ಖಾಸಗಿ ಆಸ್ಪತ್ರೆಗಳ ಮುಷ್ಕರ : ಡಾ.ದೇವಿ ಪ್ರಸಾದ್ ಶೆಟ್ಟಿ ಖಡಕ್ ಸಂದೇಶ
Recommended Video
ಬೆಂಗಳೂರು, ನವೆಂಬರ್ 2 : ಕರ್ನಾಟಕದ ಖಾಸಗಿ ಆಸ್ಪತ್ರೆಗಳ ವೈದ್ಯರು ನವೆಂಬರ್ 3ರ ಶುಕ್ರವಾರ ಒಂದು ದಿನದ ಮುಷ್ಕರ ನಡೆಸಲಿದ್ದಾರೆ. ತುರ್ತು ಸೇವೆಗಳನ್ನು ಹೊರತು ಪಡಿಸಿ ಉಳಿದ ಸೇವೆಗಳನ್ನು ಸ್ಥಗಿತಗೊಳಿಸಲಿದ್ದಾರೆ.
ಕರ್ನಾಟಕ ಸರ್ಕಾರ 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ (ತಿದ್ದುಪಡಿ) 2017'ನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಮುಷ್ಕರ ನಡೆಸಲಾಗುತ್ತಿದೆ. ಶುಕ್ರವಾರ ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿವೆ.
ನವೆಂಬರ್ 3ರಂದು ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರ
ನಾರಾಯಣ ಹೃದಯಾಲಯದ ಡಾ.ದೇವಿ ಪ್ರಸಾದ್ ಶೆಟ್ಟಿ ಅವರು ನ.3ರ ಮುಷ್ಕರದ ಬಗ್ಗೆ ಮಾತನಾಡಿದ್ದಾರೆ. 'ಸರ್ಕಾರ ನಮ್ಮ ಕರ್ತವ್ಯಕ್ಕೆ ಬೆದರಿಕೆ ಒಡ್ಡುವ ಕೆಲಸ ಮಾಡುತ್ತಿದೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಅಸಹಕಾರ ಸೇರಿದಂತೆ ಯಾವುದೇ ಘಟನೆಗಳು ನಡೆದರೆ ಮೆಡಿಕಲ್ ಕೌನ್ಸಿಲ್, ನ್ಯಾಯಾಲಯಗಳ ಮೂಲಕ ವಿಚಾರಣೆ ನಡೆಯುತ್ತಿದೆ' ಎಂದು ಹೇಳಿದ್ದಾರೆ.
ಡಾ.ಭಕ್ತಿ ಅವರ ಕಾರ್ಯಕ್ಕೆ ನಮ್ಮದೊಂದು ಸಲಾಮ್
'ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ನಮಗೆ ವಕೀಲರ ಮೂಲಕವೂ ಉತ್ತರ ನೀಡದಂತೆ ಕಾಯ್ದೆ ರೂಪಿಸಲಾಗುತ್ತಿದೆ. ಉಗ್ರ ಕಸಬ್ ಕೂಡ ವಕೀಲರನ್ನು ನೇಮಿಸಿಕೊಳ್ಳಲು ಅವಕಾಶವಿತ್ತು. ಇದು ನಮ್ಮ ಉತ್ಕೃಷ್ಕವಾದ ವೃತ್ತಿಯ ಪ್ರಶ್ನೆಯಾಗಿದೆ' ಎಂದು ತಿಳಿಸಿದ್ದಾರೆ.
'ನಮ್ಮ ವೃತ್ತಿಯ ಘನತೆಯನ್ನು ನಾವು ಎತ್ತಿಹಿಡಿಯಬೇಕು. ಇದು ಭವಿಷ್ಯದ ಪ್ರಶ್ನೆಯಾಗಿದೆ. ನಮ್ಮನ್ನು ನಾವು ಸಮರ್ಥಿಸಿಕೊಳ್ಳಬೇಕು. ನ.3ರಂದು ಆಸ್ಪತ್ರೆಯ ಹೊರರೋಗಿಗಳ ವಿಭಾಗವನ್ನು ನಾವು ಬಂದ್ ಮಾಡೋಣ, ಸರ್ಕಾರಕ್ಕೆ ನಾವು ಕಾಯ್ದೆಯನ್ನು ವಿರೋಧಿಸುತ್ತಿದ್ದೇವೆ ಎಂಬ ಸಂದೇಶ ನಿಡೋಣ' ಎಂದು ಹೇಳಿದ್ದಾರೆ.
ಮಸೂದೆಯಲ್ಲಿ ಏನಿದೆ?
*
ಸರ್ಕಾರ
ನಿಗದಿ
ಪಡಿಸಿದ
ದರಕ್ಕಿಂತ
ಹೆಚ್ಚಿನ
ದರವನ್ನು
ಖಾಸಗಿ
ಆಸ್ಪತ್ರೆಗಳು
ವಿಧಿಸುವಂತಿಲ್ಲ
*
ಹೆಚ್ಚು
ಬಿಲ್
ಮಾಡಿದರೆ
25
ರಿಂದ
5
ಲಕ್ಷದ
ತನಕ
ದಂಡ
ವಿಧಿಸಲಾಗುತ್ತದೆ
*
ನಿಯಮ
ಉಲ್ಲಂಘನೆ
ಮಾಡಿದರೆ
6
ತಿಂಗಳಿನಿಂದ
3
ವರ್ಷದ
ತನಕ
ಜೈಲು
ಶಿಕ್ಷೆ
ವಿಧಿಸಬಹುದು
*
ರೋಗಿ
ಮೃತಪಟ್ಟರೆ
ದೇಹ
ಹಸ್ತಾಂತರ
ಮಾಡುವ
ಮುನ್ನ
ಬಾಕಿ
ಮೊತ್ತ
ಪಾವತಿಸುವಂತೆ
ಒತ್ತಾಯ
ಮಾಡುವಂತಿಲ್ಲ
*
ವೈದ್ಯಕೀಯ
ಸಂಸ್ಥೆಗಳು
ಸಂಬಂಧಿಸಿದ
ಪ್ರಾಧಿಕಾರದಲ್ಲಿ
ನೋಂದಣಿ
ಮಾಡುವುದು
ಕಡ್ಡಾಯ