ಜ.25ರಿಂದ ಬೆಂಗಳೂರಲ್ಲಿ ನೃತ್ಯಪ್ರಿಯರಿಗೆ ರಸದೌತಣ
ಬೆಂಗಳೂರು, ಜ. 25 : ಭಾರತದ ಶಾಸ್ತ್ರೀಯ ನೃತ್ಯ ಕಲೆಗಳನ್ನು ಪೋಷಿಸುತ್ತ, ಪ್ರೋತ್ಸಾಹಿಸುತ್ತ, ಜನಪ್ರಿಯಗೊಳಿಸುತ್ತಿರುವ 'ಕಿಂಕಿಣಿ' ಸಂಸ್ಥೆ 'ಕಿಂಕಿಣಿ ನೃತ್ಯೋತ್ಸವ'ವನ್ನು ಬೆಂಗಳೂರಿನ ಜಯನಗರದಲ್ಲಿರುವ ಜೆಎಸ್ಎಸ್ ಆಡಿಟೋರಿಯಂನಲ್ಲಿ ಜ.25ರಿಂದ 31ರವರೆಗೆ ಆಯೋಜಿಸಿದೆ. ನೃತ್ಯೋತ್ಸವದ 30ನೇ ಆವೃತ್ತಿ ನೃತ್ಯಪ್ರಿಯರಿಗೆ ರಸದೌತಣ ಬಡಿಸಲಿದೆ.
1983ರಲ್ಲಿ ಸ್ಥಾಪನೆಯಾದ ನಂತರ ಕಿಂಕಿಣಿ ನೃತ್ಯೋತ್ಸವವನ್ನು ಪ್ರತಿವರ್ಷ ನಿರಂತರವಾಗಿ ಆಯೋಜಿಸಿಕೊಂಡು ಬರಲಾಗಿದೆ. ಭಾರತದ ಎಲ್ಲ ಖ್ಯಾತ ಮತ್ತು ಪ್ರತಿಭಾವಂತ ಯುವ ನೃತ್ಯಪಟುಗಳು ಇಲ್ಲಿ ನರ್ತನವನ್ನು ಪ್ರದರ್ಶಿಸಲಿದ್ದು, ಎಲ್ಲ ರೀತಿಯ ನೃತ್ಯ ಪ್ರಾಕಾರಗಳು ಪ್ರದರ್ಶಿತವಾಗಲಿವೆ. ಜ.25ರ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.

ಯಾರ್ಯಾರು ನೃತ್ಯ ಪ್ರದರ್ಶಿಸಲಿದ್ದಾರೆ? : ಚೆನ್ನೈನ ನರ್ತಕಿ ನಟರಾಜ್ ಮತ್ತು ಮೈಥಿಲಿ ಪ್ರಕಾಶ್, ಲಖನೌನ ಅನುಜ್-ಅರ್ಜುನ್ ಮಿಶ್ರಾ ಡಾನ್ಸ್ ಕಂಪನಿ (ಕಥಕ್), ಕೇರಳದ ವೀಣಾ ನಾಯರ್ ಮತ್ತು ಧನ್ಯಾ ನಾಯರ್ (ಮೋಹಿನಿಯಾಟ್ಟಂ), ತಾಂಡವ (ಭರತನಾಟ್ಯಂ), ರಸಿಕ ಡಾನ್ಸ್ (ಭರತನಾಟ್ಯಂ) ಮತ್ತು ಬೆಂಗಳೂರಿನಲ್ಲಿ ನೆಲೆಯೂರಿರುವ ಓಡಿಸ್ಸಿ ನೃತ್ಯಗಾರ್ತಿ ಮಧುಲಿತಾ ಮೋಹಾಪಾತ್ರ ನೃತ್ಯರಸಿಕರನ್ನು ರಂಜಿಸಲಿದ್ದಾರೆ.
ಇವುಗಳಲ್ಲದೆ ಬೆಂಗಳೂರಿನ ಖ್ಯಾತ ನೃತ್ಯಗಾರ್ತಿ ಲಕ್ಷ್ಮಿ ಗೋಪಾಲಸ್ವಾಮಿ ಮತ್ತು ನತ್ಯನಾರಾಯಣ ರಾಜು ಅವರು ಭರತನಾಟ್ಯದಲ್ಲಿ ಮೈಸೂರು ಅರಸರಾದ ವೊಡೆಯರ್ ಅವರ ಕಥಾನಕವನ್ನು ನೃತ್ಯರೂಪಕದಲ್ಲಿ ನಿರೂಪಿಸಲಿದ್ದಾರೆ. ಮೈಸೂರಿನ ವಸುಂಧರಾ ದೊರೆಸ್ವಾಮಿ ಅವರ ಸಮನ್ವಯ ಡಾನ್ಸ್ ಕಂಪನಿ ಕುಚಿಪುಡಿ ಡಾನ್ಸ್ ಡ್ರಾಮಾ 'ಗಂಗಾ ಗೌರಿ ವಿಲಾಸಂ' ಪ್ರದರ್ಶಿಸಲಿದ್ದಾರೆ.
