ಕೆಂಪೇಗೌಡ ಪ್ರಶಸ್ತಿ ಪ್ರಕಟಿಸಿದ ಬಿಬಿಎಂಪಿ; ಪ್ರಶಸ್ತಿ ಪಡೆದವರ ಪಟ್ಟಿ
ಬೆಂಗಳೂರು, ಸೆಪ್ಟೆಂಬರ್ 04 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ 2019 ಘೋಷಣೆ ಮಾಡಿದೆ. 100 ಸಾಧಕರಿಗೆ ಬುಧವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಬಿಬಿಎಂಪಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಪ್ರಕಟಿಸಿದರು. ಸಾಧಕರಿಗೆ ಕೆಂಪೇಗೌಡ ಸ್ಮರಣಿಕೆ, ತಲಾ 50 ಸಾವಿರ ನಗದು, ಪ್ರಶಸ್ತಿ ಪತ್ರವನ್ನು ನೀಡಿ ಪಾಲಿಕೆವತಿಯಿಂದ ಗೌರವಿಸಲಾಗುತ್ತದೆ.
ಬಿಬಿಎಂಪಿ ಇದೇ ಮೊದಲ ಬಾರಿಗೆ ಕೆಂಪೇಗೌಡ ಪ್ರಶಸ್ತಿ ಜೊತೆಗೆ ಲಕ್ಷ್ಮೀದೇವಿ ಹೆಸರಿನಲ್ಲಿ 10 ಮಹಿಳಾ ಸಾಧಕರಿಗೆ ಪ್ರಶಸ್ತಿ ನೀಡುತ್ತಿದೆ. ಈ ಪ್ರಶಸ್ತಿ 25 ಸಾವಿರ ರೂ. ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ 5 ಸಂಸ್ಥೆಗಳಿಗೆ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿ ಪುರಸ್ಕೃತ ಸಂಸ್ಥೆಗೆ ಸ್ಮರಣಿಕೆ, ತಲಾ 5 ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ.

ಸಮಾಜ ಸೇವೆ
* ಎನ್. ಎ. ಚಿದಂಬರ
* ಪ್ರೊ. ರವಿವರ್ಮ ಕುಮಾರ್
* ಮಾವಳ್ಳಿ ಶಂಕರ್
* ಜೆ. ಎಂ. ವೀರಸಂಗಯ್ಯ
* ಡಾ. ಆಶುಶಾ
* ಹೇಮಲತಾ ಚಿದಾನಂದ್
* ಸೈಯದ್ ಗುಲಾಬ್
* ಪ್ರೊ. ಡಿ. ಮಂಚೇಗೌಡ
* ಎಂ. ಸದಾಶಿವಪ್ಪ
* ಪ್ರೊ. ಜಿ. ಬಿ. ಶಿವರಾಜು
* ನಿಸರ್ಗ ಜಗದೀಶ್
* ಡಿ. ಶಿವಕುಮಾರ
* ತಮ್ಮಣ್ಣ ಗೌಡ
* ಕೇಶವ ಕುಮಾರ್
* ವಿಜಯಲಕ್ಷ್ಮೀ
* ಕೇಶವಮೂರ್ತಿ

