Get Updates
Get notified of breaking news, exclusive insights, and must-see stories!

ಬೆಂಗಳೂರು ಉತ್ತರ ಕ್ಷೇತ್ರ ಫಲಿತಾಂಶದ ಬಗ್ಗೆ ಸಿಎಂಗೆ ಸಿಕ್ಕಿದೆ ನಿಖರ ಮಾಹಿತಿ

Recommended Video

      ಬೆಂಗಳೂರು ಉತ್ತರ ಕ್ಷೇತ್ರದ ಫಲಿತಾಂಶದ ಬಗ್ಗೆ ಸಿಎಂಗೆ ಸಿಕ್ಕಿದೆ ಗುಪ್ತಚರ ಇಲಾಖೆ ವರದಿ | Oneindia Kannada

      ಬೆಂಗಳೂರು, ಮೇ 11: ಬೆಂಗಳೂರು ಉತ್ತರ ಕ್ಷೇತ್ರ ಚುನಾವಣೆ ಫಲಿತಾಂಶದ ಬಗ್ಗೆ ಸಿಎಂ ಅವರಿಗೆ ನಿಖರ ಮಾಹಿತಿ ಸಿಕ್ಕಿದೆಯಂತೆ. ಹೀಗೆಂದು ಅವರೇ ಸಚಿವ ಸಂಪುಟ ಸಭೆಯಲ್ಲಿ ಹೇಳಿದ್ದಾರೆ.

      ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸದಾನಂದ ಗೌಡ ವಿರುದ್ಧ ಕೃಷ್ಣಬೈರೇಗೌಡ ಅವರ ಗೆಲುವು ಬಹುತೇಕ ಪಕ್ಕಾ ಆಗಿದೆಯೆಂಬ ಮಾಹಿತಿಯನ್ನು ಕುಮಾರಸ್ವಾಮಿ ಅವರು ಸಂಪುಟ ಸಭೆಯಲ್ಲಿ ಹೇಳಿದ್ದಾರೆ, ಇದಕ್ಕೆ ಕೃಷ್ಣ ಬೈರೇಗೌಡ ಅವರು ಸಹ ಧನ್ಯವಾದ ಅರ್ಪಿಸಿದ್ದಾರೆ.

      ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

      ಆದ್ದದ್ದಿಷ್ಟು, ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ಮೊದಲಿಗೆ ಕೃಷ್ಣಬೈರೇಗೌಡ ಅವರು ಪ್ರಸ್ತಾವಿಕವಾಗಿ ಮಾತನಾಡುತ್ತಿದ್ದರು, ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಕುಮಾರಸ್ವಾಮಿ, 'ಕೃಷ್ಣಬೈರೇಗೌಡ ಅವರಿಗೆ ಶುಭಾಷಯಗಳು' ಎಂದು ಹೇಳಿದ್ದಾರೆ. ಶುಭಾಶಯಕ್ಕೆ ಅವಾಕ್ಕಾದ ಸಚಿವರು, ಶುಭಾಶಯ ಕೋರಿದ್ದಕ್ಕೆ ಕಾರಣವೇನೆಂದು ಗೊಂದಲಕ್ಕೆ ಒಳಗಾಗಿದ್ದಾರೆ.

      ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, 'ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕೃಷ್ಣಬೈರೇಗೌಡ ಅವರ ಗೆಲುವು ಖಾಯಂ, ಈ ಬಗ್ಗೆ ನನಗೆ ನಿಖರ ಮಾಹಿತಿ ದೊರಕಿದೆ' ಎಂದು ಹೇಳಿದ್ದಾರೆ. ಆ ನಂತರ ಎಲ್ಲ ಸಚಿವರೂ ಕೃಷ್ಣಬೈರೇಗೌಡ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

      ಸದಾನಂದಗೌಡ vs ಕೃಷ್ಣಬೈರೇಗೌಡ

      ಸದಾನಂದಗೌಡ vs ಕೃಷ್ಣಬೈರೇಗೌಡ

      ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಸದಾನಂದಗೌಡ ಮತ್ತು ಜೆಡಿಎಸ್‌ ಬೆಂಬಲಿತ ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣಬೈರೇಗೌಡ ಅವರ ನಡುವೆ ನಿಕಟ ಸ್ಪರ್ಧೆ ಇದೆ. ಸಿಎಂ ಅವರು ಸಚಿವ ಸಂಪುಟ ಸಭೆಯಲ್ಲಿ ನುಡಿದ ಭವಿಷ್ಯಕ್ಕೆ ಗುಪ್ತಚರ ಇಲಾಖೆಯ ವರದಿಯೇ ಕಾರಣ ಎನ್ನಲಾಗುತ್ತಿದೆ.

