ವರಮಹಾಲಕ್ಷ್ಮಿ ಹಬ್ಬ: ಹೂವಿನ ರೇಟು ಕೇಳಿ ಹೌಹಾರಬೇಡಿ!
ಬೆಂಗಳೂರು, ಆಗಸ್ಟ್ 3: ಉದ್ಯಾನ ನಗರಿಯ ಮಾರುಕಟ್ಟೆಗಳೀಗ ಜಾತ್ರೆಯ ಸಂಭ್ರಮದಲ್ಲಿರುವಷ್ಟು ಸಿಂಗರಿಸಿಕೊಂಡಿವೆ. ಆಗಸ್ಟ್ 4 ರ ವರಮಹಾಲಕ್ಷ್ಮಿ ಹಬ್ಬಕ್ಕೆ ಮಾರಾಟವಂತೂ ಭರದಿಂದ ಸಾಗುತ್ತಿದೆ. ವ್ಯಾಪಾರಿಗಳಿಗೆ ಆದಾಯ ಗಳಿಸೋಕೆ ಇದೊಂದು ಸೀಸನ್ ಆಗಿರುವುದರಿಂದ ಅವರು ಹೇಳಿದ್ದೇ ರೇಟು. ಹಬ್ಬ ಅನ್ನೋ ಕಾರಣಕ್ಕೆ ರೇಟು ಎಷ್ಟಾದರೂ ಸರಿ, ಕೊಳ್ಳುವವರಿಗೇನೂ ಕೊರತೆಯಿಲ್ಲ. ಒಟ್ಟಿನಲ್ಲಿ ವ್ಯಾಪಾರಿಗಳಿಗಂತೂ ವರಮಹಾಲಕ್ಷ್ಮಿ ಹಬ್ಬ ಸಾಕ್ಷಾತ್ 'ಲಕ್ಷ್ಮಿ' ಯ ಆಗಮನ ಎಂಬುದಂತೂ ಸುಳ್ಳಲ್ಲ.
ಎಲ್ಲೆಲ್ಲೂ ತೆಂಗಿನ ಕಾಯಿ, ಹೂವು-ಹಣ್ಣುಗಳು, ಬಾಳೆಗಿಡಗಳು, ವೀಳ್ಯದೆಲೆ, ತರಹೇವಾರಿ ಹಣ್ಣು-ತರಕಾರಿ... ಈ ಎಲ್ಲವುಗಳೊಟ್ಟಿಗೆ ಬೆಲೆ ಏರಿಕೆಯಿದ್ದರೂ ಮಾರುಕಟ್ಟೆಯಲ್ಲಿ ಮುಗಿಬಿದ್ದು ಕೊಳ್ಳುವ ಜನರು! ಇದು ಎಲ್ಲ ಮಾರುಕಟ್ಟೆಯಲ್ಲಿ ಕಂಡುಬರುತ್ತಿರುವ ದೃಶ್ಯ.
ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದು ಕೆ.ಜಿ.ಕನಕಾಂಬರಕ್ಕೆ 1600 ರೂ. ಹೇಳಲಾಗುತ್ತಿದೆ! ಮಲ್ಲಿಗೆ ಹಾರಕ್ಕೆ ಕನಿಷ್ಠ 300 ರೂ. ನಿಂದ ಗರಿಷ್ಠ 500, 600 ರವರೆಗೂ ಬೆಲೆ ಹೇಳಲಾಗುತ್ತಿದೆ.
ಹಬ್ಬ ಅಂದಮೇಲೆ ಹೂವು ಬೇಕೇ ಬೇಕು. ಬೆಲೆ ಎಷ್ಟಾದರೂ ಸರಿ, ಒಂದು ದಿನಕ್ಕೆ ತಾನೇ? ಎಂದುಕೊಂಡು ಖರೀದಿಸುವವರಿಗೇನು ಕಡಿಮೆಯಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ವ್ಯಾಪಾರಿಗಳು ಹೂವುಗಳ ನಿಜವಾದ ಬೆಲೆಗಿಂತ ಮೂರು, ನಾಲ್ಕು ಪಟ್ಟು ಹೆಚ್ಚು ಬೆಲೆ ನಿಗದಿಪಡಿಸುತ್ತಿದ್ದಾರೆ.

