ಬೆಂಗಳೂರಿನಲ್ಲಿ 'ಸನ್ನಿ ನೈಟ್' ಹಾಟೆಸ್ಟ್ ಪಾರ್ಟಿ ಬೇಕಾ?
Recommended Video

ಬೆಂಗಳೂರು, ಡಿಸೆಂಬರ್ 09 : ಮೈಯಲ್ಲಿ ಚಳಿಯ ಗುಳ್ಳೆಗಳನ್ನೆಬ್ಬಿಸುವ ಡಿಸೆಂಬರ್ 31ರ ಹೊಸವರ್ಷದ ಸಂಭ್ರಮದಲ್ಲಿ, ಕೊರೆಯುವ ಮಾಗಿಯ ಚಳಿಯಲ್ಲಿ ಪಡ್ಡೆಗಳ ಮೈಯನ್ನು ಬೆಚ್ಚಗಾಗಿಸಲು ಕರನ್ಜಿತ್ ಕೌರ್ ವೋಹ್ರಾ ಎಂಬ ಅದ್ಭುತ ಅಂಗಸೌಷ್ಟವದ ಬೆಡಗಿ ಬೆಂಗಳೂರಿಗೆ ಬರುತ್ತಿದ್ದಾರೆ.
ಈ ಕರನ್ಜಿತ್ ಕೌರ್ ವೋಹ್ರಾ ಯಾರೆಂಬುದನ್ನು ತಿಳಿಯಬೇಕಿದ್ದರೆ ಗೂಗಲ್ ನೊಮ್ಮೆ ಜಾಲಾಡಿ ನೋಡಿ. ಆ ಚೆಲುವೆ ಮತ್ತಾರೂ ಅಲ್ಲ, ಒಂದಾನೊಂದು ಕಾಲದಲ್ಲಿ ನೀಲಿ ಚಿತ್ರಗಳಲ್ಲಿ ನಟಿಸಿ ಕುಖ್ಯಾತಿಯನ್ನು ಗಳಿಸಿದ್ದ ಭಾರತದ ಮೂಲದ ಬೆಡಗಿ ಸನ್ನಿ ಲಿಯೋನ್.
ಜಿಸಮ್ 2, ಶೂಟೌಟ್ ಅಟ್ ವಡಾಲಾ, ಎಂಎಂಎಸ್ 2, ಲವ್ ಯೂ ಆಲಿಯಾ, ಕಾಮ ಕಾಮಿಡಿ ಚಿತ್ರ ಮಸ್ತ್ ಜಾದೆ, ಒನ್ ನೈಟ್ ಸ್ಟಾಂಡ್ ಮುಂತಾದ ಹಿಂದಿ ಚಿತ್ರಗಳಲ್ಲಿ ಕಾಮನೆ ಕೆರಳಿಸುವಂಥ ಪಾತ್ರಗಳಲ್ಲಿ ಅಭಿನಯಿಸಿ ಭಾರತದಲ್ಲಿಯೂ ಸನ್ನಿ ಲಿಯೋನ್ ಹೆಸರುವಾಸಿಯಾಗಿದ್ದಾರೆ.

ಪೇಟಾ ಜಾಹೀರಾತಿಗಾಗಿ ಬೆತ್ತಲಾದ ಸನ್ನಿ
ಅವರು ಹಿಂದಿ ಸಿನೆಮಾಗಳಲ್ಲಿ ನಟಿಸುವುದು ಮಾತ್ರವಲ್ಲ, ಪ್ರಾಣಿಹಿಂಸೆ ಮಾಡಬೇಡಿರೆಂದು ಪೇಟಾಗಾಗಿ ತನ್ನ ಗಂಡ ಡೇನಿಯೆಲ್ ವೈಬರ್ ನೊಂದಿಗೆ ಇತ್ತೀಚೆಗೆ ಬೆತ್ತಲಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ, ಅಮೆರಿಕಾದ ಕ್ಯಾನ್ಸರ್ ಸೊಟೈಟಿ ಪರವಾಗಿಯೂ ಅವರು ಅಭಿಯಾನ ಮಾಡಿದ್ದಾರೆ.
ಪ್ರಾಣಿಗಳ ಮೇಲಿನ ಪ್ರೀತಿಗೆ ಬೆತ್ತಲಾದ ಸನ್ನಿಲಿಯೋನ್ ದಂಪತಿ!

'ಸನ್ನಿ ನೈಟ್' ಎಂಬ ಹಾಟೆಸ್ಟ್ ಪಾರ್ಟಿ
ಈ ಪರಿಯ ಸನ್ನಿ ಲಿಯೋನ್ ಅವರ 'ಸನ್ನಿ ನೈಟ್' ಎಂಬ ಹಾಟೆಸ್ಟ್ ಪಾರ್ಟಿಗೆ ಬೆಂಗಳೂರಿನಲ್ಲಿ ವೇದಿಕೆ ಸಜ್ಜಾಗುತ್ತಿದೆ. ನಾಗವಾರದಲ್ಲಿರುವ ಮಾನ್ಯತಾ ಎಂಬಾಸಿ ಬಿಸಿನೆಸ್ ಪಾರ್ಕ್ ನಲ್ಲಿ ಸನ್ನಿ ಲಿಯೋನ್ ಪಡ್ಡೆಗಳ ಚಳಿ ಬಿಡಿಸಲಿದ್ದಾರೆ. ಇಪ್ಪತ್ತೊಂದು ವಯಸ್ಸು ಮೀರಿದವರಿಗೆ ಮಾತ್ರ ಪ್ರವೇಶ! ಪ್ರೊಗ್ರೆಸಿವ್ ಬ್ರದರ್ಸ್ ಎಂದೇ ಹೆಸರುವಾಸಿಯಾಗಿರುವ ಸನ್ನಿ ಮತ್ತು ಕಣ್ ಎಂಬುವವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ
ಸನ್ನಿ ಬಂದು ಬೆಂಗಳೂರಿನಲ್ಲಿ ಕುಣಿಯುತ್ತಿರುವುದು ಗೊತ್ತಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಹಲವಾರು ಕನ್ನಡಪರ ಸಂಘಟನೆಗಳು ಭಾರೀ ಪ್ರತಿರೋಧ ಆರಂಭಿಸಿವೆ. ಬೆಂಗಳೂರು ನಗರದ ಸಂಸ್ಕೃತಿಯನ್ನು ಸನ್ನಿ ನೈಟ್ ಕುಲಗೆಡಿಸಲಿದೆ, ಇಂಥ ಕಾರ್ಯಕ್ರಮದಲ್ಲಿ ನಡೆಯುವ ಅರೆಬೆತ್ತಲೆ ನೃತ್ಯಗಳು ಯುವಕರ ಹಾದಿ ತಪ್ಪಿಸಲಿವೆ ಎಂಬುದು ಕನ್ನಡಪರ ಸಂಘಟನೆಗಳು ವಾದ.

ಸನ್ನಿ ಚಿತ್ರ ಸುಟ್ಟು ಹಾಕಿ ಆಕ್ರೋಶ
ಕರ್ನಾಟಕ ರಕ್ಷಣಾ ವೇದಿಕೆ ಕೂಡ ಪ್ರತಿಭಟನೆ ನಡೆಸಿ ಸನ್ನಿ ಲಿಯೋನ್ ಅವರ ಚಿತ್ರವನ್ನು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಇನ್ಫೋಟೆಕ್ ಮತ್ತು ಬಯೋಟೆಕ್ ಕಂಪನಿಗಳಿಗೆ ಮಾತ್ರ ಟಿಕೆಟ್ ಮಾರಾಟ ಮಾಡಲಾಗುತ್ತಿದ್ದು, ಇದನ್ನು ಕೂಡಲೆ ರದ್ದುಪಡಿಸಬೇಕೆಂದು ಆಗ್ರಹಿಸಿದ್ದಾರೆ. ಓದುಗರೆ, ಏನು ಹೇಳುತ್ತೀರಿ? ಕಾರ್ಯಕ್ರಮ ರದ್ದಾಗಬೇಕಾ? ಅಥವಾ ನಡೆಯಬೇಕಾ?
-
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications