Bengaluru Rent: ಬೆಂಗಳೂರಿನ ಬಾಡಿಗೆ ಮನೆ ಮಾಲೀಕರಿಂದ ಹೊಸ ಶಾಕ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನ ಹೆಚ್ಚಾಗಿ ಬಾಡಿಗೆ ಮನೆಗಳನ್ನೇ ಆಶ್ರಯಿಸುತ್ತಿದ್ದಾರೆ. ಇದನ್ನು ಮನಗಂಡ ಮನೆ ಮಾಲೀಕರು ಬಾಡಿಗೆದಾರರಿಗೆ ಹೊಸ ಆಘಾತ ನೀಡುತ್ತಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ. ಮೊದಲೇ ಬಾಡಿಗೆ ಮನೆಗಳು ಎಂದರೆ ಮಾಲೀಕರಿಂದ ಕಿರಿಕಿರಿ ಇರುತ್ತೆ ಎನ್ನುವ ದೂರು ಮೊದಲಿನಿಂದಲೂ ಇದೆ. ಇದೀಗ ಬಾಡಿಗೆ ಪಾವತಿದಾರರನ್ನು ಸುಲಿಗೆ ಮಾಡಲು ಮಾಲೀಕರು ಹೊಸ ದಾರಿ ಹಿಡಿದಿದ್ದಾರೆ ಎನ್ನಲಾಗಿದೆ. ಬಾಡಿಗೆದಾರರಿಗೆ ಇತ್ತೀಚೆಗೆ ಹೆಚ್ಚಾಗಿರುವ ದೊಡ್ಡ ಸಮಸ್ಯೆ ಏನು ಎಂಬ ವಿಚಾರ ಇಲ್ಲಿ ತಿಳಿಯಿರಿ..
ಸಾಮಾನ್ಯವಾಗಿ ಎಲ್ಲ ಕಡೆಯೂ ಮನೆಯನ್ನು ಬಾಡಿಗೆಗೆ ಪಡೆಯುವಾಗ ಒಂದಿಷ್ಟು ಅಡ್ವಾನ್ಸ್, ಭದ್ರತಾ ಠೇವಣಿ ಪಡೆಯುತ್ತಾರೆ. ಕೆಲ ಮಾಲೀಕರು ತಿಂಗಳ ಬಾಡಿಗೆಯ ಐದು ಪಟ್ಟು, ಹತ್ತು ಪಟ್ಟು ಹಣವನ್ನು ಮುಂಗಡವಾಗಿ ಪಡೆಯುತ್ತಾರೆ. ಬಳಿಕ ಮನೆ ಖಾಲಿ ಮಾಡುವಾಗ ವಾಪಸ್ ಕೊಡುತ್ತಿದ್ದವರು ಇದೀಗ ತಮ್ಮ ವರಸೆ ಬದಲಿಸಿದ್ದಾರೆ ಎಂದು ದೂರುಗಳು ಕೇಳಿಬರುತ್ತಿವೆ. ಈ ಹಣ ವಾಪಸ್ ನೀಡುವ ಸಂದರ್ಭದಲ್ಲಿ ಹೊಸ ಕಾರಣವೊಂದನ್ನು ನೀಡಿ ಸುಲಿಗೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿ ಮನೆ ಮಾಲೀಕರು ಆಸ್ತಿಯನ್ನು ಖಾಲಿ ಮಾಡುವಾಗ ಪೇಂಟಿಂಗ್ (ಬಣ್ಣ ಬಳಿಯಲು) ಶುಲ್ಕವಾಗಿ ಭದ್ರತಾ ಠೇವಣಿಯಿಂದ ಒಂದು ತಿಂಗಳ ಬಾಡಿಗೆಗೆ ಸಮಾನವಾದ ಹಣವನ್ನು ಕಡಿತಗೊಳಿಸುತ್ತಿದ್ದಾರೆ ಎಂದು ಬಾಡಿಗೆದಾರರು ಅಳಲು ತೋಡಿಕೊಂಡಿದ್ದಾರೆ. ನಗರದ ಬಾಡಿಗೆ ವಸತಿ ಕ್ಷೇತ್ರದಲ್ಲಿ ಮೊದಲಿನಿಂದಲೂ ರೂಢಿಯಲ್ಲಿರುವ ಈ ಪದ್ಧತಿಗೆ ಇದೀಗ ಭಾರಿ ವಿರೋಧವೂ ವ್ಯಕ್ತವಾಗಿದೆ.
