ಬೆಂಗಳೂರು ಮಹಾನಗರ ಪಾಲಿಕೆಗೇಕೆ ಪರಭಾಷೆ ಕಾಲ್ ಸೆಂಟರ್?
ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಹುಭಾಷೆ ಕಾಲ್ ಸೆಂಟರ್ ಸ್ಥಾಪನೆಯನ್ನು ಐಟಿ ಬಿಟಿ ಕನ್ನಡಿಗರ ಗುಂಪು ವಿರೋಧಿಸಿ ಈ ಪತ್ರವನ್ನು ಬರೆದಿದ್ದಾರೆ.
ಇದು ಹೇಗಿದೆ ಎಂದರೆ ಕರ್ನಾಟಕದಲ್ಲಿ ಕನ್ನಡಿಗರನ್ನ ತುಳಿಯುವ ವ್ಯವಸ್ಥಿತ ಸಂಚಿದು. ಭಾಷಾ ಆಧಾರದ ಮೇಲೆ ರಚಿತವಾಗಿರುವ ರಾಜ್ಯಗಳಲ್ಲಿ ಈ ರೀತಿ ಪರಭಾಷೆ ಓಲೈಕೆ ನಾಡಿನ ಸಾರ್ವಭೌಮತ್ವಕ್ಕೆ ಅಪಾಯ. ಇದರಿಂದ ಮುಂದೆ ವಲಸೆ ಹೆಚ್ಚಾಗಿ ಮೂಲಭೂತ ಪೂರೈಕೆಯನ್ನ ಪೂರೈಸಲಾಗದೆ ಪ್ರಾದೇಶಿಕ ಅಸಮತೋಲನ ಜೊತೆಗೆ ಅಸಮಾನತೆಯಂಥ ಅನೇಕ ಸಮಸ್ಯೆ ಎದಿರಾಗುವುದು ಖಂಡಿತ. ಜೊತೆಗೆ ಪ್ರಾದೇಶಿಕ ಸಂವಿಧಾನದ ವಿರೋಧಿ ನಡೆ ಕೂಡ ಇದು.
ಭಾರತದಾದ್ಯಂತ ಇರುವ ಮಹಾನಗರ ಪಾಲಿಕೆಯಲ್ಲಿ ಎಲ್ಲೂ ಇರದ ಬಹುಭಾಷಾ ಕಾಲಸೆಂಟರ್ ಇಲ್ಲೆಕೆ? ಪರಭಾಷೆ ಓಲೈಕೆ ಯಾವ ಕಾರಣಕ್ಕಾಗಿ? ಈಗ ಮೊದಲೇ ಅನಿಯಂತ್ರಿತ ವಲಸೆಯಿಂದಾಗಿ ಬೆಂಗಳೂರು ಅನೇಕ ಮೂಲಭೂತ ಸಮಸ್ಯೆಗಳನ್ನ ಎದಿರುಸುತ್ತಿದೆ.

ಅದರ ಜೊತೆಗೆ ನೀವುಗಳು ಅದಕ್ಕೆ ಪೂರಕವಾಗಿ ವಲಸಿಗರಿಗಾಗಿ ಬಹುಭಾಷೆ ಕಾಲಸೆಂಟರ್ ತೆರದರೆ ವಲಸಿಗರಿಗೆ ರತ್ನಗಂಬಳಿ ಹಾಸಿ ಕರೆದಂತಾಗುತ್ತದೆ. ಇದರಿಂದಾಗಿ ಮುಂದಾಗುವ ಅನೇಕ ಸಮಸ್ಯೆಗಳಿಗೆ ಇದು ಮುನ್ನುಡಿಯಾಗುತ್ತದೆ.
