ಬಿಗ್ ಬಾಸ್ ಮನೆಗೆ ಪತ್ರಕರ್ತ ರವಿ ಬೆಳಗೆರೆ ಎಂಟ್ರಿ; ಏನಿದು ಲೆಕ್ಕಾಚಾರ?
ಬೆಂಗಳೂರು, ಅಕ್ಟೋಬರ್ 11: ಹಿರಿಯ ಪತ್ರಕರ್ತ- ಹಾಯ್ ಬೆಂಗಳೂರ್ ಹಾಗೂ ಓ ಮನಸೇ ಸಂಪಾದಕ ರವಿ ಬೆಳಗೆರೆ 'ಬಿಗ್ ಬಾಸ್- ಕನ್ನಡ' ಮನೆ ಪ್ರವೇಶಿಸುವುದು ಖಾತ್ರಿ ಆಗಿದೆ. ಈ ವಿಚಾರವು ವಿವಿಧ ಮೂಲಗಳಿಂದ ಖಚಿತವಾಗಿದೆ. ಕಲರ್ ಫುಲ್ ವ್ಯಕ್ತಿತ್ವದ ರವಿ ಬೆಳಗೆರೆ ಪತ್ರಿಕೋದ್ಯಮ, ಶಾಲೆ, ರೇಡಿಯೋ, ಸಿನಿಮಾ, ಯೂ ಟ್ಯೂಬ್ ಹೀಗೆ ನಾನಾ ಮಾಧ್ಯಮಗಳ ಮೂಲಕ ಜನಪ್ರಿಯರು.
ಅಷ್ಟೇ ಅಲ್ಲ, ವಿವಾದಗಳಿಂದಲೂ ರವಿ ಬೆಳಗೆರೆ ಅವರು ಹೊರತಾಗಿಲ್ಲ. ಇತ್ತೀಚೆಗೆ 'ಬೆಳ್ ಬೆಳಗ್ಗೆ ಬೆಳಗೆರೆ' ಎಂಬ ಯೂ ಟ್ಯೂಬ್ ನ ತಮ್ಮ ಸ್ವಂತ ಚಾನೆಲ್ ಕಾರ್ಯಕ್ರಮದ ಮೂಲಕವೂ ಅವರು ಸುದ್ದಿಯಲ್ಲಿ ಇದ್ದಾರೆ. ಆದರೆ ಬಿಗ್ ಬಾಸ್ ಮನೆಯೊಳಗೆ ಎಷ್ಟು ದಿನ ರವಿ ಬೆಳಗೆರೆ ಇರಬಲ್ಲರು ಎಂಬುದು ಸದ್ಯದ ಪ್ರಶ್ನೆ.
Bigg Boss Kannada 7: ದೊಡ್ಮನೆ ಟಿಕೆಟ್ ಪಡೆದ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಇಲ್ಲಿದೆ
ಬಿಗ್ ಬಾಸ್ ನ ಈ ಹಿಂದಿನ ಅವತರಣಿಕೆಯಲ್ಲಿ ರವಿ ಬೆಳಗೆರೆ ಅವರ ಮಗಳು ಭಾವನಾ ಬೆಳಗೆರೆ ಸಹ ಭಾಗವಹಿಸಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಬಿಗ್ ಬಾಸ್ ಮನೆಯೊಳಗೆ ಜಗಳ- ವಾಗ್ವಾದ, ರಂಪ- ರಾದ್ಧಾಂತಗಳು ನೋಡುತ್ತಾ ಬಂದಿದ್ದೇವೆ. ಇಂಥ ಸನ್ನಿವೇಶದಲ್ಲಿ ರವಿ ಬೆಳಗೆರೆ ಪ್ರವೇಶದಿಂದ ಈ ರಿಯಾಲಿಟಿ ಶೋ ಇನ್ನಷ್ಟು ರಂಗೇರುವುದರಲ್ಲಿ ಅನುಮಾನ ಇಲ್ಲ.

ಆದರೆ, ಬಿಗ್ ಬಾಸ್ ಮನೆಯ ಶಿಸ್ತು, ಊಟ- ತಿಂಡಿ, ಟಾಸ್ಕ್ ಗಳು... ಇವೆಲ್ಲವುಗಳಿಗೆ ರವಿ ಬೆಳಗೆರೆ ಅವರು ಒಗ್ಗಿಕೊಳ್ಳಲು ಸಾಧ್ಯವಾ? ಅಕ್ಟೋಬರ್ ಹದಿಮೂರನೇ ತಾರೀಕಿನ ಭಾನುವಾರದಂದು ಸ್ಪರ್ಧಿಗಳು ಬಿಗ್ ಬಾಸ್ ಮನೆಗಳು ಮನೆಯೊಳಗೆ ಪ್ರವೇಶ ಮಾಡಲಿದ್ದು, ಆ ನಂತರ ಉತ್ತರ ಸಿಗಲಿದೆ.
ಅಂದ ಹಾಗೆ, ಬಿಗ್ ಬಾಸ್ ಸ್ಪರ್ಧಿಯಾಗಿ ರವಿ ಬೆಳಗೆರೆ ಅವರು ಮನೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಬಂದಾಗ, ಈ ಬಗ್ಗೆ ಅವರನ್ನೇ ಒನ್ ಇಂಡಿಯಾ ಕನ್ನಡದಿಂದ ಪ್ರಶ್ನಿಸಲಾಗಿತ್ತು. ಆಗ ತಾವು ಸ್ಪರ್ಧೆ ಮಾಡುತ್ತಿಲ್ಲ ಎಂದು ತಿಳಿಸಿದ್ದರು. ಶುಕ್ರವಾರದಂದು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆವು. ಆದರೆ ಸಾಧ್ಯವಾಗಲಿಲ್ಲ.
ಬಹುತೇಕ ಎಲ್ಲ ಕ್ರಿಯೇಟಿವ್ ಕ್ಷೇತ್ರಗಳಲ್ಲಿ ತಮ್ಮದೊಂದು ಛಾಪು ಮೂಡಿಸಿರುವ ರವಿ ಬೆಳಗೆರೆ ಅವರು ಬಿಗ್ ಬಾಸ್ ಗೆ ಸ್ಪರ್ಧೆ ಮಾಡುವುದನ್ನು ನಮ್ಮದೇ ಮೂಲಗಳು ಖಚಿತಪಡಿಸಿವೆ. ಅವರ 'ಬಿಗ್ ಬಾಸ್' ಪ್ರವೇಶದ ಹಿಂದಿನ ಲೆಕ್ಕಾಚಾರಗಳು ಏನಿದೆಯೋ? ಆದರೂ ಅವರಿಗೆ 'ಬೆಸ್ಟ್ ಆಫ್ ಲಕ್'.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications