ಭಾನುವಾರ ಸೂರ್ಯೋದಯದವರೆಗೂ ಬೆಂಗಳೂರಿನ ಪ್ರಮುಖ ದೇವಾಲಯಗಳು ಕ್ಲೋಸ್, ಯಾಕೆ ಗೊತ್ತಾ?
ಬೆಂಗಳೂರು, ಅಕ್ಟೋಬರ್, 28: ಇಂದು (ಶನಿವಾರ) ಈ ವರ್ಷದ ಕೊನೆಯ ಚಂದ್ರ ಗ್ರಹಣ ಸಂಭವಿಸಲಿದ್ದು, ಖಗೋಳ ವಿಸ್ಮಯಕ್ಕೆ ಜನರೆಲ್ಲಾ ಕೌತುಕದಿ ಕಾಯುತ್ತಿದ್ದಾರೆ. ಇತ್ತ ದೇವಾಲಯಗಳಲ್ಲಿ ಕೂಡ ದೇವರಿಗೆ ವಿಶೇಷ ಪೂಜೆ ಮಾಡಿ ವಿವಿಧ ಅಭಿಷೇಕ ನಡೆಸಿ ದೇವರನ್ನು ದರ್ಬೆರ್ಯಲ್ಲಿ ಬಂಧಿಸಿ ಇಡಲಾಗಿದೆ. ನಗರದ ಪ್ರಮುಖ ದೇವಾಲಯಗಳು ಇಂದು ಸಂಜೆ 6 ಗಂಟೆಯ ಬಳಿಕ ಕ್ಲೋಸ್ ಇರಲಿದೆ. ವಿಶೇಷ ಪೂಜೆ ಮಾಡಲು ಭಕ್ತ ಬಾಂಧವರು ನಾಳೆ ಸೂರ್ಯೋದಯದ ಬಳಿಕ ದೇವಾಲಯಕ್ಕೆ ಎಂಟ್ರಿ ಕೊಡಬೇಕು.
ಸೂರ್ಯೋದಯ ಆಗುವ ಮುನ್ನ ದೇವಾಲಯಗಳು ಕ್ಲೀನ್ ಮಾಡಲಿದ್ದು, ವಿಶೇಷ ಪೂಜೆ ಕೂಡ ನಾಳೆ ದೇವಾಲಯದಲ್ಲಿ ನಡೆಯಲಿದೆ. ಇನ್ನು ಇವತ್ತಿನ ಚಂದ್ರಗ್ರಹಣ ಲೈವ್ ಆಗಿ ನೋಡಲು ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ವಿಶೇಷ ವ್ಯವಸ್ಥೆ ಕೂಡ ಮಾಡಲಾಗಿದೆ.
ಇತ್ತಾ ಜವಾಹರ್ ಲಾಲ್ ನೆಹರು ತಾರಲಾಯದಲ್ಲಿ ಕೂಡ ಚಂದ್ರಗ್ರಹಣ ಲೈವ್ ವೀಕ್ಷಣೆಗೆ ಅವಕಾಶ ಮಾಡಿ ಕೊಡಲಾಗುತ್ತದೆ. ರಾತ್ರಿ 11 ಗಂಟೆಯಿಂದ ತಾರಾಲಯ ಓಪನ್ ಇದ್ದು, 11:31ರಿಂದ ಗ್ರಹಣ ಆರಂಭವಾಗಲಿದೆ. ತಡರಾತ್ರಿ 1 ಗಂಟೆ 5 ನಿಮಿಷದಿಂದ 2 ಗಂಟೆ 24 ನಿಮಿಷದರವರೆಗೆ ಚಂದ್ರ ಗ್ರಹಣ ಗೋಚರವಾಗಲಿದ್ದು, ಹಿರಿಯ ಕಿರಿಯ ಎಲ್ಲಾ ವಯೋಮಾನದವರು ಗ್ರಹಣ ನೋಡಲು ಅನುಮತಿಯಿದೆ. ಯಾವುದೇ ಅನುಮಾನಗಳು ಇದ್ದರೂ ಹಿರಿಯ ವಿಜ್ಞಾನಿಗಳು ಬಗೆ ಹರಿಸಲಿದ್ದಾರೆ. ಗ್ರಹಣ ಆಗೋದ್ರಿಂದ ಆಗುವ ಬದಲಾವಣೆ ಬಗ್ಗೆ ವಿವರಿಸುತ್ತಾರೆ. ಸಂವಾದ ಕಾರ್ಯಕ್ರಮ ಕೂಡ ನಡೆಯಲಿದೆ.

ಸಾಮಾನ್ಯವಾಗಿ ತಾರಾಲಾಯದಲ್ಲಿ ಗ್ರಹಣ ವೀಕ್ಷಣೆಗೆ ಪ್ರತ್ಯೇಕ ವೀಡಿಯೋ ವಾಲ್ ನಿರ್ಮಾಣ ಮಾಡಿ ಇಡುತ್ತಾರೆ. ಜನರಿಗೆ ನೋಡಲು ಅನುಕೂಲ ಆಗುವ ನಿಟ್ಟಿನಲ್ಲಿ 2/3 ವೀಡಿಯೋ ವಾಲ್ ಹಾಕ್ತಾರೆ. ಆದರೆ ಈ ಸಲ ನೇರವಾಗಿ ಕಣ್ಣಿಗೆ ಕಾಣುವ ಗ್ರಹಣ ಆಗಿರುವುದರಿಂದ ಅದರ ಜೊತೆಗೆ ತಡರಾತ್ರಿ ಹೊತ್ತಲ್ಲಿ ಗ್ರಹಣ ಗೋಚರ ಆಗಿರುವುದರಿಂದ ಬಹುತೇಕ ಮಂದಿ ನಿದ್ರೆಗೆ ಜಾರಿರುತ್ತಾರೆ. ಈ ಹಿನ್ನಲೆ ಹೊರಗಡೆ ವೀಡಿಯೋ ವಾಲ್ ವ್ಯವಸ್ಥೆ ಇಲ್ಲ.
ಇನ್ನೂ ಗ್ರಹಣವನ್ನು ಬರಿಯ ಕಣ್ಣಿಂದ ಕೂಡ ನೋಡಲು ಅವಕಾಶ ಇದೆ. ಚಿಕ್ಕ ಮಕ್ಕಳು ದೊಡ್ಡವರು ಎಲ್ಲಾ ವಯೋಮಾನದವರು ಕೂಡ ಈ ಗ್ರಹಣ ನೋಡಬಹುದು.
-
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral












Click it and Unblock the Notifications