ನಗರದಲ್ಲಿನ ಹೆಚ್ಚಿನ ಬಾಡಿಗೆ ಒಪ್ಪಂದಗಳಲ್ಲಿ ಮನೆ ಖಾಲಿ ಮಾಡುವ ಸಮಯದಲ್ಲಿ ಆವರಣವನ್ನು ಪುನಃ ಪೇಂಟಿಂಗ್ ಮಾಡಲು ಅಥವಾ ಸ್ಥಿರ ಠೇವಣಿ ಕಡಿತಕ್ಕೆ ಒಳಗಾಗಲು ಬಾಡಿಗೆದಾರರು ಜವಾಬ್ದಾರರಾಗಿರುತ್ತಾರೆ ಎಂಬ ಷರತ್ತನ್ನು ವಿಧಿಸಲಾಗುತ್ತಿದೆ. ಇದನ್ನು ಕೆಲವರು ಮೊದಲೇ ಬಾಡಿಗೆದಾರರಿಗೆ ವಿವರಿಸುತ್ತಾರೆ. ಬಾಡಿಗೆದಾರರು ಮನೆ ಖಾಲಿ ಮಾಡಿದ ನಂತರ ಪೇಂಟಿಂಗ್ ಶುಲ್ಕಕ್ಕಾಗಿ ಒಂದು ತಿಂಗಳ ಬಾಡಿಗೆ ಹಣವನ್ನು ಉಳಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಡಿಗೆದಾರರು ಮನೆ ಖಾಲಿ ಮಾಡುವ ಸಮಯದಲ್ಲಿ ಪೇಂಟಿಂಗ್ ಶುಲ್ಕಕ್ಕಾಗಿ ಒಂದು ತಿಂಗಳ ಬಾಡಿಗೆಯನ್ನು ಪಾವತಿಸಲೇಬೇಕು. ಇಲ್ಲದಿದ್ರೆ ಆ ಹಣವನ್ನು ಭದ್ರತಾ ಠೇವಣಿಯಿಂದ ಕಡಿತಗೊಳಿಸಲಾಗುತ್ತದೆ ಎಂದು ಬಹುತೇಕ ಅಪಾರ್ಟ್ಮೆಂಟ್ನ ಬಾಡಿಗೆ ಒಪ್ಪಂದಗಳಲ್ಲಿ ಉಲ್ಲೇಖಿಸಲಾಗುತ್ತಿದೆ. ಆದರೆ ಇದನ್ನು ಸುಲಿಗೆ ಎಂದು ಬಾಡಿಗೆದಾರರು ಕರೆದಿದ್ದಾರೆ.
ಬೆಂಗಳೂರಿನ ಮನೆ ಮಾಲೀಕರು ಮುಂದೆ ಬಾಡಿಗೆಗೆ ಬರುವ ನಿವಾಸಿಗಳಿಗೆ ಮನೆ ನಿರ್ವಹಿಸಲು ಹಾಗೂ ಅವರಿಗೆ ವ್ಯವಸ್ಥೆ ಮಾಡಲು ಈ ಹಣ ಕಡಿತ ಅಗತ್ಯ ಎಂದು ವಾದಿಸುತ್ತಿದ್ದಾರೆ. ಇತ್ತೀಚೆಗೆ ಎಲ್ಲವೂ ದುಬಾರಿಯಾಗಿ ವೆಚ್ಚಗಳು ಹೆಚ್ಚುತ್ತಿರುವ ಕಾರಣ ಒಂದು ತಿಂಗಳ ಬಾಡಿಗೆ ಮೊತ್ತ ಕಡಿತ ಮಾಡಿಕೊಳ್ಳುವುದು ನ್ಯಾಯಯುತವಾಗಿದೆ ಎಂದೂ ಹೇಳುತ್ತಿದ್ದಾರೆ.
ಸಣ್ಣ ಬಾಡಿಗೆ ಮನೆಗಳು ಮಾತ್ರವಲ್ಲದೆ ಬಾಡಿಗೆ ಅಪಾರ್ಟ್ಮೆಂಟ್, ಫ್ಲ್ಯಾಟ್ಗಳು, ಐಷಾರಾಮಿ ಅಪಾರ್ಟ್ಮೆಂಟ್ಗಳ ಮಾಲೀಕರು ಕೂಡ ಇದೇ ನಿಯಮವನ್ನು ಪಾಲಿಸುತ್ತಿದ್ದಾರೆ. ಆದರೆ ಇದು ಬಾಡಿಗೆದಾರರನ್ನು ಸುಲಿಗೆ ಮಾಡುವ ಕ್ರಮ ಎಂದು ಎಲ್ಲೆಡೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications