1965 ಬ್ಯಾಚ್ ಬಿಎಂಎಸ್ ಹಳೇ ವಿದ್ಯಾರ್ಥಿಗಳ ಸುವರ್ಣ ಮಿಲನ
ಬೆಂಗಳೂರು, ಏ 15 : ಭಾರತದ ಅತ್ಯಂತ ಹಳೇ ಕಾಲೇಜುಗಳಲ್ಲಿ ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಒಂದು. ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿರುವ, ಮಾಡುತ್ತಿರುವ ಈ ಕಾಲೇಜು ಭಾರತದ, ಕರ್ನಾಟಕದ, ಬೆಂಗಳೂರು ದಕ್ಷಿಣದ, ಬಸವನಗುಡಿಯ ಹೆಮ್ಮೆ.
BMSCE ಶೈಕ್ಷಣಿಕ ಸಂಸ್ಥೆಗಳನ್ನು 1946 ಸ್ಥಾಪಿಸಿದವರು ಕೊಡುಗೈ ದಾನಿ ಬಿ ಎಂ ಶ್ರೀನಿವಾಸಯ್ಯನವರು. ಭಾರತದಲ್ಲಿ ಖಾಸಗಿ ವಲಯದಲ್ಲಿ ಸ್ಥಾಪನೆಯಾದ ಮೊದಲ ಕೆಲವು ಕಾಲೇಜುಗಳಲ್ಲಿ ಇದೂ ಒಂದು.
ಈ ಕಾಲೇಜಿನಲ್ಲಿ ಕಲಿತು ಬದುಕನ್ನು ರೂಪಿಸಿಕೊಂಡರ ಸಂಖ್ಯೆ ಅಪಾರ. ಜಗತ್ತಿನಾದ್ಯಂತ ಹರಡಿರುವ ಇಲ್ಲಿ ಕಲಿತ ವಿದ್ಯಾರ್ಥಿಗಳೇನಕರು ತಾವು ಓದಿದ ಕಾಲೇಜನ್ನು ಮರೆತಿಲ್ಲ. ಹಳೇ ವಿದ್ಯಾರ್ಥಿಗಳ ಸಂಘದ ಮೂಲಕ ಸಂಸ್ಥೆಯೊಂದಿಗೆ ಸಂಪರ್ಕ ಇಟ್ಟುಕೊಂಡು ಬಾಂಧವ್ಯ ವೃದ್ಧಿ ಮಾಡಿಕೊಳ್ಳುತ್ತ ಬಂದಿದ್ದಾರೆ. [ಅಮೆರಿಕಾದ ಕನ್ನಡಕಿಂಕರ ಕೃಷ್ಣ ಶಾಸ್ತ್ರಿ ಕಣ್ಮರೆ]

ಇಡೀ ಕಾಲೇಜಿಗೆ ಅನ್ವಯಿಸುವ ಎಲ್ಲ ಹಳೆಯ ವಿದ್ಯಾರ್ಥಿಗಳ ಸಂಘ ಒಂದು ಕಡೆಯಾದರೆ, ಪ್ರತಿಯೊಂದು ಬ್ಯಾಚ್ ಗೆ ಸೇರಿದ ವಿದ್ಯಾರ್ಥಿಗಳು ತಮ್ಮತಮ್ಮ ಶೈಕ್ಷಣಿಕ ವರ್ಷದ ಸಹಪಾಠಿಗಳನ್ನು ಒಂದುಗೂಡಿಸಿ ಸಂಘ ಕಟ್ಟಿಕೊಳ್ಳುವುದುಂಟು.
ಅಂಥ ಒಂದು ಕೂಟ, The Batch of 1965. ಈ ಬ್ಯಾಚಿನ ವಿದ್ಯಾರ್ಥಿ ಸಮೂಹಕ್ಕೆ ಇದು ಸುವರ್ಣ ವರ್ಷ. ಕಾಲೇಜು ದಿನಗಳನ್ನು ನೆನಪನ್ನು ಕಾಲೇಜಿನ ಆವರಣದಲ್ಲೇ ಸವಿಯುವ ಹಳೇ ವಿದ್ಯಾರ್ಥಿ ಮಿಲನಕ್ಕೆ ಬ್ಯಾಚ್ ಈಗ ಸಜ್ಜಾಗುತ್ತಿದೆ.
ಇದೇ ಮೇ 2 ರ ಶನಿವಾರ ಬಿಎಂಎಸ್ ಕಾಲೇಜಿನಲ್ಲಿ ಕಾರ್ಯಕ್ರಮ ಇದೆ. ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್ - ಮೂರೂ ವಿಭಾಗಗಳಲ್ಲಿ 1965 ರಲ್ಲಿ ಜತೆಯಾಗಿ ವಿದ್ಯಾಭ್ಯಾಸ ಮಾಡಿದ ಎಲ್ಲರನ್ನೂ ಆಹ್ವಾನಿಸಲಾಗಿದೆ.
ಅಂದು ಬೆಳಗ್ಗೆ 9 ರಿಂದ 1 ಗಂಟೆಯವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ, ಕಾಲೇಜಿನ ವಿವಿಧ ಭಾಗಗಳಿಗೆ ಭೇಟಿ, ಪ್ರಾಂಶುಪಾಲರಿಗೆ, ಪ್ರಾಧ್ಯಾಪಕರುಗಳಿಗೆ ಸನ್ಮಾನ. ಪದವಿ ಪಡೆದ ನಂತರದ 50 ವರ್ಷಗಳಲ್ಲಿ ಹಳೇ ವಿದ್ಯಾರ್ಥಿಗಳು ಸವೆಸಿದ ದಾರಿಯ ಮೆಲಕು, ಗ್ರೂಪ್ ಫೋಟೋ, ಸಹಭೋಜನ ಇರತ್ತೆ.
ನೀವು 1965 ಬ್ಯಾಚಿಗೆ ಸೇರಿದವರಾಗಿದ್ದರೆ ವಿದ್ಯಾರ್ಥಿ ಮಿಲನಕ್ಕೆ ನೊಂದಾಯಿಸಿಕೊಳ್ಳಿ ಎಂದು ಸಂಘದ ಮುಂದಾಳುಗಳು ಮನವಿ ಮಾಡಿದ್ದಾರೆ. ಬರೆಯಿರಿ ಅಥವಾ ಕರೆ ಮಾಡಿ ಮಾತನಾಡಿ -
ರಾಮಚಂದ್ರ ಮೂರ್ತಿ ( 9845009514 [email protected]) ಅಥವಾ
ಜಸಿಂತ ( 97410 39944 [email protected])
ಅಲುಮ್ನಿ ಫೇಸ್ ಬುಕ್ ಪುಟ ನೋಡಲು ಇಲ್ಲಿ ಕ್ಲಿಕ್ ಮಾಡಿ
ಕಾಲೇಜಿಗೆ ಹೋಗಲು ಗೂಗಲ್ ಮ್ಯಾಪ್
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications