'ಜೈ ಕಾಂಗ್ರೆಸ್' ಎಂದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್
ಬೆಂಗಳೂರು, ನವೆಂಬರ್ 27: ಕಾಂಗ್ರೆಸ್ ಅನ್ನು, ಕಾಂಗ್ರೆಸ್ ಮುಖಂಡರನ್ನು ಹೀನಾ-ಮಾನ ಬಯ್ಯುತ್ತಿರುವ ಎಂಟಿಬಿ ನಾಗರಾಜು ಅವರು ಇದ್ದಕ್ಕಿದ್ದಂತೆ ಇಂದು 'ಜೈ ಕಾಂಗ್ರೆಸ್' ಎಂದಿದ್ದಾರೆ.
ಬಿಜೆಪಿ ಪರ ಚುನಾವಣೆಗೆ ಸ್ಪರ್ಧಿಸಿರುವ ಎಂಟಿಬಿ ನಾಗರಾಜು, ಇಂದು ಚುನಾವಣಾ ಭಾಷಣ ಮಾಡುತ್ತಾ ಅಂತ್ಯದಲ್ಲಿ 'ಜೈ ಹಿಂದ್ ಜೈ ಕಾಂಗ್ರೆಸ್' ಎಂದು ಬಿಜೆಪಿಗರನ್ನೇ ಬೆಚ್ಚಿ ಬೀಳಿಸಿದ್ದಾರೆ.
ಮತ ಖರೀದಿಗೆ ಎಂಬಿಟಿ ನಾಗರಾಜ್ ದರಪಟ್ಟಿ ಹೀಗಿದೆ!
ನಂತರ ಎಚ್ಚೆತ್ತ ಎಂಟಿಬಿ, 'ಜೈ ಕಾಂಗ್ರೆಸ್ ಅಲ್ಲ ಜೈ ಬಿಜೆಪಿ', ಮೂರು ದಶಕದಿಂದ ಕಾಂಗ್ರೆಸ್ ನಲ್ಲಿ ಇದ್ದೆನಲ್ಲಾ ಅಭ್ಯಾಸಬಲದಿಂದ ಜೈ ಕಾಂಗ್ರೆಸ್ ಎಂದುಬಿಟ್ಟೆ ಎಂದು ಹೇಳಿದ್ದಾರೆ.
ಎಂಟಿಬಿ ನಾಗರಾಜು ಅವರು ಹೊಸಕೋಟೆ ಕ್ಷೇತ್ರ ಕಾಂಗ್ರೆಸ್ ನಿಂದ ಮೂರು ಬಾರಿ ಶಾಸಕರಾಗಿದ್ದರು. ಮೈತ್ರಿ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಉರುಳುವಂತೆ ಮಾಡಿದ್ದರು.
ಈಗ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದು, ಹೊಸಕೋಟೆ ಉಪ ಚುನಾವಣೆಗೆ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಈ ಬಾರಿ ಪಕ್ಷೇತರರಾಗಿ ಎಂಟಿಬಿ ನಾಗರಾಜು ಅವರನ್ನು ಎದುರಿಸುತ್ತಿದ್ದಾರೆ.
ಹೊಸಕೋಟೆ ಉಪಚುನಾವಣೆ: ಯಾವ ಜಾತಿಯ ಎಷ್ಟು ಮತದಾರರಿದ್ದಾರೆ?
ಕಾಂಗ್ರೆಸ್ ನಿಂದ ಪದ್ಮಾವತಿ ಸುರೇಶ್ ಅವರು ಸ್ಪರ್ಧಿಸಿದ್ದಾರೆ. ಹೆಬ್ಬಾಳ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಪತ್ನಿ ಇವರು.