ದಯವಿಟ್ಟು ತಬ್ಕೊತಿಯಾ ಅಂದ ಮಣಿಕಾಂತ ಆದ ಅಂದರ್
ಬೆಂಗಳೂರು, ಜನವರಿ 11 : "ನನ್ನನ್ನು ದಯವಿಟ್ಟು ತಬ್ಕೊತಿಯಾ" ಇಂಥ ಪ್ರಶ್ನೆಯನ್ನು ಏಕಾಂತದಲ್ಲಿ ಪ್ರೇಯಸಿಗೋ, ಪತ್ನಿಗೋ ಅಥವಾ ಆತ್ಮೀಯ ಸ್ನೇಹಿತೆಗೋ ಕೇಳಿದರೆ ಯಾವುದೇ ವಿವಾದ ಇರುತ್ತಿರಲಿಲ್ಲ. ಆದರೆ, ಶಾಲೆಗೆ ಹೋಗುವ ಹೆಣ್ಣು ಮಕ್ಕಳನ್ನು ಕೇಳಿದರೆ?
ಇಂಥದೊಂದು ಲಜ್ಜೆಗೇಡಿ ಕೆಲಸವನ್ನು ಕಾಮಾತುರವಿರುವ 22 ವರ್ಷದ ಯುವಕನೊಬ್ಬ ಇಬ್ಬರು ಅಪ್ರಾಪ್ತ ವಯಸ್ಕ ಶಾಲಾ ಬಾಲಕಿಯರಿಗೆ ಕೇಳಿ ಪೊಲೀಸರ ಆತಿಥ್ಯ ಸ್ವೀಕರಿಸುತ್ತಿದ್ದಾನೆ. ಪೊಲೀಸರು ಆತನ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊರಿಸಿ ಬಂಧಿಸಿದ್ದಾರೆ.[ಮದ್ದೂರಲ್ಲಿ ಕಾಮುಕನಿಗೆ ಬಿತ್ತು ಗೂಸಾ!]

ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳಿಗೆ ತಬ್ಬಿಕೊಳ್ಳಿರೆಂದು ಕೇಳಿ ಸಿಕ್ಕಿಬಿದ್ದವನ ಹೆಸರು ಮಣಿಕಾಂತ. ಆ ಹೆಣ್ಣುಮಕ್ಕಳ ಪೋಷಕರು ಪೊಲೀಸರಿಗೆ ಈತನ ನಡವಳಿಕೆಯನ್ನು ಪ್ರಶ್ನಿಸಿ ದೂರು ನೀಡಿದ ಮೇಲೆ ಮಹಾಲಕ್ಷ್ಮಿ ಲೇಔಟ್ ನಿವಾಸಿ ಮಣಿಕಾಂತನನ್ನು ಪೊಲೀಸರು ಬಂಧಿಸಿದರು.
ಇಬ್ಬರು ಶಾಲಾಬಾಲಕಿಯರನ್ನು ಪುಸಲಾಯಿಸಿ ತನ್ನನ್ನು ತಬ್ಬಿಕೊಳ್ಳಿರೆಂದು ಮಣಿಕಾಂತ ಕೇಳಿಕೊಂಡಿದ್ದಾನೆ. ಎಚ್ಚೆತ್ತುಕೊಂಡ ಬಾಲಕಿಯರು ಕೂಗಿಕೊಂಡಿದ್ದಾರೆ. ಕೂಡಲೆ ಆತ ಕಾಲಿಗೆ ಬುದ್ಧಿ ಹೇಳಲು ಯತ್ನಿಸಿದರೂ ಅಲರ್ಟ್ ಆಗಿದ್ದ ಸಾರ್ವಜನಿಕರು ಆತನನ್ನು ಹಿಡಿದು ಮನಸೋಇಚ್ಛೆ ಥಳಿಸಿದರು.[ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ ಮೈದುನ ನಾದಿನಿ ಜೋಡಿ]
ಹೇಗೋ ಆತ ಸಾರ್ವಜನಿಕರ ಹಿಡಿತದಿಂದ ತಪ್ಪಿಸಿಕೊಂಡಿದ್ದಾನೆ. ತೀವ್ರ ಆಘಾತ ಮತ್ತು ಆತಂಕಕ್ಕೀಡಾಗಿದ್ದ ಬಾಲಕಿಯರ ಪೋಷಕರು ವೈಯಾಲಿಕಾವಲ್ ಪೊಲೀಸರಿಗೆ ದೂರು ನೀಡಿದರು. ದೂರ ಬಂದ 5 ಗಂಟೆಯಲ್ಲಿ ಪೊಲೀಸರು ಕಾಮಿ ಮಣಿಕಾಂತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. (ಒನ್ಇಂಡಿಯಾ ಸುದ್ದಿ)
-
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು












Click it and Unblock the Notifications