ನಂಬಿ, ಬೆಂಗಳೂರಲ್ಲಿ ತಾಸಿಗೆ 17 ಕಿ.ಮೀ ಮಾತ್ರ ಕ್ರಮಿಸಬಹುದು!
ಬೆಂಗಳೂರು, ಜನವರಿ 10: ನಗರದಲ್ಲಿ ಸಂಚಾರ ದಟ್ಟಣೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂಬುದನ್ನು ಓಲಾ ಸಂಸ್ಥೆ ನಡೆಸಿದ ಅಧ್ಯಯನದಿಂದ ಕಂಡುಬಂದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ನಗರದಲ್ಲಿ ಕ್ಯಾಬ್ ಚಲಿಸುತ್ತಿರುವ ವೇಗದಲ್ಲಿ ಇಳಿಕೆ ಕಂಡುಬಂದಿದೆ.
ನಗರದಲ್ಲಿ 2016 ರಲ್ಲಿ ಕ್ಯಾಬ್ ಗಳು ಪ್ರತಿ ಗಂಟೆಗೆ ಕ್ರಮಿಸುತ್ತಿದ್ದ ಸರಾಸರಿ ದೂರ 20.4 ಕಿ.ಮೀ ಅದೇ ಕ್ಯಾಬ್ ಗಳು 2017 ರಲ್ಲಿ ಕ್ರಮಿಸಿದ ದೂರ ಗಂಟೆಗೆ ಸರಾಸರಿ 17.2 ಕಿ.ಮೀ, ಇನ್ನೂ 6 ನಗರಗಳಲ್ಲಿ ನಡೆಸಿದ ಅಧ್ಯಯನದಲ್ಲೂ ಗಂಟೆಗೆ ಕ್ರಮಿಸುವ ದೂರದಲ್ಲಿ ಇಳಿಕೆಯಾಗಿದೆ.
ಓಲಾ ಅಪ್ಲಿಕೇಷನ್ ನಲ್ಲಿ ದೊರೆತ ಮಾಹಿತಿಯನ್ನು ಇಟ್ಟುಕೊಂಡು ಈ ಅಧ್ಯಯನ ನಡೆಸಲಾಗಿದೆ. ಬೆಂಗಳೂರು, ನವದೆಹಲಿ, ಮುಂಬೈ, ಕೊಲ್ಕತ್ತ , ಹೈದರಾಬಾದ್, ಚೆನ್ನೈ, ಪುಣೆಗಳಲ್ಲಿ ಅಧದ್ಯಯನ ನಡೆಸಲಾಗಿತ್ತು.

ಬೆಂಗಳೂರಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಕ್ಯಾಬ್ ನ ವೇಗ 3.2 ಕಿ.ಮೀನಷ್ಟು ಇಳಿದಿದೆ. ಸಾರಿಗೆ ಇಲಾಖೆ ಮಾಹಿತಿ ಪ್ರಕಾರ, 2015 ಅಕ್ಟೋಬರ್ ನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ 22,55,792 ವಾಹನಗಳು ಸಂಚರಿಸುತ್ತವೆ. 2017 ರ ಜುಲೈನಲ್ಲಿ ಈ ಪ್ರಮಾಣ ಹೆಚ್ಚಿದ್ದು, 70,28,067 ಸಂಚಾರ ಕಂಡುಬಂದಿದೆ.
ವಾಹನಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿರುವುದರಿಂದ ಬಿಎಂಟಿಸಿ ಕೂಡ ಬಸ್ಗಳ ಸಂಚಾರ ಗುರಿಯನ್ನು ಸಂಚಾರ ದಟ್ಟಣೆಗೆ ತಕ್ಕಂತೆ ಬದಲಿಸುವ ಪರಿಸ್ಥಿತಿ ಬಂದಿದೆ. ಬಿಎಂಟಿಸಿಯ ನಿಗದಿತ ಬಸ್ ಗಂಟೆಗೆ 17.5 ಕಿ.ಮೀ ದೂರ ಚಲಿಸಬೇಕು ಎಂಬ ನಿಯಮವಿದೆ. 2013 ಕ್ಕಿಂತ ಮೊದಲು ಗಂಟೆಗೆ 19.5 ಕಿ.ಮೀ ಚಲಿಸಬೇಕು ಎಂಬ ನಿಯಮವಿತ್ತು. ಸಂಚಾರ ದಟ್ಟಣೆ ಅಧಿಕವಾಗಿದ್ದರಿಂದ ಈ ನಿಯಮದಲ್ಲಿ ಬದಲಾವಣೆ ತಂದು ಚಾಲಕರಿಗೆ ಅನುವು ಮಾಡಿಕೊಡಲಾಯಿತು.
ಕನ್ಸೋರ್ಟಿಯಂ ಆಫ್ ಟ್ರಾಫಿಕ್ ಎಂಜಿನಿಯರ್ಸ್ ಅಂಡ್ ಸೇಫ್ಟಿ ಟ್ರೇನರ್ಸ್ 2014 ರಲ್ಲಿ ನಡೆಸಿದ್ದ ಅಧ್ಯಯನದಲ್ಲಿ ಸಂಚಾರ ದಟ್ಟಣೆ ಹೆಚ್ಚಲಿದೆ ಎಂಬ ಎಚ್ಚರಿಕೆ ನೀಡಲಾಗಿತ್ತು. 2020ರ ವೇಳೆಗೆ ವಾಹನಗಳು ಗಂಟೆಗೆ 5.ಕಿ.ಮೀ ವೇಗದಲ್ಲಿ ಚಲಿಸಲಿದೆ ಎಂಬ ಆತಂಕಕಾರಿ ಅಧ್ಯಯನ ಹೊರಬಿದ್ದಿತ್ತು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ











Click it and Unblock the Notifications