ಲಜ್ಜೆಗೆಟ್ಟ ಅಪ್ಪನ ಕಾಮದಾಹಕ್ಕೆ ಬಲಿಯಾದ ಮಗಳು
ಬೆಂಗಳೂರು, ನ. 20: ಬಾಲಕಿಯೋರ್ವಳು ತನ್ನ ತಂದೆಯಿಂದಲೇ ವರ್ಷಕ್ಕಿಂತ ಹೆಚ್ಚು ಕಾಲ ಲೈಂಗಿಕ ಕಿರುಕುಳ ಹಾಗೂ ದೈಹಿಕ ಹಿಂಸೆ ಅನುಭವಿಸಿದ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ತಂದೆ ತನ್ನ ಸಹೋದರನ ಪತ್ನಿ ಹಾಗೂ ಮನೆಗೆಲಸದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದನ್ನು ನೋಡಿದ್ದೇ ಮಗಳು ತಸ್ಲಿಂ (16, ಹೆಸರು ಬದಲಾಯಿಸಲಾಗಿದೆ) ಗೆ ಮುಳುವಾಯಿತು. ಇದಕ್ಕಾಗಿ ತಸ್ಲೀಂ ವರ್ಷಕ್ಕಿಂತ ಹೆಚ್ಚು ಕಾಲ ತಂದೆಯಿಂದಲೇ ಲೈಂಗಿಕವಾಗಿ ಹಾಗೂ ದೈಹಿಕವಾಗಿ ದೌರ್ಜನ್ಯ ಅನುಭವಿಸಿದಳು. ಅಸಹ್ಯಕರ ಬೈಯ್ಗುಳ ಸಹಿಸಿಕೊಂಡಿದ್ದಲ್ಲದೆ, ಆಸಿಡ್ ದಾಳಿಗೊಳಗಾಗುವ ಭೀತಿಯಲ್ಲಿ ಬದುಕಿದಳು. [ಅತ್ಯಾಚಾರ ಆರೋಪಿ ಮುಸ್ತಫಾ ಬಂಧನ]
ಬೆಂಗಳೂರಿನ ವಸಂತನಗರದ ನಿವಾಸಿ ಅಕ್ರಂ, ಆತನ ಸಹೋದರನ ಪತ್ನಿ ಶಫೀನಾ, ಮನೆಗೆಲಸದ ಮಹಿಳೆ ಅಲ್ಮಾ ಹಾಗೂ ಆಕೆಯ ಸಹೋದರ ಭಾಷಾ ಪ್ರಕರಣದ ಆರೋಪಿಗಳು (ಎಲ್ಲರ ಹೆಸರು ಬದಲಾಯಿಸಲಾಗಿದೆ).

ಪ್ರಕರಣದ ವಿವರ: ಒಂದು ವರ್ಷದ ಹಿಂದೆ ತಸ್ಲೀಂ ಅಚಾನಕ್ಕಾಗಿ ಮನೆಗೆ ಬಂದಿದ್ದಳು. ಆಗ ತನ್ನ ತಂದೆ ಅಕ್ರಂ ಆತನ ಸಹೋದರನ ಪತ್ನಿ ಶಫೀನಾಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ನೋಡುತ್ತಾಳೆ. ತಕ್ಷಣ ತಸ್ಲಿಂ ಅಲ್ಲಿಂದ ಓಡಿಹೋಗಲು ಯತ್ನಿಸಿದರೂ ತಂದೆ ಬಂದು ಹಿಡಿದುಕೊಳ್ಳುತ್ತಾನೆ. ಇಲ್ಲಿಂದ ಆಕೆಗೆ ನರಕಯಾತನೆ ಆರಂಭವಾಗುತ್ತದೆ.
ಈ ವಿಷಯವನ್ನು ತಸ್ಲಿಂ ತನ್ನ ತಾಯಿಗೆ ತಿಳಿಸಿದರೆ ಆಕೆ ಹಾಗೂ ತಾಯಿ ಇಬ್ಬರೂ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆಂದು ತಂದೆ ಅಕ್ರಂ ಎಚ್ಚರಿಕೆ ನೀಡುತ್ತಾನೆ. ಆಗ ಭಯದಿಂದ ತಸ್ಲಿಂ ಸುಮ್ಮನಾಗುತ್ತಾಳೆ. ಆಕೆಯ ಮೌನ ನೋಡಿದ ತಂದೆ ದೌರ್ಜನ್ಯವನ್ನು ನಿರಾತಂಕವಾಗಿ ಮುಂದುವರಿಸುತ್ತಾನೆ. [ಅಪಹರಣ, ಸಾಮೂಹಿಕ ಅತ್ಯಾಚಾರ]
ಅಕ್ರಂ ತಾನು ಶಫೀನಾಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡಬೇಕೆಂದು ಮಗಳ ಮೇಲೆ ಅನೇಕ ಬಾರಿ ಒತ್ತಡ ಹೇರಿದ್ದಾನೆ. ಈ ಸಂದರ್ಭದಲ್ಲಿ ಮಗಳಿಗೂ ಲೈಂಗಿಕ ಕಿರುಕುಳ ನೀಡಿದ್ದಾನೆ. ತಸ್ಲಿಂ ಸ್ನಾನ ಮಾಡುವಾಗ ಬಾಗಿಲು ತೆರೆದಿರಬೇಕೆಂದು ಸೂಚಿಸಿದ್ದಾನೆ. ಬಟ್ಟೆ ಬದಲಾಯಿಸುವಾಗ ಕೋಣೆಯೊಳಕ್ಕೆ ಬಂದಿದ್ದಾನೆ.
ಈ ರೀತಿ ಸುಮಾರು ಒಂದು ವರ್ಷ ಮುಂದುವರಿದಿದೆ. ವಿಷಯ ಹೊರಗೆ ಬಾಯಿಬಿಟ್ಟರೆ ಮುಖಕ್ಕೆ ಆಸಿಡ್ ಎರಚುವುದಾಗಿಯೂ ಅಕ್ರಂ ಬೆದರಿಸಿದ್ದ. [ಬೆಂಗಳೂರಿನಲ್ಲಿ ಸಾಮೂಹಿಕ ಅತ್ಯಾಚಾರ]
ಕೆಲಸದವಳೊಂದಿಗೂ ಸಂಬಂಧ: ಕೆಲವೇ ದಿನಗಳಲ್ಲಿ ತಸ್ಲಿಂಗೆ ತನ್ನ ತಂದೆಗೆ ಮನೆಗೆಲಸದ ಮಹಿಳೆ ಅಲ್ಮಾ ಜೊತೆಗೂ ಸಂಬಂಧ ಇದೆ ಎಂಬುದು ತಿಳಿಯಿತು. ಇದೇ ಸಂದರ್ಭ ಉಪಯೋಗಿಸಿಕೊಂಡ ಅಲ್ಮಾ ಸಹೋದರ ಭಾಷಾ ಕಣ್ಣು ತಸ್ಲಿಂ ಮೇಲೆ ಬೀಳುತ್ತದೆ. ಕ್ರುದ್ಧಗೊಂಡ ತಸ್ಲಿಂ ತಕ್ಷಣ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾಳೆ. ಆಗ ಸಂಪೂರ್ಣ ಪ್ರಕರಣ ಬಯಲಿಗೆ ಬಂದಿದೆ.
ಈ ಕುರಿತು ವಿವರಣೆ ನೀಡಿರುವ ಡಿಸಿಪಿ (ಕೇಂದ್ರೀಯ) ಸಂದೀಪ್ ಪಾಟೀಲ, ಗಂಡನ ಅನೈತಿಕ ಸಂಬಂಧಗಳನ್ನು ಸಹಿಸಲಾಗದೆ ಸಂತ್ರಸ್ತೆ ತಸ್ಲಿಂಳ ತಾಯಿ ಪತಿಯನ್ನು ಬಿಟ್ಟು ಹೋಗಿದ್ದಳು ಎಂದು ತಿಳಿಸಿದ್ದಾರೆ. [ಶಾಲೆಯಲ್ಲಿ ಮತ್ತೊಂದು ಅತ್ಯಾಚಾರ]
ಪೊಲೀಸರು ಬಾಲಕಿಯ ತಂದೆ ಅಕ್ರಂ, ಚಿಕ್ಕಮ್ಮ ಶಫೀನಾ, ಮನೆಗೆಲಸದ ಮಹಿಳೆ ಅಲ್ಮಾ ಹಾಗೂ ಆಕೆಯ ಸಹೋದರ ಭಾಷಾನನ್ನು ಬಂಧಿಸಿದ್ದು ವಿಚಾರಣೆ ಮುಂದುವರಿಸಿದ್ದಾರೆ.
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ












Click it and Unblock the Notifications