      ಸದಾನಂದಗೌಡ ವಿರುದ್ಧ ಆಡಳಿತವಿರೋಧಿ ಅಲೆ

      ಸದಾನಂದಗೌಡ ವಿರುದ್ಧ ಆಡಳಿತವಿರೋಧಿ ಅಲೆ

      ಸದಾನಂದಗೌಡ ಅವರು ಎರಡು ಬಾರಿ ಇದೇ ಕ್ಷೇತ್ರದಿಂದ ಗೆಲುವು ಸಾಧಿಸಿ ಈ ಬಾರಿ ಕೇಂದ್ರ ಮಂತ್ರಿ ಸಹ ಆಗಿದ್ದಾರೆ, ಈ ನಡುವೆ ಕ್ಷೇತ್ರದಲ್ಲಿ ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಕೆಲಸ ಮಾಡಿದೆ ಎನ್ನಲಾಗಿದೆ. ಸದಾನಂದಗೌಡ ಅವರ ವಿರುದ್ಧದ ಅಲೆಯೇ ಕೃಷ್ಣಬೈರೇಗೌಡ ಅವರಿಗೆ ವರವಾಗಿ ಪರಿಣಮಿಸಿ ಅವರ ಹಾದಿ ಸುಗಮಗೊಳಿಸಿದೆ ಎಂದು ಮಾತುಗಳು ಕೇಳಿಬರುತ್ತಿವೆ.

      ಬೆಂ.ಉತ್ತರ ಕ್ಷೇತ್ರದಿಂದ ದೇವೇಗೌಡ ಸ್ಪರ್ಧಿಸಬೇಕಿತ್ತು

      ಬೆಂ.ಉತ್ತರ ಕ್ಷೇತ್ರದಿಂದ ದೇವೇಗೌಡ ಸ್ಪರ್ಧಿಸಬೇಕಿತ್ತು

      ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ಉಮೇದು ಹೊಂದಿದ್ದರು, ಆದರೆ ಆ ನಂತರ ನಡೆದ ರಾಜಕೀಯ ಲೆಕ್ಕಾಚಾರದಿಂದಾಗಿ ಹೆಚ್ಚು ಸುರಕ್ಷಿತವಾದ ತುಮಕೂರನ್ನು ಆಯ್ದುಕೊಂಡರು. ಅಲ್ಲಿ ಅವರು ಬಿಜೆಪಿಯ ಜಿ.ಎಸ್.ಬಸವರಾಜು ಅವರ ವಿರುದ್ಧ ಸ್ಪರ್ಧಿಸಿದ್ದಾರೆ.

      ಎಲ್ಲ ಕ್ಷೇತ್ರಗಳ ಗುಪ್ತಚರ ವರದಿ?

      ಎಲ್ಲ ಕ್ಷೇತ್ರಗಳ ಗುಪ್ತಚರ ವರದಿ?

      ಕುಮಾರಸ್ವಾಮಿ ಅವರಿಗೆ ಬಹುತೇಕ ಎಲ್ಲ ಕ್ಷೇತ್ರ ಫಲಿತಾಂಶದ ಬಗ್ಗೆ ಗುಪ್ತಚರ ಇಲಾಖೆ ವರದಿಗಳು ಕೈಸೇರಿವೆ ಎಂಬ ಸುದ್ದಿ ಇದೆ. ಮಂಡ್ಯದಲ್ಲಿ ಭಾರಿ ನಿಕಟ ಪೈಪೋಟಿ ಏರ್ಪಟ್ಟಿದ್ದು, ಸುಮಲತಾ ಅವರ ಕೈ ಮೇಲಾಗುವ ಬಗ್ಗೆಯೂ ಗುಪ್ತಚರ ಇಲಾಖೆ ವರದಿ ಬಂದಿದೆ ಎನ್ನಲಾಗಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+