ಶುರುವಾಗುತ್ತಿದೆ ಬೆಂಗಳೂರು ಕೆರೆ ಉಳಿಸುವ ಅಭಿಯಾನ
ಸ್ಟೀಲ್ ಬ್ರಿಡ್ಜ್ ಬೇಡ (#SteelFlyoverBeda) ಅಭಿಯಾನ ಆರಂಭಿಸಿದ್ದ ತಂಡವೇ ಇದೀಗ ಯುನೈಟೆಂಡ್ ಬೆಂಗಳೂರು ಎಂಬ ಫೋರಮ್ ಅಡಿಯಲ್ಲಿ ಬೆಂಗಳೂರಿನ ಕೆರೆಗಳ ಸುಧಾರಣೆಗೆ ಹೋರಾಟ ನಡೆಸಲಿದೆ.
ಬೆಂಗಳೂರು, ಮೇ 12: ಕರ್ನಾಟಕ ಸರ್ಕಾರ ಉದ್ದೇಶಿಸಿದ್ದ ಸ್ಟೀಲ್ ಬ್ರಿಡ್ಜ್ ಯೋಜನೆ ಬೆಂಗಳೂರಿಗರ ಹೋರಾಟದಿಂದಾಗಿ ಆರಂಭಕ್ಕೂ ಮುನ್ನವೇ ಮುರಿದುಬಿದ್ದಿರುವುದು ಹಳೇ ವಿಷಯ. ಸ್ಟೀಲ್ ಬ್ರಿಡ್ಜ್ ಬೇಡ (#SteelFlyoverBeda) ಅಭಿಯಾನ ಆರಂಭಿಸಿದ್ದ ತಂಡವೇ ಇದೀಗ ಯುನೈಟೆಂಡ್ ಬೆಂಗಳೂರು ಎಂಬ ಫೋರಮ್ ಅಡಿಯಲ್ಲಿ ಬೆಂಗಳೂರಿನ ಕೆರೆಗಳ ಸುಧಾರಣೆಗೆ ಹೋರಾಟ ನಡೆಸಲಿದೆ.
ಬೆಂಗಳೂರಿನ ಟೌನ್ ಹಾಲ್ ನಲ್ಲಿ ಮೇ 13 ಶನಿವಾರ ಈ ಕುರಿತು ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದ್ದು, ನಮ್ಮ ಕೆರೆಗಳನ್ನು ಮರುಪಡೆಯುವುದು ಮತ್ತು ಅವುಗಳ ರಕ್ಷಣೆ (Reclaiming and Protecting Our Lakes) ಎಂಬುದು ಈ ಕಾರ್ಯಕ್ರಮದಲ್ಲಿ ಚರ್ಚಿಸಲಿರುವ ವಿಷಯ.

ಸಿಟಿಜನ್ ಆಕ್ಷನ್ ಫೋರಮ್, ಸಿಟಿಜನ್ಸ್ ಫಾರ್ ಬೆಂಗಳೂರು, ನಮ್ಮ ಬೆಂಗಳೂರು ಫೌಂಡೇಶನ್, ಫಾರ್ವರ್ಡ್ ಫೌಂಡೇಶನ್, ಬೆಂಗಳೂರು ಎನ್ವಿರಾನ್ ಮೆಂಟ್ ಟ್ರಸ್ಟ್, ಪ್ರಜಾ ಮುಂತಾದ ನಾಗರಿಕ ಸಂಘಟನೆಗಳು ಯುನೈಟೆಂಡ್ ಬೆಂಗಳೂರು ಎಂಬ ಫೋರಮ್ ಅಡಿಯಲ್ಲಿ ಒಂದೆಡೆ ಸೇರಿ ಬೆಂಗಳೂರಿನ ಕೆರೆಗಳನ್ನು ಸಮಸ್ಯೆಯಿಂದ ಮುಕ್ತಗೊಳಿಸಲು ಪಣತೊಟ್ಟಿದ್ದಾರೆ.
ಮಾಲಿನ್ಯಗೊಂಡು, ಹಂತ ಹಂತವಾಗಿ ಸಾಯುತ್ತಿರುವ ಬೆಳ್ಳಂದೂರು ಕೆರೆ ಮತ್ತು ವರ್ತೂರು ಕೆರೆಯನ್ನು ಉಳಿಸುವುದಕ್ಕೆ ಸರ್ಕಾರದ ಸಹಕಾರ ನಿರೀಕ್ಷಿಸುತ್ತ ಕೂತರೆ ಪ್ರಯೋಜನವಿಲ್ಲ ಎಂಬುದನ್ನು ಮನಗಂಡಿರುವ ಬೆಂಗಳೂರಿನ ಜನರು ಸ್ವ ಇಚ್ಛೆಯಿಂದ ಕೆರೆಗಳ ಅಭಿವೃದ್ಧಿಯತ್ತ ಚಿಂತಿಸುತ್ತಿದ್ದಾರೆ.
ಸ್ಟೀಲ್ ಬ್ರಿಡ್ಜ್ ಬೇಡ ಅಭಿಯಾನದ ಪ್ರಮುಖ ನಾಯಕರಾಗಿದ್ದ ಎನ್.ಎಸ್.ಮುಕುಂದ, ಪ್ರಕಾಶ್ ಬೆಳವಾಡಿ, ನರೇಶ್ ನರಸಿಂಹ, ಯಲ್ಲಪ್ಪ ರೆಡ್ಡಿ ಮತ್ತು ಶ್ರೀಧರ್ ಪಬ್ಬಿಶೆಟ್ಟಿ ಸೇರಿ ಬೆಂಗಳೂರು ಕೆರೆಗಳನ್ನು ಉಳಿಸುವ ಅಭಿಯಾನದ ಕುರಿತು ಜನರಿಗೆ, ಬೇರೆ ಬೇರೆ ಸಂಸ್ಥೆಗಳಿಗೆ ಮಾಹಿತಿ ನೀಡಲಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೇಸ್ವಾಮಿ ಸಹ ಇದರ ಭಾಗವಾಗುವ ನಿರೀಕ್ಷೆ ಇದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications