'ನಮ್ಮ ನಗರ, ನಮ್ಮದೇ ಜವಾಬ್ದಾರಿ' ಸ್ವಚ್ಛತೆಗೆ ಕರೆಕೊಟ್ಟ ಡಿಸಿಎಂ
ಬೆಂಗಳೂರು, ಜನವರಿ.30: ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಸಿಲಿಕಾನ್ ಸಿಟಿ ಜನರೆಲ್ಲ ಕೈ ಜೋಡಿಸಬೇಕೆಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಕರೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಮ್ಮ ನಗರದ ಸ್ವಚ್ಛತೆ ನಮ್ಮದೇ ಜವಾಬ್ದಾರಿ ಎಂದಿದ್ದಾರೆ.
'ಸ್ವಚ್ಛ್ ಸರ್ವೇಕ್ಷಣಾ 2020' ರಲ್ಲಿ ಬೆಂಗಳೂರಿನ ಪ್ರಜೆಗಳೆಲ್ಲ ಭಾಗವಹಿಸಬೇಕು. ಆ ಮೂಲಕ ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಟ್ವೀಟ್ ಮಾಡಿದ್ದಾರೆ.
ಕಸ ಸಮಸ್ಯೆ; ಬಿಬಿಎಂಪಿ ವಿಸರ್ಜಿಸುವುದಾಗಿ ಎಚ್ಚರಿಸಿದ ಹೈಕೋರ್ಟ್
ವಿಶ್ವದ ಅತ್ಯಂತ ದೊಡ್ಡದಾದ ಸ್ವಚ್ಛತಾ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲ ಜನರು ತೊಡಗಿಸಿಕೊಳ್ಳಬೇಕು. ಅತಿದೊಡ್ಡ ಸಮೀಕ್ಷೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯವು ಆಗಬೇಕಿದೆ ಎಂದು ಟ್ವಿಟ್ಟರ್ ನ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಸಮೀಕ್ಷೆಯ ಲಿಂಕ್ ಅಪ್ ಲೋಡ್:
ಇನ್ನು, ಸ್ವಚ್ಛ್ ಸರ್ವೇಕ್ಷಣಾ ಸಮೀಕ್ಷೆ 2020ಕ್ಕೆ ಸಂಬಂಧಿಸಿದಂತೆ ಅಧಿಕೃತ ವೆಬ್ ಸೈಟ್ ನ ಲಿಂಕ್ ನ್ನು ಕೂಡಾ ಡಿಸಿಎಂ ಅಶ್ವಥ್ ನಾರಾಯಣ್ ಶೇರ್ ಮಾಡಿದ್ದಾರೆ. ತಮ್ಮ ಟ್ವೀಟ್ ನಲ್ಲೇ ಈ ಬಗ್ಗೆ ಬರೆದುಕೊಂಡಿರುವ ಅವರು, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.