ಮಣಿಕಾಂತ್ 'ಭಾವ ತೀರ ಯಾನ' ಬಿಡುಗಡೆಗೆ ಬನ್ನಿ
ಬೆಂಗಳೂರು, ಮೇ.8: ಪತ್ರಕರ್ತ ಮತ್ತು ಜನಪ್ರಿಯ ಅಂಕಣಕಾರ ಎ.ಆರ್.ಮಣಿಕಾಂತ್ ಅವರ 'ಭಾವತೀರಯಾನ'ಪುಸ್ತಕವನ್ನು ನಟ ಪ್ರಕಾಶ್ ರೈಅವರು ಮೇ. 11ರಂದು ಸಂಜೆ ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಿದ್ದಾರೆ. ಪುಸ್ತಕ ಬಿಡುಗಡೆಯ ದಿನ- ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ, ನಾಗಚಂದ್ರಿಕಾ ಭಟ್ ಮತ್ತು ವರ್ಷಾ ಸುರೇಶ ಅವರಿಂದ ಸುಮಧುರ ಭಾವಗೀತೆಗಳ ಗಾಯನ ಆಯೋಜಿಸಲಾಗಿದೆ.
ಪುಸ್ತಕ ಬಿಡುಗಡೆಯ ದಿನದಂದು ಪುಸ್ತಕ ಮಾರಾಟದಿಂದ ಸಿಗುವ ಹಣವನ್ನು ಬಹಳ ಕಷ್ಟದಲ್ಲಿ ಬದುಕುತ್ತಿರುವ 4-5 ಜನರಿಗೆ ಕೊಡಬೇಕು ಎಂಬ ಆಶಯದ ಮಣಿಕಾಂತ್ ಅವರು ಕನ್ನಡಿಗರ ಔದಾರ್ಯದಿಂದ ಮೇ 11 ರಂದು ಹೊಸ ಪುಸ್ತಕ ಭಾವತೀರಯಾನ ಮಾರಾಟವಾಗಿ ಸಿಗುವ ಹಣವನ್ನು ಕಷ್ಟದಲ್ಲಿ ಇರುವ ಸಾಹಿತಿಗಳ ಕುಟುಂಬಕ್ಕೆ/ ಅನಾರೋಗ್ಯದಿಂದ ಬಳಲುವ ಬಡ ಕುಟುಂಬಕ್ಕೆ/ ಪ್ರತಿಭಾವಂತ ವಿದ್ಯಾರ್ಥಿಗೆ ಕೊಡುವುದಾಗಿ ತಿಳಿಸಿದ್ದಾರೆ.
ಕನ್ನಡ ಪ್ರಭ ಪ್ರತ್ರಿಕೆಯ ಜನಪ್ರಿಯ ಅಂಕಣ 'ಭಾವತೀರಯಾನ'ದ ಲೇಖನಗಳ ಮೂಲಕ ನಾಡಿನ ಹಾಗು ವಿದೇಶದ ಕನ್ನಡಿಗರ ಮನಸ್ಸು ಗೆದ್ದ ಮಣಿಕಾಂತ್, ಆಟೊಮೊಬೈಲ್ ಎಂಜಿನಿಯರಿಂಗ್ ನಲ್ಲಿ ಪದವೀಧರರಾಗಿದ್ದರೂ ಒಲಿದದ್ದು ಮಾತ್ರ ಪತ್ರಿಕಾರಂಗಕ್ಕೆ.

ಭಾವ ತೀರ ಯಾನ ಬೆನ್ನುಡಿಯ ಸಾಲುಗಳು: ಸೋಲಿಸಬೇಡ, ಗೆಲಿಸಯ್ಯಾ... ಎಂಬುದು ಇವತ್ತು ಎಲ್ಲರ ಪ್ರಾರ್ಥನೆಯೂ ಆಗಿದೆ. ತಮಾಷೆಯೆಂದರೆ, ಸದಾ ಗೆಲುವನ್ನೇ ಧ್ಯಾನಿಸುವ ಮನುಷ್ಯ, ರಿಸ್ಕ್ಗೆ ಕೈಹಾಕಲು ಹಿಂಜರಿಯುತ್ತಾನೆ, ಹೆದರುತ್ತಾನೆ. ಇವತ್ತಿನ ಸಂದರ್ಭದಲ್ಲಿ, ಗೆಲ್ಲಲು ಹೊರಟ ಜನಕ್ಕೆ ಒಬ್ಬ ಹೀರೋ ಬೇಕು. ಕಣ್ಣೆದುರಿಗೆ ಒಂದು ರೋಲ್ ಮಾಡೆಲ್ ಇರಬೇಕು. ಆಗ ಮಾತ್ರ, ಮನಸ್ಸೆಂಬುದು ಕನಸೆಂಬ ಕುದುರೆಯನೇರಿಬಿಡುತ್ತದೆ.
ಗೆಲುವಿನ ಕಥೆಗಳನ್ನು ಹೆಜ್ಜೆಹೆಜ್ಜೆಗೂ ಕೇಳಲು ಆಸೆಪಡುತ್ತದೆ. ನನ್ನ ಸಂತೋಷವೆಂದರೆ, ಈ ಪುಸ್ತಕದ ಪ್ರತಿ ಪುಟದಲ್ಲೂ ಗೆಲುವಿನ ಸುವಾಸನೆಯಿದೆ. ಪರೀಕ್ಷೆಗೆ ಹೊರಟು ನಿಂತ ಮಗನ ಹಣೆಗೆ ತಿಲಕವಿಟ್ಟು, ಒಳ್ಳೆಯದಾಗುತ್ತೆ, ಹೋಗಿ ಬಾ ಎಂದು ಅಮ್ಮ ಶುಭಹಾರೈಸುತ್ತಾಳಲ್ಲ; ಅಂಥದೊಂದು ಅಕ್ಕರೆಯಿದೆ. ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಇಲ್ಲಿರುವ ಬಹುಪಾಲು ಸಕ್ಸಸ್ ಸ್ಟೋರಿಗಳ ಮೂಲ ಇಂಟರ್ನೆಟ್. ಆದರೆ, ಅಂತರ್ಜಾಲದ ಮಾಹಿತಿಯಿಂದಲೇ ಯಾವುದೇ ಬರಹವೂ ಪೂರ್ಣವಾಗಿಲ್ಲ. ಈ ಪುಸ್ತಕದಲ್ಲಿರುವ ಎಲ್ಲ ರಿಯಲ್ ಹೀರೋಗಳೂ ಮಾತಿಗೆ ಸಿಕ್ಕಿದ್ದಾರೆ. ಗಂಟೆಗಟ್ಟಲೆ ಮಾತಾಡಿದ್ದಾರೆ.
ಸುಖ-ದುಃಖ ಹಂಚಿಕೊಂಡಿದ್ದಾರೆ. ಇಲ್ಲಿರುವ ರಿಯಲ್ ಹೀರೋಗಳ ಹಳೆಯ ಕಥೆಯನ್ನು ಬರೆಯುವಾಗೆಲ್ಲ, ಅವರಿಗೆ ಎದುರಾದ ಕ್ರೌರ್ಯ, ಅವಮಾನ, ಸಂಕಟವನ್ನು ನೆನೆದು ನಡುಗಿಹೋಗಿದ್ದೇನೆ.
ಬೇರೊಬ್ಬರ ಸಂಕಟ ನನ್ನದೇ ಆದಂತಾಗಿ, ಬರೆವ ಕೈ ತಡವರಿಸಿ, ಗಂಟಲುಬ್ಬಿ ಬಂದು, ಕಣ್ಣೀರು ಕೆನ್ನೆಗಿಳಿದ ಮೋದಕ್ಕೆ ಬೆರಗಾಗಿದ್ದೇನೆ. ಕಡೆಗೊಮ್ಮೆ, ಗೆಲುವೆಂಬುದು ಅವರ ಮನೆ ಬಾಗಿಲು ತಟ್ಟಿತು ಎಂದು ಬರೆದ ತಕ್ಷಣ ಸಕ್ಕರೆ ತಿಂದು ಸಂಭ್ರಮಿಸಿದ್ದೇನೆ. ಹೌದು, ಬರೆಯುವ ಸಂದರ್ಭದಲ್ಲಿ, ಕಣ್ಣಮುಂದೆ ಬೇರೇನೂ ಇಲ್ಲ ಎನ್ನುವಷ್ಟರ ಮಟ್ಟಿಗೆ ಇಲ್ಲಿನ ಬರಹಗಳು ನನ್ನನ್ನು ಆವರಿಸಿಕೊಂಡಿವೆ. ಗೆಲುವೆಂಬುದು, ನನ್ನ ಜೊತೆಗಿರುವ ಎಲ್ಲರಿಗೂ ದಕ್ಕಲಿ ಎಂದು ಪ್ರಾಥಿಸುವಂತೆಯೂ ಮಾಡಿವೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು












Click it and Unblock the Notifications