ಮಾಜಿ ಕಾರ್ಪೊರೇಟರ್ ವೇದವ್ಯಾಸ್ ಭಟ್ ಮೇಲೆ ಹಲ್ಲೆ!
ಬೆಂಗಳೂರು, ಮೇ 14: ಮಾಜಿ ಕಾರ್ಪೊರೇಟರ್ ಮೇಲೆ ಹಲ್ಲಿ ನಡೆಸಿರುವ ಘಟನೆ ವಿವಿಪುರಂ ಪೊಲೀಸ್ಠಾಣಾ ವ್ಯಾಪ್ತಿಯಲ್ಲಿನ ಎನ್ಎಂ ಎಚ್ ಬಳಿ ಸೋಮವಾರ ನಡೆದಿದೆ.
ಮಾವಳ್ಳಿಯ ಕಾರ್ಪೊರೇಟರ್ ಆಗಿದ್ದ ವೇದವ್ಯಾಸ್ ಭಟ್ ಹಲ್ಲೆಗೆ ಒಳಗಾದ ವ್ಯಕ್ತಿ. ವಾಕಿಂಗ್ ಹೋಗಿದ್ದ ವೇಳೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಎರಡು ಬೈಕ್ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಹಲ್ಲೆ ಮಾಡಿದ್ದು, ಹಲ್ಲೆಗೆ ಕಾರಣ ಇದುವರೆಗೂ ತಿಳಿದುಬಂದಿಲ್ಲ.
ಸಚಿವ ರಮಾನಾಥ ರೈ ಆಪ್ತನ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ
ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವೇದವ್ಯಾಸ್ ಭಟ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ.
ವೇದವ್ಯಾಸ್ ಅವರಿಗೆ ಕೊಲೆ ಬೆದರಿಕೆ ಏನಾದರೂ ಬಂದಿತ್ತಾ, ಯಾರೊಂದಿಗಾದರೂ ಈ ಹಿಂದೆ ಜಗಳ ಕಾದಾಟ ನಡೆದಿತ್ತೇ ಇಲ್ಲವಾದರೆ ಏಕಾಏಕಿ ದುಷ್ಕರ್ಮಿಗಳು ಬಂದು ಹಲ್ಲೆ ಮಾಡಲು ಹೇಗೆ ಸಾಧ್ಯ ಎಂಬ ಅನುಮಾನಗಳು ಮೂಡಿವೆ.
Comments
English summary
Mavalli ex corporator Vedavyas Bhat attacked by miscreants near NMH hotel on Monday morning. VV Puram police registered case and shifted injured Bhat to Victoria hospital.