆ. ಮಿಲ್ಲೆಟ್ಸ್ ಅಲ್ಲದೆ ಬೇರೆ ಉತ್ತರ, ದಕ್ಷಿಣ ತಿನಿಸುಗಳೂ ದೊರೆಯುತ್ತವೆ.
-
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ.











Click it and Unblock the Notifications