ಹೀಗಾಗಿ ಒಟ್ಟಾರೆ ನಾವೆಲ್ಲ ಕನ್ನಡಿಗರು ಒಕ್ಕೂರಲಿಂದ ಹೇಳುವುದೆನೆಂದರೆ ಬಹುಭಾಷಾ ಕಾಲಸೆಂಟರ್ ಬೇಡ, ಇದನ್ನೂ ಮೀರಿ ನೀವು ತಂದುದ್ದಾದಲ್ಲಿ ಕರುನಾಡಿನ ಜನತೆಯ ಉತ್ತರವನ್ನು ನೀವು ಮುಂದೆ ಎದಿರಿಸಬೇಕಾಗುತ್ತದೆ.
ಬಿಬಿಎಂಪಿಗೇಕೆ ಪರಭಾಷೆ ಕಾಲ್ ಸೆಂಟರ್?
ಬಹುಭಾಷಾ ಕಾಲ್ ಸೆಂಟರ್ ಪರಿಣಾಮಗಳು :
1. ವಲಸೆಗೆ ರತ್ನಗಂಬಳಿ ಹಾಸಿ ಕರೆದಂಗಾಗುತ್ತದೆ.
2. ಭಾಷಾವಾರು ರಾಜ್ಯಗಳಲ್ಲಿ ಪ್ರಾದೇಶಿಕ ಅಸಮಾನತೆಗೆ ಹಾದಿ ಮಾಡಿ ಕೊಟ್ಟಂತಾಗುತ್ತದೆ.
3. ನೀರು, ಮಾಲಿನ್ಯ, ಸ್ಥಳ ಇತ್ಯಾದಿ ಮೂಲಬೂತ ಸಮಸ್ಯೆಗಳು ಹೆಚ್ಚಾಗುತ್ತವೆ.
4. IISC ವಿಜ್ಞಾನಿಗಳು ಮೊನ್ನೆಯ ವರದಿ ಪ್ರಕಾರ ಬೆಂಗಳೂರಿಗೆ ಇನ್ನಷ್ಟು ವಲಸೆ ಆದರೆ ಅದು ಅವೈಜ್ಙಾನಿಕ.
5. ವಲಸೆಯಿಂದ ಬದ್ರತೆಗೆ ದಕ್ಕೆಯಾಗಿ ಸಮಾಜದಲ್ಲಿ ಅಸುರಕ್ಷೆ ತಾಂಡವವಾಡುತ್ತೆ.
6. ಡ್ರಗ್ಸ್, ಗಾಂಜಾದಂತ ಮಾದಕ ವಸ್ತುಗಳು ವಲಸಿಗರ ಜೊತೆ ಒಳ ಬರುತ್ತವೆ.
7. ಬೆಂಗಳೂರಿನ ವಲಸೆ ಹೆಚ್ಚಾದಂತೆ ಕರ್ನಾಟಕದ ಜನಸಂಖ್ಯೆಯು ಹೆಚ್ಚಾಗಿ ಇಡಿ ರಾಜ್ಯಕ್ಕೆ ಪೆಟ್ಟು ಬಿಳುತ್ತೆ.
ಒಟ್ಟಾರೆ ಕರ್ನಾಟಕ ಹಿತ ದೃಷ್ಟಿ , ಕನ್ನಡಿಗರ ಸಾರ್ವಭಾಮತ್ವ ಮತ್ತು ಸಂವಿಧಾನದ ವಿರೋದಿ ನಡೇಯಾಗುತ್ತದೆ ಇದು.
ಹಿಗಾಗಿ ಮಾನ್ಯ ಪಾಲಿಕೆ ಮಾಹಾಪೌರ ಮಂಜುನಾಥ್ ರೆಡ್ಡಿಯವರು ಈ ಆದೇಶವನ್ನ ಶೀಘ್ರವಾಗಿ ಹಿಂಪಡೆದು ಬೆಂಗಳೂರನ್ನ ರಕ್ಷಿಸಬೇಕಾಗಿ ವಿನಂತಿ.
IT & BT ಕನ್ನಡ ಬಳಗ
-
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei












Click it and Unblock the Notifications