ಪ್ರಶಸ್ತಿ ಪಡೆದ ಗಣ್ಯರ ಪಟ್ಟಿ
* ಕನ್ನಡ ಸೇವೆ : ಚಂದ್ರಶೇಖರ ಪಾಟೀಲ, ಹಾ. ವೀ. ಮಂಜುಳಾ ಶಿವಾನಂದ, ರಾ. ನಂ. ಚಂದ್ರಶೇಖರ್
* ಶಿಕ್ಷಣ : ಡಾ. ಗುರುರಾಜ ಕರಜಗಿ, ಎಸ್.ಭೈರೇಗೌಡ, ಎನ್. ವಿ. ಮಣಿ, ಚಿಕ್ಕಣ್ಣ, ಟಿ. ಶಿವಣ್ಣ, ಬಿ. ಆರ್. ವಿನೋದ್, ಡಾ. ವಿ. ಎಸ್. ಸುರೇಂದ್ರ
* ಕ್ರೀಡೆ : ಜಿ. ಬಿಂದುರಾಣಿ, ಶಾಂತಮೂರ್ತಿ, ಸೈಯದ್ ಇಬಾದತ್ ಉಲ್ಲಾ, ಮುನಿತಿಮ್ಮಯ್ಯ, ಟಿ. ಜಿ. ಶಂಕರ್, ಎಂ. ಯೋಗೇಂದ್ರ, ಪಿ. ಹರ್ಷಿಣಿ, ಪೈಲ್ವಾನ್ ನಾಗರಾಜ್, ಸುನೀಲ್ ರಾಜು, ಜಿ. ಎನ್. ಅರ್ಜುನಪ್ಪ, ಭರತ್ ಕುಮಾರ್, ಎನ್. ಕುಮಾರ್
* ಚಲನಚಿತ್ರ : ಡಾ. ಮುಖ್ಯಮಂತ್ರಿ ಚಂದ್ರು, ಬಿ. ಎಚ್. ಸುಬ್ರಮಣ್ಯ, ಆರ್. ರತ್ನಂ
* ವೈದ್ಯಕೀಯ : ಡಾ. ಶಿವಾನಂದ, ಡಾ. ಕೆ. ಎನ್. ಮಹೇಂದ್ರನಾಥ್, ಡಾ. ಶಾಂತಿ ತಮ್ಮಲ, ಡಾ. ಟಿ. ವೆಂಕಟಶಾಮಯ್ಯ

ಪ್ರಶಸ್ತಿ ಪಡೆದ ಸಾಧಕರು
* ಸಾಹಿತ್ಯ : ಪ್ರೊ. ಶಿವರಾಮಯ್ಯ, ಪ್ರೊ. ಜಿ. ಅಬ್ದುಲ್ ಬಷೀರ್, ಪ್ರತಿಭಾ ನಂದಕುಮಾರ್
* ರಂಗಭೂಮಿ : ಆಂಜನಪ್ಪ, ಆರ್. ಮಂಜುಳಾ
* ಮಾಧ್ಯಮ : ಎಸ್. ದೇವನಾಥ್, ಕುಶಲ ಡಿಮೊಲಾ, ನಾಗರಾಜ್ ಇಳೆಗುಂಡಿ, ಸುಭಾಷ್ ಹೂಗಾರ್, ಎಚ್. ವಿ. ಕಿರಣ್, ದಿವಾಕರ್, ಎಂ. ಜಿ. ರಜನಿ, ಕೆ. ಎಸ್. ಗಣೇಶ್, ಬಿ. ಎ. ಅರುಣ್, ಸೂರಜ್ ಮಹಾವೀರ್ ಉತ್ರೆ, ಶ್ರೀನಾಥ್ ಜೋಶಿ, ಚಂದನ್ ಶರ್ಮಾ, ಸಿದ್ದು ಕಾಳೋಜಿ, ಎಚ್. ಎನ್. ಶ್ರೀನಿವಾಸಪ್ರಸಾದ್, ಅಶೋಕ್ ರಾಮ್, ಪ್ರವೀಣ್ ಅಕ್ಕಿ