ಎಲ್ಲಿ? : ಜೆಎಸ್ಎಸ್ ಆಡಿಟೋರಿಯಂ, 1ನೇ ಮುಖ್ಯರಸ್ತೆ, 8ನೇ ಬ್ಲಾಕ್, ಜಯನಗರ, ಬೆಂಗಳೂರು - 560 082.
ಕಾರ್ಯಕ್ರಮಗಳ ವಿವರ
ಜ. 25 :
ಸಂಜೆ 6 : ಉದ್ಘಾಟನೆ
6.15 : ತಾಂಡವ ನೃತ್ಯ (ಭರತನಾಟ್ಯ)
7.30 : ವಸುಂಧರಾ ದೊರೆಸ್ವಾಮಿ ತಂಡ, ಮೈಸೂರು (ಭರತನಾಟ್ಯ)
ಜ. 26
ಸಂಜೆ 6.15 : ರಸಿಕ ಡಾನ್ಸ್ ತಂಡದಿಂದ ರಸಿಕಾರ್ಪಣ, ಕಿರಣ್ ಸುಬ್ರಮಣ್ಯಂ ಮತ್ತು ಸಂಧ್ಯಾ ಕಿರಣ್
7.30 : ಅನುಜ್-ಅರ್ಜುನ್ ಮಿಶ್ರಾ ಡಾನ್ಸ್ ಕಂಪನಿ, ಲಖನೌ (ಕಥಕ್)
ಜ. 27:
ಸಂಜೆ 6.15 : ಮಧುಲಿತಾ ಮೋಹಾಪಾತ್ರ ಮತ್ತು ನೃತ್ಯಾಂತರ ಡಾನ್ಸ್ ತಂಡ (ಓಡಿಸ್ಸಿ)
7.30 : ನರ್ತಕಿ ನಟರಾಜ್ (ಭರತನಾಟ್ಯ)
ಜ. 28:
ಸಂಜೆ 6.15 : ಶ್ರೀರಂಜನಿನಿ ಉಮೇಶ್ ಅವರಿಂದ ಶ್ರೀರಂಗ ವೇಲನ್ (ಭರತನಾಟ್ಯ)
7.30 : ಡಾ. ಸಂಜಯ್ ಶಾಂತಾರಾಮ್ ಮತ್ತು ಶಿವಪ್ರಿಯ ನೃತ್ಯ ಶಾಲೆ (ಕುಚಿಪುಡಿ)
ಜ. 29:
ಸಂಜೆ 6.15 : ಮೈಥಿಲಿ ಪ್ರಕಾಶ್, ಚೆನ್ನೈ (ಭರತನಾಟ್ಯ)
7.30 : ಸಮನ್ವಯ ಡಾನ್ಸ್ ಕಂಪನಿಯಿಂದ ಕುಚಿಪುಡಿ ರಂಗರೂಪಕ ಗಂಗಾ ಗೌರಿ ವಿಲಾಸಂ. ವೀಣಾ ಮೂರ್ತಿ ವಿಜಯ್ ಅವರ ಸಂಯೋಜನೆ.
ಜ. 30:
ಸಂಜೆ 6.15 : ಮಿಥುನ ಶಾಮ್ ಮತ್ತು ಸ್ನೇಹಾ ದಯಾನಂದನ್ ಅವರಿಂದ ಶಿವ-ಶಕ್ತಿ (ಭರತನಾಟ್ಯ)
7.30 : ಲಕ್ಷ್ಮೀ ಗೋಪಾಲಸ್ವಾಮಿ ಮತ್ತು ಸತ್ಯನಾರಾಯಣ ರಾಜು ಅವರಿಂದ ವೊಡೆಯರ್ಸ್ ಆಫ್ ಮೈಸೂರು (ಭರತನಾಟ್ಯ)
ಜ. 31:
ಸಂಜೆ 6.15 : ವೀಣಾ ನಾಯರ್ ಮತ್ತು ಧನ್ಯಾ ನಾಯರ್ (ಮೋಹಿನಿಯಾಟ್ಟಂ)
7.30 : ರಾಧಾ ಅವರಿಂದ ಭಾವಕೆ ಪದ್ಮನಾಭಂ (ಭರತನಾಟ್ಯ)
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications