ಮಣ್ಣಲ್ಲಿ ಮಣ್ಣಾದ ಬ್ರಾಡ್ಗೇಜ್ ಮ್ಯಾನ್ ಜಾಫರ್ ಷರೀಫ್
ಬೆಂಗಳೂರು, ನವೆಂಬರ್ 26: ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಅವರ ಅಂತ್ಯಕ್ರಿಯೆ ಮಿಲ್ಲರ್ಸ್ ರಸ್ತೆಯಲ್ಲಿರುವ ಖಬರಿಸ್ತಾನ(ಸ್ಮಶಾನ)ದಲ್ಲಿ ನೆರವೇರಿತು.
ಜಾಫರ್ ಷರೀಫ್ ನಿಧನ ಹಿನ್ನೆಲೆ ನಂದಿದುರ್ಗಾ ರಸ್ತೆಯ ಖುದ್ರುಸ್ ಜುಮ್ಮಾ ಮಸೀದಿಯಲ್ಲಿ ಪಾರ್ಥಿವ ಶರೀರವಿಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ಸಚಿವ ಯುಟಿ ಖಾದರ್, ಎಐಸಿಸಿ ಮುಖಂಡ ಗುಲಾಮ್ ನಬಿ ಆಜಾದ್, ಸಚಿವ ಜಮೀರ್ ಅಹಮದ್, ರಿಜ್ವಾನ್ ಅರ್ಷದ್ ಶಾಸಕ ಎಸ್ಆರ್ ವಿಶ್ವನಾಥ್ ಉಪಸ್ಥಿತರಿದ್ದರು.
ನಮಾಜ್ ವೇಳೆ ನೂಕುನುಗ್ಗಲು ಉಂಟಾಗಿದ್ದ ಕಾರಣ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಡಿಸಿಪಿಯನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು. ಜಾಫರ್ ಷರೀಫ್ ಪಾರ್ಥಿವ ಶರೀರದ ಮುಂದೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಮೊದಲು ಕೆಪಿಸಿಸಿ ಕಚೇರಿಯಲ್ಲಿ ಜಾಫರ್ ಷರೀಫ್ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು ಬಳಿಕ ಮಿಲ್ಲರ್ಸ್ ರಸ್ತೆಯ ಖಬರಿಸ್ತಾನದಲ್ಲಿ ಅಂತ್ಯಕ್ರಿಯೆ ನೆರವೇರಿತು.












Click it and Unblock the Notifications