ಹೂವಿನ ದರ ಕೇಳಿ ಹೌಹಾರಬೇಡಿ!
ಸೇವಂತಿಗೆ ಹೂವು ಕೆಜಿಗೆ 400 ರೂ, ಗುಲಾಬಿ ಮತ್ತು ಸುಗಂಧರಾಜ ಬಿಡಿ ಹೂವು ಕೆಜಿಗೆ 200-250, ತಾವರೆ ಹೂವು ಜೋಡಿಗೆ 50-75 ರೂ., ಕನಕಾಂಬರ 1400-1600 ರೂ, ಮಲ್ಲಿಗೆ ಹಾರಕ್ಕೆ 300-500 ರೂ.

ತೆಂಗಿನ ಕಾಯಿಯೂ ತುಟ್ಟಿ
ಮೊದಲೇ ತುಟ್ಟಿಯಾಗಿದ್ದ ತೆಂಗಿನ ಕಾಯಿ ಹಬ್ಬದ ಪ್ರಯುಕ್ತ ಮತ್ತಷ್ಟು ತುಟ್ಟಿಯಾಗಿದೆ. ಚಿಕ್ಕ ತೆಂಗಿನ ಕಾಯಿಗೂ 20 ರಿಂದ 30 ರೂ ತೆರಬೇಕಾದ ಪರಿಸ್ಥಿತಿಯಿದೆ!

ಬಾಳೆ ಎಲೆ- ವೀಳ್ಯದೆಲೆ
ಒಂದು ಬಾಳೆ ಎಲೆಗೆ 5 ರಿಂದ 10 ರೂ. ಹೇಳಲಾಗುತ್ತಿದೆ! ವೀಳ್ಯದೆಲೆ ಕಟ್ಟಿಗೆ 80-85 ರೂ! ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಎರಡೂ ಅಗತ್ಯವಾಗಿ ಬೇಕಿರುವುದರಿಂದ ಎಷ್ಟು ಬೆಲೆ ಹೇಳಿದರೂ ಕೊಳ್ಳದೆ ವಿಧಿಯಿಲ್ಲ!

ಏಲಕ್ಕಿ ಬಾಳೆ ಹಣ್ಣಿನ ಬೆಲೆ ಕೇಳಬೇಡಿ!
ಹಬ್ಬಕ್ಕೆ ಅತ್ಯಗತ್ಯವಾಗಿ ಬೇಕಾದ ಏಲಕ್ಕಿಬಾಳೆಹಣ್ಣಿನ ಬೆಲೆ ಮಾತ್ರ ಕೇಳುವಂತಿಲ್ಲ. ಕೆ.ಜಿಗೆ 60 ರೂ. ಇದ್ದ ಬೆಲೆ ಈಗ 100 ರೂ.ಆಗಿದೆ. ಸಪೋಟ 66 ರೂ., ಮೋಸಂಬಿ 70 ರೂ., ಮಾವು 60ರೂ. ಆಗಿದೆ.

ತರಕಾರಿ ಬೆಲೆ ಪರವಾಗಿಲ್ಲ
ಹಣ್ಣು-ಹೂವಿಗೆ ಹೋಲಿಸಿದರೆ ತರಕಾರಿ ಬೆಲೆ ಜಾಸ್ತಿಯಾಗಿಲ್ಲ. ಮೊದಲೇ ತರಕಾರಿ ಬೆಲೆ ಸ್ವಲ್ಪ ಜಾಸ್ತಿಯೇ ಇದ್ದಿದ್ದರಿಂದ ಹಬ್ಬಕ್ಕಾಗಿ ಹೆಚ್ಚಾದಂತೆ ಅನ್ನಿಸುತ್ತಿಲ್ಲ. ಕ್ಯಾರೆಟ್ ಕೆಜಿ ಗೆ 60 ರೂ., ಟೊಮ್ಯಾಟೋ ಸ್ವಲ್ಪ ಕಡದಿಮೆಯಾಗಿ, ಕೆಜಿಗೆ 58 ರೂ. ಆಗಿದೆ. ಡಬಲ್ ಬೀನ್ಸ್ ಬೆಲೆ ಮಾತ್ರ ಕೆಜಿಗೆ 150 ರೂ. ಆಗಿದೆ.
-
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ












Click it and Unblock the Notifications