ಸರ್ಕಾರಿ ಸೇವೆ, ಸಂಗೀತ, ವಿವಿಧ ಕ್ಷೇತ್ರ
* ಸರ್ಕಾರಿ ಸೇವಾ ಕ್ಷೇತ್ರದಲ್ಲಿ ಡಿ. ರೂಪಾ, ಎಂ. ಎನ್. ಅನುಚೇತ್ ಮತ್ತು 6 ಪೊಲೀಸ್ ಅಧಿಕಾರಿಗಳ ತಂಡ
* ಸಾಂಸ್ಕೃತಿಕ, ಸಂಗೀತ, ವಿವಿಧ ಕ್ಷೇತ್ರ : ಮಂಜುಳಾ ಗುರುರಾಜ್, ಕೆ. ಕೆ. ನಟರಾಜನ್, ಡಾ. ಸುಮಾ ಸುಧೀಂದ್ರ, ಕನಕಮೂರ್ತಿ, ಎಚ್. ಎ. ಅನುಲ್ ಕುಮಾರ್, ಚಂದ್ರಕಲಾ ಗಂ.ಸಂಗಪ್ಪ ಹಾರಕೊಡೆ, ಎಂ. ಲಕ್ಷ್ಮಣ್, ಮಧುಲಿತ ಮೋಹಪಾತ್ರ, ಎಚ್. ಎಂ. ಮಯಬ್ರಹ್ಮಾಚಾರ್, ಪೂರ್ಣಿಮಾ ಕೆ. ಗುರುರಾಜ, ಆರ್. ಪ್ರಕಾಶ್ ಅರಸ್, ಪ್ರಮೀಳಾ ಶಂಕರ್, ಜಿ. ಎಸ್. ರಾಜಲಕ್ಷ್ಮೀ, ಸಂಜಯ್ ಶಾಂತಾರಾಮ್, ಎಸ್. ಪಿ. ಸಿದ್ದರಾಮರಾವ್, ಎಸ್. ಸುಭಾಷ್, ಮೀನಾಕ್ಷಿ, ಡಾ. ಎಸ್. ಟಿ. ರಾಮಚಂದ್ರಪ್ಪ, ಪಿ. ರಮಾ, ಡಾ. ನಾಗೇಶ್ ಬೆಟ್ಟಕೋಟೆ, ಆರ್. ರೇಣುಕಾರಾಧ್ಯ, ಸುಧಾಕರ ದರ್ಬೆ, ರಾಜಯೋಗೇಂದ್ರ, ವಿಕ್ರಂ ಸೂರಿ, ನವೀನ್ ತಿವಾರಿ, ಶರದ್ ಶರ್ವ, ಉಸ್ಮಾನ್, ಹೇಮಾ ಪ್ರಭಾತ್, ಡಿ. ಎನ್. ಸಂಪತ್, ಜಿ. ಎಸ್. ಹೆಗ್ಡೆ.

ಲಕ್ಷ್ಮೀದೇವಿ ಪ್ರಶಸ್ತಿ ಪಡೆದವರು
* ಲೀಲಾ ದೇವಿ ಆರ್. ಪ್ರಸಾದ್
* ಧನ ಭಾಗ್ಯಮ್ಮ
* ಕವನ ಬಸವ ಕುಮಾರ್
* ಎ. ಅನಸೂಯ
* ಡಾ. ಬಿ. ಆರ್. ಲಕ್ಷ್ಮೀ
* ಪ್ರಾಚಿ ಗೌಡ
* ವಿ. ಭಾರತಿ
* ನಾರಂಗಿ ಭಾಯಿ
* ಡಾ.ಗೌರಿಶ್ರೀ
* ಸುಜನ್ಯಾ ವಸಿಷ್ಠ

ಶಿವಕುಮಾರ ಸ್ವಾಮೀಜಿ
* ಶ್ರೀ ರಮಣ ಮಹರ್ಷಿ ಅಕಾಡೆಮಿ ಫಾರ್ ಬ್ಲೈಂಡ್
* ಬಾಸ್ಕೋ ಮನೆ
* ಸುಮಂಗಲಿ ಸೇವಾಶ್ರಮ ಟ್ರಸ್ಟ್
* ಮುಸ್ಲಿಂ ಅನಾಥಾಶ್ರಮ
* ಮನೋನಂದನ ಬುದ್ಧಿಮಾಂಧ್ಯ ಮಕ್ಕಳ ಶಾಲೆ












Click it and Unblock the Notifications