ಇನ್ಫೋಸಿಸ್ ನೂತನ ಸಿಇಒ ಆಗಿ ವಿಶಾಲ್ ಸಿಕ್ಕಾ ನೇಮಕ
ಬೆಂಗಳೂರು, ಜೂನ್ 12: ನಿರೀಕ್ಷೆಯಂತೆ ಇನ್ಫೋಸಿಸ್ ಕಂಪನಿಗೆ ನೂತನ ಸಿಇಒ ಆಗಿ ಗುಜರಾತಿನ 47 ವರ್ಷದ ವಿಶಾಲ್ ಸಿಕ್ಕಾ ಅವರನ್ನು ನೇಮಿಸಲಾಗಿದೆ.
ಇದೇ ಶನಿವಾರ (ಜೂನ್ 14) ಇನ್ಫೋಸಿಸ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕಂಪನಿಗೆ ಸೇರ್ಪಡೆಯಾಗಲಿದ್ದಾರೆ. ಆಗಸ್ಟ್ 1 ರಂದು ಹಾಲಿ ಸಿಇಒ ಮತ್ತು ಎಂಡಿಯಾಗಿರುವ ಎಸ್ ಡಿ ಶಿಬುಲಾಲ್ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.

ಅಂದಹಾಗೆ ವಿಶಾಲ್ ಸಿಕ್ಕಾ ಅವರು ಇನ್ಫೋಸಿಸ್ ಕಂಪನಿಯ ಮುಖ್ಯಸ್ಥರಾದ ಕೆವಿ ಕಾಮತ್ ಮತ್ತು ನಾರಾಯಣ ಮೂರ್ತಿ ಅವರ ನೆಚ್ಚಿನ ಆಯ್ಕೆಯೂ ಆಗಿದ್ದಾರೆ.
ಇನ್ಫೋಸಿಸ್ ಸಿಇಒ ಸ್ಥಾನಕ್ಕೆ ನೇಮಕಾತಿ ಮಾಡುವ ಆಯ್ಕೆ ಮಂಡಳಿಯಲ್ಲಿ ಕೆವಿ ಕಾಮತ್ ಅವರು ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಬಯೋಕಾನ್ ಕಂಪನಿಯ ವ್ಯವಸ್ಥಾಪಕ ಕಿರಣ್ ಮಜೂಂದಾರ್ ಷಾ ಮತ್ತು ಅಶೋಕ್ ಲೇಲ್ಯಾಂಡಿನ ಮಾಜಿ ಎಂಡಿ ಆರ್ ಶೇಷಸಾಯಿ ಅವರು ಆಯ್ಕೆ ಮಂಡಳಿಯಲ್ಲಿರುವ ಇತರೆ ಸದಸ್ಯರು.
ಅಂದಹಾಗೆ Infosys ಕಂಪನಿಯ ಸಂಭವನೀಯ CEO ವಿಶಾಲ್ ಸಿಕ್ಕಾ ಅವರು ಗುಜರಾತಿನ ವಡೋದರಾದವರು. ಇವರು ಕಂಪನಿಯ ಸಂಸ್ಥಾಪಕೇತರರ ಪೈಕಿ ಮೊದಲ ಸಿಇಒ ಆಗಲಿದ್ದಾರೆ. ವಿಶಾಲ್ ಸಿಕ್ಕಾ ಅವರು SAP (System Application & Products) ಸಂಸ್ಥೆಯ ಮೊದಲ ಪ್ರಧಾನ ತಂತ್ರಜ್ಞಾನಾಧಿಕಾರಿಯಾಗಿ ಜಾಗತಿಕ ನೈಪುಣ್ಯತೆ ಹೊಂದಿದ್ದಾರೆ.
ಇದರೊಂದಿಗೆ ಸದ್ಯಕ್ಕೆ ಕಳೆಗುಂದಿರುವ ಇನ್ಫೋಸಿಸ್ ಕಂಪನಿಗೆ ಜಾಗತಿಕ ಮಟ್ಟದ ವ್ಯಕ್ತಿಯೊಬ್ಬರು ಸಿಇಒ ಆಗುತ್ತಿರುವುದು ಕಂಪನಿಯ ಹಿತದೃಷ್ಟಿಯಿಂದ ಒಳಿತಾಗಲಿದೆ ಎಂದು ಉದ್ಯಮದ ಮಂದಿ ಅಭಿಪ್ರಾಯಪಡುತ್ತಾರೆ. ಒಟ್ಟಿನಲ್ಲಿ, ವಿಶಾಲ್ ಸಿಕ್ಕಾ ಅವರು ಎಸ್ ಡಿ ಶಿಬುಲಾಲ್ ಅವರ ಉತ್ತರಾಧಿಕಾರಿಯಾಗುತ್ತಾರಾ? ಆದರೂ ಕಂಪನಿಯನ್ನು ಮತ್ತೆ ಉಚ್ಚ್ರಾಯ ಸ್ಥಿತಿಗೆ ಕೊಂಡೊಯ್ಯುತ್ತಾರಾ? ಕಾದುನೋಡಬೇಕಿದೆ.
ಇತ್ತೀಚಿನ ದಿನಗಳಲ್ಲಿ ಇನ್ಫೋಸಿಸ್ ಕಂಪನಿಯ ವಿಷಯದಲ್ಲಿ ಒಂದೆಡೆ ಆಯಕಟ್ಟಿನ ಜಾಗಗಳಲ್ಲಿದ್ದ ಸುಮಾರು 10ಕ್ಕೂ ಹೆಚ್ಚು ಉನ್ನತಾಧಿಕಾರಿಗಳು ಗುಡ್ ಬೈ ಹೇಳಿರುವುದು ಮತ್ತು ಕಂಪನಿಯ ಪೇಲವ ತ್ರೈಮಾಸಿಕ ಫಲಿತಾಂಶಗಳು ಕಂಪನಿಯ ವರ್ಚಸ್ಸಿಗೆ ಧಕ್ಕೆ ತಂದಿವೆ ಎಂಬುದು ಉದ್ಯಮ ವಿಶ್ಲೇಷಕರ ಅನಿಸಿಕೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications