ಮೇಯರ್ ಆದ ಬಳಿಕ ಗಂಗಾಂಬಿಕೆ ಮೊದಲ ಭೇಟಿ ಎಲ್ಲಿಗೆ ಗೊತ್ತಾ?
ಬೆಂಗಳೂರು, ಸೆ.29: ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಶುಕ್ರವಾರ ನಡೆದಿದೆ, ಮೇಯರ್ ಆಗಿ ಕಾಂಗ್ರೆಸ್ ಅಭ್ಯರ್ಥಿ ಗಂಗಾಂಬಿಕೆ ಮಲ್ಲಿಕಾರ್ಜುನ್ ಹಾಗೂ ಉಪ ಮೇಯರ್ ಆಗಿ ಜೆಡಿಎಸ್ ಅಭ್ಯರ್ಥಿ ರಮೀಳಾ ಆಯ್ಕೆಯಾಗಿದ್ದಾರೆ.
ಬಿಬಿಎಂಪಿ ನೂತನ ಮೇಯರ್ ಗಂಗಾಂಬಿಕೆ ಸಂಕ್ಷಿಪ್ತ ವ್ಯಕ್ತಿ ಚಿತ್ರಣ
ಮೇಯರ್ ಆದ ಬಳಿಕ ಗಂಗಾಂಬಿಕೆಯವರು ಮೊದಲ ಬಾರಿಗೆ ಎಲ್ಲಿಗೆ ಭೇಟಿ ನೀಡಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡುವುದು ಸಹಜ ಆದರೆ ಗಂಗಾಂಬಿಕೆ ದೇವಸ್ಥಾನಕ್ಕೋ ಅಥವಾ ಯಾವುದೇ ಸ್ನೇಹಿತರ ಮನೆಗೋ ಹೋಗಿಲ್ಲ ಬದಲಾಗಿ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಗೆ ಭೇಟಿ ನೀಡಿದರು.
ಬೆಂಗಳೂರಿನ 52ನೇ ಮೇಯರ್ ಆಗಿ ಗಂಗಾಂಬಿಕೆ ಆಯ್ಕೆ
ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಕಂಟ್ರೋಲ್ ರೂಂಗೆ ತೆರಳಿ ಮಳೆಯಿಂದ ಆಗಿರುವ ಅನಾಹುತಗಳ ಬಗ್ಗೆ ವಿವಿರಣೆ ಕೇಳಿ, ಬಂದಿರು ದೂರುಗಳನ್ನು ಶೀಘ್ರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ವರ್ಗಾಯಿಸುವಂತೆ ಆದೇಶ ನೀಡಿದ್ದಾರೆ.
ಬಿಬಿಎಂಪಿ ಮೇಯರ್ ಚುನಾವಣೆ, ಬಿಜೆಪಿಗೆ ಹಿನ್ನಡೆ ಆಗಿದ್ದೇಕೆ?
ಭಾರಿ ಮಳೆ ಬರುವ ಮುನ್ಸೂಚನೆ ಇದ್ದು ಎಚಚ್ರಿಕೆಯ ಕ್ರಮಗಳನ್ನುವಹಿಸಬೇಕು ಎಂದು ಎಲ್ಲ ವಲಯ ಕಂಟ್ರೋಲ್ ರೂಂಗಳಿಗೆ ಸಂದೇಶ ನೀಡಿದ್ದಲ್ಲದೇ ವಲಯ ಆಯುಕ್ತರು, ವಲಯದ ಅಭಿಯಂತರರು ಕಾರ್ಯತತ್ಪರತೆಯಿಂದ ಕಾರ್ಯನಿರ್ವಹಿಸಲು ಸೂಚಿಸಿದ್ದಾರೆ.
ನೂತನ ಮೇಯರ್ ಗಂಗಾಂಬಿಕೆ ಎದುರಿಸಬೇಕಾದ ಸವಾಲುಗಳಿವು!
ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು 130 ಮತಗಳಿಂದ ಜಯಗಳಿಸಿದ್ದರು. ನಗರದಲ್ಲಿರುವ ತ್ಯಾಜ್ಯ, ರಾಜಕಾಲುವೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಮುಖ್ಯ ಗುರಿಯಾಗಿದೆ ಎಂದು ತಿಳಿಸಿದ್ದಾರೆ.